ಶಾರುಖ್ ಬಿಜೆಪಿ ಸೇರಿದರೆ ಡ್ರಗ್ಸ್ ಸಕ್ಕರೆ ಪುಡಿಯಾಗುತ್ತದೆ: ಛಗನ್ ಭುಜ್ಬಲ್
ಮುಂಬೈ ಅಕ್ಟೋಬರ್ 24: ಮಹಾರಾಷ್ಟ್ರ ಸಚಿವ ಛಗನ್ ಭುಜ್ಬಾಲ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ಕೇಸರಿ ಪಕ್ಷಕ್ಕೆ ಸೇರಿಕೊಂಡರೆ "ಡ್ರಗ್ಸ್ ಸಕ್ಕರೆ ಪೌಡರ್ ಆಗುತ್ತದೆ" ಎಂದು ವ್ಯಂಗ್ಯವಾಡಿದ್ದಾರೆ.
ಶನಿವಾರ ಭುಜ್ಬಲ್ ರಾಜ್ಯದ ಬೀಡ್ ಜಿಲ್ಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದರು. ಇದರಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಆರೋಪಿಯಾಗಿದ್ದಾನೆ. ಮುಂಬೈ ಕ್ರೂಸ್ ಡ್ರಗ್ ಪ್ರಕರಣದಲ್ಲಿ ಆರ್ಯನ್ ಖಾನ್ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ನಿಂದ ಬಂಧನಕ್ಕೊಳಗಾಗಿದ್ದಾನೆ.
'ಆತ ಮಂತ್ರಿ, ನಾನು ಸರ್ಕಾರಿ ಉದ್ಯೋಗಿ': ಸಮೀರ್ ವಾಂಖೆಡೆ
ಆತನಿಗೆ ಜಾಮೀನು ಪಡೆಯಲು ಶಾರುಖ್ ಖಾನ್ ಹರಸಾಹಸ ಪಡುತ್ತಿದ್ದು, ಈಗಾಗಲೇ ಎರಡು ಬಾರಿ ಆತನ ಜಾಮೀನು ಅರ್ಜಿಯನ್ನು ಕೊರ್ಟ್ ತಿರಸ್ಕರಿಸಿದೆ. ಎನ್ಡಿಪಿಎಸ್ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಆರ್ಯನ್ ಖಾನ್ (23) ಸ್ನೇಹಿತ ಅರ್ಬಾಜ್ ಮರ್ಚೆಂಟ್ (26) ಮತ್ತು ಫ್ಯಾಶನ್ ಮಾಡೆಲ್ ಮುನ್ಮುನ್ ಧಮೇಚಾ (28)ಮುಂಬೈನ ಆರ್ಥರ್ ರಸ್ತೆ ಜೈಲಿನಲ್ಲಿ ಇದ್ದಾರೆ.
ಗುಜರಾತ್ನ ಮಂದ್ರಾ ಬಂದರಿನಲ್ಲಿ ವಶಪಡಿಸಿಕೊಂಡ 3,000 ಕೆಜಿ ಹೆರಾಯಿನ್ ಪ್ರಕರಣದ ತನಿಖೆ ನಡೆಸುವ ಬದಲು, ಎನ್ಸಿಬಿ ಶಾರೂಖ್ ಖಾನ್ನನ್ನು ಬೇಟೆಯಾಡುತ್ತಿದೆ ಎಂದು ಹಿರಿಯ ಎನ್ಸಿಪಿ ನಾಯಕ ಆರೋಪಿಸಿದ್ದಾರೆ. "ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಸಕ್ಕರೆ ಪುಡಿಯಾಗುತ್ತದೆ" ಎಂದು ಅವರು ವ್ಯಂಗ್ಯವಾಡಿದರು.
ಆರ್ಯನ್ ಖಾನ್ ಅವರನ್ನು ಮುಂಬೈ ಕ್ರೂಸ್ ಡ್ರಗ್ ಪ್ರಕರಣದಲ್ಲಿ ಅಕ್ಟೋಬರ್ 3 ರಂದು ಎನ್ಸಿಬಿ ವಶಕ್ಕೆ ಪಡೆದುಕೊಂಡಿತು. ಹೀಗಾಗಿ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಮಗನಿಗೆ ಜಾಮೀನು ಕೊಡಿಸಲು ಹರಸಾಹಸವೇ ಪಡುತ್ತಿದ್ದಾರೆ. ಈಗಾಗಲೇ ಎರಡು ಬಾರಿ ಆರ್ಯನ್ ಖಾನ್ಗೆ ಜಾಮೀನು ವಜಾಗೊಂಡಿದೆ.
