ಮುಂಬೈ: ಬಾಲಿವುಡ್ ದಂತಕತೆ ರಾಜ್ ಕಪೂರ್ ಸ್ಟುಡಿಯೋಸ್ ನಲ್ಲಿ ಬೆಂಕಿ ಅವಘಡ
ಮುಂಬೈನ ಆರ್ ಕೆ ಸ್ಟುಡಿಯೋದಲ್ಲಿ ಬೆಂಕಿ ದುರಂತ. ಸ್ಟುಡಿಯೋ ಖಾಲಿ ಇದ್ದಿದ್ದರಿಂದ ಯಾವುದೇ ಸಾವು-ನೋವು ಆಗಿಲ್ಲ.
ಮುಂಬೈ, ಸೆಪ್ಟೆಂಬರ್ 16: ಇಲ್ಲಿನ ಚೆಂಬೂರ್ ಪ್ರಾಂತ್ಯದಲ್ಲಿರುವ ರಾಜ್ ಕಪೂರ್ ಸ್ಟುಡಿಯೋದಲ್ಲಿ ಭಾರೀ ಪ್ರಮಾಣದ ಶನಿವಾರ ಬೆಂಕಿ ಅವಘಡ ಸಂಭವಿಸಿದೆ.
ಮಧ್ಯಾಹ್ನ ಸುಮಾರು 2:20ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಸುದ್ದಿ ತಿಳಿದ ತಕ್ಷಣವೇ ಚೆಂಬೂರು ಪ್ರಾಂತ್ಯದಲ್ಲಿರುವ ಅಗ್ನಿಶಾಮಕ ದಳವು ಆರು ಫೈರ್ ಇಂಜಿನ್ ಗಳನ್ನು ಸ್ಥಳಕ್ಕೆ ರವಾನಿಸಿತ್ತು.

ಇತ್ತೀಚೆಗೆ, ಖ್ಯಾತ ಟಿವಿ ರಿಯಾಲಿಟಿ ಶೋ ಆದ 'ಸೂಪರ್ ಡ್ಯಾನ್ಸರ್'ನ ಚಿತ್ರೀಕರಣ ಇದೇ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಶನಿವಾರ ಸೂಪರ್ ಡ್ಯಾನ್ಸರ್ ಚಿತ್ರೀಕರಣಕ್ಕೆ ಬಿಡುವು ನೀಡಿದ್ದರಿಂದಾಗಿ, ಸ್ಟುಡಿಯೋದಲ್ಲಿ ಯಾವ ಕಲಾವಿದರು, ತಂತ್ರಜ್ಞರಾಗಲೀ ಇರಲಿಲ್ಲ. ಹಾಗಾಗಿ, ಯಾವುದೇ ಸಾವು-ನೋವು ಸಂಭವಿಸಿಲ್ಲ.
ಸಂಜೆ 4:30ರ ಹೊತ್ತಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಕೊಂಚ ಮಟ್ಟಿಗೆ ಯಶಸ್ವಿಯಾಗಿದ್ದರೆಂದು ಮೂಲಗಳು ತಿಳಿಸಿವೆ.

ಆರ್.ಕೆ. ಸ್ಟುಡಿಯೋ ಹಿನ್ನೆಲೆ:
ಹಿಂದಿ ಚಿತ್ರರಂಗದ ಕನಸುಗಾರನೆಂದೇ ಖ್ಯಾತರಾಗಿದ್ದ ರಾಜ್ ಕಪೂರ್ ಅವರು, 1945ರಲ್ಲಿ ಮುಂಬೈನ ಚೆಂಬೂರು ಪ್ರಾಂತ್ಯದಲ್ಲಿ ಈ ಸ್ಟುಡಿಯೋವನ್ನು ನಿರ್ಮಿಸಿದರು. 1988ರ ಜೂನ್ ನಲ್ಲಿ ಅವರ ನಿಧನಾ ನಂತರ, ಈ ಸ್ಟುಡಿಯೋಕ್ಕೆ ಅವರ ಹೆಸರನ್ನೇ ಇಡಲಾಗಿದೆ. ಹೀಗೆ, ಸುಮಾರು 72 ವರ್ಷಗಳ ಭವ್ಯ ಪರಂಪರೆಯನ್ನು ಹೊಂದಿರುವ ಈ ಸ್ಟುಡಿಯೋದ ಮೂಲಕ, ಆರ್.ಕೆ. ಫಿಲಂಸ್ ಎಂಬ ತಮ್ಮ ಸ್ವಂತ ಬ್ಯಾನರ್ ನಲ್ಲಿ ರಾಜ್ ಕಪೂರ್ ಅವರು, ಜನಪ್ರಿಯ ಚಿತ್ರಗಳಾದ ಆಗ್, ಬರ್ಸಾತ್ ಸೇರಿದಂತೆ ಮುಂತಾದ ಚಿತ್ರಗಳನ್ನು ತಯಾರಿಸಿದ್ದರು.

ಅವರ ನಿಧನಾ ನಂತರ, ಅವರ ಮಕ್ಕಳಾದ ರಿಷಿ ಕಪೂರ್, ರಾಜೀವ್ ಕಪೂರ್, ರೀತು ಕಪೂರ್ ಹಾಗೂ ರಣಧೀರ್ ಕಪೂರ್ ಸ್ಟುಡಿಯೋ ಹಾಗೂ ಆರ್.ಕೆ. ಫಿಲಂಸ್ ಬ್ಯಾನರ್ ಅನ್ನು ಮುನ್ನಡೆಸಿದರು. 1999ರಲ್ಲಿ ನಿರ್ಮಾಣವಾದ ಆ ಅಬ್ ಲೌಟ್ ಚಲೇ ಚಿತ್ರ ಆರ್.ಕೆ. ಸ್ಟುಡಿಯೋದಿಂದ ಹೊರಬಂದ ಕೊನೆಯ ಚಿತ್ರ. ಆ ಚಿತ್ರದ ನಂತರ, ಆರ್.ಕೆ. ಫಿಲಂಸ್ ಸಂಸ್ಥೆಯಿಂದ ಚಿತ್ರ ನಿರ್ಮಾಣ ನಿಂತು ಹೋಗಿದೆ. ಇತ್ತೀಚಿನ ವರ್ಷಗಳಲ್ಲಿ, ಆರ್.ಕೆ. ಸ್ಟುಡಿಯೋವನ್ನು ಟಿವಿ ಷೋಗಳಿಗೆ, ಇತರ ಚಿತ್ರಗಳ ಷೂಟಿಂಗ್ ಗಳಿಗೆ ಬಾಡಿಗೆ ನೀಡಲಾಗುತ್ತಿತ್ತು.
-
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei












Click it and Unblock the Notifications