ಕೆಮಿಕಲ್ ದಾಳಿ ಸಂಚು ವಿಫಲ, ಎಟಿಎಸ್ ಬಲೆಗೆ ಬಿದ್ದ ದುಷ್ಕರ್ಮಿ
ಮುಂಬೈ, ಜನವರಿ 28: ಮುಂಬೈನಲ್ಲಿ ಕೆಮಿಕಲ್ ಬಾಂಬ್ ದಾಳಿ ನಡೆಸಲು ಉದ್ದೇಶಿಸಿ, ಸಂಚು ರೂಪಿಸಿದ್ದ ಓರ್ವ ವ್ಯಕ್ತಿಯನ್ನು ಮಹಾರಾಷ್ಟ್ರದ ಉಗ್ರ ನಿಗ್ರಹ ದಳ(ಎಟಿಎಸ್)ದವರು ಬಂಧಿಸಿ, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಒನ್ಇಂಡಿಯಾ ಪ್ರತಿನಿಧಿ ಜತೆ ಈ ಬಗ್ಗೆ ಮಾತನಾಡಿದ ಎಟಿಎಸ್ ಅಧಿಕಾರಿಯೊಬ್ಬರು, ಗಣತಂತ್ರದಿನಾಚರಣೆ ಸಮಾರಂಭವನ್ನು ಗುರಿಯನ್ನಾಗಿಸಿಕೊಂಡು ಮುಂಬೈ ಸೇರಿದಂತೆ ವಿವಿಧೆಡೆಗಳಲ್ಲಿ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿದ್ದರು.
ಥಾಣೆ ಸಮೀಪದಲ್ಲಿ ಸಿಕ್ಕಿಬಿದ್ದ ಬಂಧಿತನ ಬಳಿ ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್, ಟ್ಯಾಬ್ಲೆಟ್, ಪೆನ್ ಡ್ರೈವ್, ರೂಟರ್, ಮೊಬೈಲ್ ಫೋನ್ ಹಾಗೂ ಹಲವು ಡೈರಿ ಮುಂತಾದ ವಸ್ತುಗಳನ್ನು ಆತನ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದರು.

ಇದಕ್ಕೂ ಜನವರಿ 21-22ರಂದು ಮುನ್ನ ಔರಂಗಾಬಾದ್ ಹಾಗೂ ಥಾಣೆಯಿಂದ ಅಪ್ರಾಪ್ತ ವಯಸ್ಕ ಸೇರಿದಂತೆ ಎಂಟು ಮಂದಿಯನ್ನು ಎಟಿಎಸ್ ಸಿಬ್ಬಂದಿಗಳು ಬಂಧಿಸಿದ್ದರು. ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 120ಬಿ, ಬಾಂಬೆ ಪೊಲೀಸ್ ಕಾಯಿದೆ ಅನ್ವಯ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.












Click it and Unblock the Notifications