ಹೀಗಾಗಿ ಪುತ್ರ ಆರ್ಯನ್ ನನ್ನು ನೋಡಲು ಶಾರುಖ್ ಖಾನ್ ಮೊನ್ನೆಯಷ್ಟೇ ಆರ್ಥರ್ ರಸ್ತೆ ಜೈಲಿಗೆ ಭೇಟಿ ನೀಡಿದರು. ಜೈಲಿನ ಮೀಟಿಂಗ್ ಹಾಲ್ನಲ್ಲಿ ಕ್ಯೂಬಿಕಲ್ನಲ್ಲಿ ಇಂಟರ್ಕಾಮ್ ಮೂಲಕ ಆರ್ಯನ್ ಜೊತೆ ಸುಮಾರು 20 ನಿಮಿಷಗಳ ಕಾಲ ಮಾತನಾಡಿದರು. ಆರ್ಯನ್ ಕಳೆದ ಬಾರಿ ತಮ್ಮ ಹೆತ್ತವರಾದ ಎಸ್ಆರ್ಕೆ ಮತ್ತು ಗೌರಿ ಖಾನ್ ಅವರೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡಿದ್ದರು.
ಆರ್ಥರ್ ರಸ್ತೆ ಜೈಲಿನಲ್ಲಿ ಕಿಂಗ್ ಖಾನ್- ಆರ್ಯನ್ ಖಾನ್ ಮೊದಲ ಭೇಟಿ!
ಮುಂಬೈ ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಆರೋಪಿಯಾಗಿರುವ ಆರ್ಯನ್ ಖಾನ್ಗೆ ಅ.20ರಂದು ಜಾಮೀನು ಸಿಗದೆ ಮತ್ತೆ ಜೈಲುಪಾಲಾಗಿದ್ದಾರೆ. ಅಕ್ಟೋಬರ್ 2 ರಂದು ಮುಂಬೈನ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿಯ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ದಾಳಿ ನಡೆಸಿದ ಬಳಿಕ ಬಂಧನಕ್ಕೊಳಗಾದ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಮೊದಲ ಭೇಟಿ ಮಾಡಿದ್ದಾರೆ.
ಇನ್ನೂ ಪುತ್ರನ ಚಿಂತೆಯಲ್ಲಿಇರುವ ಶಾರುಖ್ ದಂಪತಿಗಳಿಗೆ ಎನ್ಸಿಬಿ ಮತ್ತೊಂದು ಶಾಕ್ ಕೊಟ್ಟಿದೆ. ಆರ್ಯನ್ ಖಾನ್ ಮಾದಕ ದ್ರವ್ಯ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ)ನ ತನಿಖಾ ಅಧಿಕಾರಿಗಳ ತಂಡ ಮುಂಬೈನಲ್ಲಿ ಬಾಲಿವುಡ್ ನಟ, ನಟಿಯರ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿದೆ. ಬಾಲಿವುಡ್ ನಟ ಶಾರುಖ್ ಖಾನ್ ಮನೆ ಮನ್ನತ್ ಮೇಲೆ ದಾಳಿ ಮಾಡಲಾಗಿದೆ.
ಆರ್ಯನ್ ಖಾನ್ ಪ್ರೈಮಾ ಫೇಸಿಯ ವಾಟ್ಸಾಪ್ ಚಾಟ್ಗಳಲ್ಲಿ ಅವರು "ನಿಯಮಿತವಾಗಿ ಅಕ್ರಮ ಮಾದಕವಸ್ತು ಚಟುವಟಿಕೆಗಳಲ್ಲಿ ತೊಡಗಿದ್ದರು" ಮತ್ತು ಅವರು ಮಾದಕವಸ್ತು ಮಾರಾಟಗಾರರೊಂದಿಗೆ ಸಂಪರ್ಕದಲ್ಲಿದ್ದರು ಎಂದು ವಿಶೇಷ ನ್ಯಾಯಾಲಯವು ಗಮನಿಸಿದೆ. ಆರ್ಯನ್ ಖಾನ್ ತನ್ನ ಸ್ನೇಹಿತ ಮತ್ತು ಸಹ ಆರೋಪಿ ಅರ್ಬಾಜ್ ಮರ್ಚೆಂಟ್ ಅವರೊಂದಿಗೆ ಮಾದಕವಸ್ತುಗಳನ್ನು ಹೊಂದಿದ್ದನೆಂದು ತಿಳಿದಿತ್ತು ಮತ್ತು ಆದ್ದರಿಂದ ಎನ್ಸಿಬಿ ಆತನಿಂದ ಔಷಧಗಳನ್ನು ಮರುಪಡೆಯದಿದ್ದರೂ ಸಹ ಇದು ಪ್ರಜ್ಞಾಪೂರ್ವಕ ಸ್ವಾಧೀನಕ್ಕೆ ಸಮಾನವಾಗಿದೆ ಎಂದಿದೆ. ಆರ್ಯನ್ ಖಾನ್, ಮರ್ಚೆಂಟ್ ಮತ್ತು ಧಮೇಚಾ ಜಾಮೀನಿಗಾಗಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ ಮತ್ತು ಅವರ ಅರ್ಜಿಗಳ ವಿಚಾರಣೆ ಅಕ್ಟೋಬರ್ 26 ರಂದು ನಡೆಯಲಿದೆ.