ಇನ್ಮುಂದೆ ಹಾರ್ನ್ ಮಾಡಿದ್ರೆ ಸಿಗ್ನಲ್ ಓಪನ್ ಆಗೋದೆ ಇಲ್ಲ
ಮುಂಬೈ, ಫೆಬ್ರವರಿ 1: ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಮುಂಬೈನಲ್ಲಿ ಹೊಸ ಮಾದರಿ ಸಿಗ್ನಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಟ್ರಾಫಿಕ್ ಸಿಗ್ನಲ್ಗಳಲ್ಲಿ ವಾಹನಗಳು ನಿಂತಾಗ, ಮುಂದಿರುವ ವಾಹನಗಳು ಬೇಗ ಸಾಗಲಿ ಎಂಬ ಉದ್ದೇಶದಿಂದ ಹಿಂದಿರುವ ವಾಹನಗಳ ಸವಾರರು ಜೋರಾಗಿ ಹಾರ್ನ್ ಮಾಡುವುದು ನಗರಗಳಲ್ಲಿ ಸಾಮಾನ್ಯವಾಗಿದೆ.
ಆದರೆ ಮುಂಬೈನಲ್ಲಿ ಈ ರೀತಿ ಮಾಡಿದರೆ ಏನಾಗುತ್ತೆ ಗೊತ್ತಾ, ಟ್ರಾಫಿಕ್ ಸಿಗ್ನಲ್ ನ ಕೆಂಪು ದೀಪವು ಆಫ್ ಆಗಿ ಹಸಿರು ಬಣ್ಣದ ದೀಪ ಆನ್ ಆಗುವುದೇ ಇಲ್ಲ.

ಹೌದು ಶಬ್ದ ಮಾಲಿನ್ಯ ತಡೆಯಲು ಇಂತಹ ವಿನೂತನ ವ್ಯವಸ್ಥೆಯನ್ನು ಮುಂಬೈ ಪೊಲೀಸರು ಅಳವಡಿಸಿದ್ದಾರೆ. ಈಗಾಗಲೇ 1 ದಿನ ಇದನ್ನು ಪ್ರಾಯೋಗಿಕವಾಗಿ ಹಲವು ಸಿಗ್ನಲ್ಗಳಲ್ಲಿ ಅಳವಡಿಸಲಾಗಿದೆ.
ಇಲ್ಲಿ ವಾಹನಗಳ ಶಬ್ದ 80 ಡೆಸಿಬಲ್ಗಿಂತ ಹೆಚ್ಚಾದಲ್ಲಿ ಆ ಬದಿಯ ಟ್ರಾಫಿಕ್ ಸಿಗ್ನಲ್ನ ಹಸಿರು ದೀಪವು ಆನ್ ಆಗುವುದೇ ಇಲ್ಲ. ಹಾರ್ನ್ ಶಬ್ದವು 85 ಡೆಸಿಬಲ್ಗಿಂತ ಕಡಿಮೆ ಆದಲ್ಲಿ ಮಾತ್ರ ಹಸಿರು ಲೈಟ್ ಆನ್ ಆಗುತ್ತದೆ.
ಅನೇಕ ಟ್ರಾಫಿಕ್ ಸಿಗ್ನಲ್ ಡೆಸಿಬಲ್ ಮೀಟರ್ಗಳಲ್ಲಿ ಅಳವಡಿಸಲಾಗಿದ್ದು, ಅವುಗಳನ್ನು ಸಿಗ್ನಲ್ ದೀಪಕ್ಕೆ ಸಂಯೋಜಿಸಲಾಗಿದೆ.

ಸಿಎಸ್ಎಂಟಿ, ಮರೈನ್ ಡ್ರೈವ್, ಪೆದ್ದಾರ್ ರೋಡ್, ಹಿಂದ್ ಮಾತಾ ಹಾಗೂ ಬಾಂದ್ರಾದಲ್ಲಿ ಪೊಲೀಸರು ಈಗ ಈ ತಂತ್ರಜ್ಞಾನ ಅಳವಡಿಸಿದ್ದಾರೆ.ಪ್ರಾಯೋಗಿಕವಾಗಿ ಇದರ ಪರೀಕ್ಷೆ ನಡೆದ ದಿನ ಹಲವು ಸಿಗ್ನಲ್ಗಳಲ್ಲಿ ಕೆಂಪು ದೀಪ ಹಸಿರಾಗಿ ಪರಿವರ್ತನೆ ಆಗದೆ ವಾಹನ ಸವಾರರು ಪರದಾಡಿದರು.
ಬೆಂಗಳೂರಲ್ಲಿ ಕೂಡ ಇಂಥದ್ದೇ ವ್ಯವಸ್ಥೆ ಜಾರಿಗೆ ಬಂದರೆ ಶಬ್ದ ಮಾಲಿನ್ಯ ಕೊಂಚ ಕಡಿಮೆಯಾಗಬಹುದು.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications