Get Updates
Get notified of breaking news, exclusive insights, and must-see stories!

ಮುಂಬೈ ಹೃದಯಕ್ಕೆ ಚೂರಿ ಹಾಕಬೇಡಿ: ನಿಮಗೆ ಕೈ ಜೋಡಿಸಿ ಕೇಳುತ್ತಿದ್ದೇನೆ ಎಂದ ಠಾಕ್ರೆ

ಮುಂಬೈ, ಜು.2: ಶಿವಸೇನಾ ಶಾಸಕರ ಬಂಡಾಯದಿಂದ ಮಹಾರಾಷ್ಟ್ರ ಸರ್ಕಾರ ಪತನಗೊಂಡು ಏಕನಾಥ್‌ ಶಿಂಧೆ ಮುಖ್ಯಮಂತ್ರಿಯಾದ ಬಳಿಕ ಅವರಿಗೆ ಶುಭ ಕೋರಿದ್ದ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಈಗ ಮೊದಲ ಬಾರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಂಬೈನ ಹಸಿರು ಪ್ರದೇಶ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ನಿರ್ಮಿಸುವ ಯೋಜನೆಯನ್ನು ಮುಂದುವರಿಸದಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ ರಾಜ್ಯದ ಹೊಸ ಸರ್ಕಾರಕ್ಕೆ ಟೀಕಿಸಿ ಮನವಿ ಮಾಡಿದ್ದಾರೆ. ನೂತನ ಏಕನಾಥ್ ಶಿಂಧೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತನ್ನ ಮೊದಲ ನಿರ್ಧಾರಗಳಲ್ಲಿ ಒಂದಾದ ವಿವಾದಾತ್ಮಕ ಆರೆ ಕಾಲೋನಿ ಕಾರ್ ಶೆಡ್ ಯೋಜನೆಯೊಂದಿಗೆ ಮುಂದುವರಿಯಲು ನಿರ್ಧರಿಸಿದೆ.

ಸಿಎಂ ಸ್ಥಾನದಿಂದ ಕೆಳಗಿಳಿದ ಎರಡು ದಿನಗಳ ನಂತರ ಶಿವಸೇನೆ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕ್ರೆ, ತಮ್ಮ ಸರ್ಕಾರವು ಪ್ರಸ್ತಾಪಿಸಿದಂತೆ ಕಂಜೂರ್ ಪ್ರದೇಶದಲ್ಲಿ ಕಾರ್ ಶೆಡ್ ನಿರ್ಮಿಸಿದರೆ, ಮುಂಬೈ ಮೆಟ್ರೋವನ್ನು ದೂರದ ಉಪನಗರಗಳಾದ ಅಂಬರನಾಥ್ ಮತ್ತು ಬದ್ಲಾಪುರಕ್ಕೆ ಕೊಂಡೊಯ್ಯಬಹುದು ಎಂದು ಹೇಳಿದ್ದಾರೆ.

 ನಿಮಗೆ ನನ್ನ ಮೇಲೆ ಕೋಪವಿದ್ದರೆ ಹೊರಹಾಕಿ

ನಿಮಗೆ ನನ್ನ ಮೇಲೆ ಕೋಪವಿದ್ದರೆ ಹೊರಹಾಕಿ

ನಿಮ್ಮ ಈ ನಿರ್ಧಾರದಿಂದ ನಾನು ತುಂಬಾ ಅಸಮಾಧಾನಗೊಂಡಿದ್ದೇನೆ. ನಿಮಗೆ ನನ್ನ ಮೇಲೆ ಕೋಪವಿದ್ದರೆ, ನಿಮ್ಮ ಕೋಪವನ್ನು ಹೊರಹಾಕಿ. ಆದರೆ ಮುಂಬೈ ಹೃದಯಕ್ಕೆ ಚೂರಿ ಹಾಕಬೇಡಿ. ಆರೆ ಕಾಲೋನಿ ಪ್ರದೇಶದಲ್ಲಿ ಕಾರ್‌ ಶೆಡ್ ಯೋಜನೆ ನಿರ್ಧಾರಕ್ಕೆ ನನಗೆ ತುಂಬಾ ಬೇಸರವಾಗಿದೆ. ಇದು ನನ್ನ ವೈಯಕ್ತಿಕ ಆಸ್ತಿಯಲ್ಲ ಎಂದು ಠಾಕ್ರೆ ಹೇಳಿದ್ದಾರೆ.

 ಮರಗಳನ್ನು ಕಡಿಯುವುದಕ್ಕೆ ನಿಷೇಧ

ಮರಗಳನ್ನು ಕಡಿಯುವುದಕ್ಕೆ ನಿಷೇಧ

2019 ರಲ್ಲಿ ಅಧಿಕಾರಕ್ಕೆ ಬಂದ ನಂತರ, ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶವಾದ ಆರೆ ಕಾಲೋನಿಯಲ್ಲಿ ಕಾರ್ ಶೆಡ್ ನಿರ್ಮಿಸುವ ಹಿಂದಿನ ದೇವೇಂದ್ರ ಫಡ್ನವಿಸ್ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಲು ಠಾಕ್ರೆ ನಿರ್ಧರಿಸಿದ್ದರು. ಕಾರ್ ಶೆಡ್‌ಗಾಗಿ ಆರೆಯಲ್ಲಿ ಮರಗಳನ್ನು ಕಡಿಯುವುದನ್ನು ಪರಿಸರ ಕಾರ್ಯಕರ್ತರು ತೀವ್ರವಾಗಿ ವಿರೋಧಿಸಿದ್ದರು. ಬಳಿಕ ಠಾಕ್ರೆ ಸರ್ಕಾರವು ಆರೆಯನ್ನು ಮೀಸಲು ಅರಣ್ಯ ಎಂದು ಘೋಷಿಸಿತ್ತು.

 ನಿಮಗೆ ಕೈ ಜೋಡಿಸಿ ಕೇಳುತ್ತಿದ್ದೇನೆ ಎಂದ ಠಾಕ್ರೆ

ನಿಮಗೆ ಕೈ ಜೋಡಿಸಿ ಕೇಳುತ್ತಿದ್ದೇನೆ ಎಂದ ಠಾಕ್ರೆ

ನಾನು ಈ ನಿರ್ಧಾರವನ್ನು ತಡೆಹಿಡಿದಿದ್ದೆ. ಕಾಂಜುರ್ (ಪರ್ಯಾಯ ತಾಣವಾಗಿ) ಆಯ್ಕೆಯನ್ನು ನೀಡಿದ್ದೇನೆ. ನಾನು ಪರಿಸರವಾದಿಗಳ ಜೊತೆಗಿದ್ದೇನೆ ಎಂದು ಮಾಜಿ ಮುಖ್ಯಸ್ಥ ಉದ್ಧವ್‌ ಠಾಕ್ರೆ ಹೇಳಿದ್ದಾರೆ. ನಾನು ಇದನ್ನು ನಿಮಗೆ ಕೈ ಜೋಡಿಸಿ ಕೇಳುತ್ತಿದ್ದೇನೆ. ದಯವಿಟ್ಟು ನನ್ನ ಮೇಲಿನ ಕೋಪವನ್ನು ಮುಂಬೈ ಮೇಲೆ ಹೊರಹಾಕಬೇಡಿ. ಅದರ ಪರಿಸರದೊಂದಿಗೆ ಆಟವಾಡಬೇಡಿ ಎಂದು ಠಾಕ್ರೆ ಹೇಳಿದರು.

 ಚಿರತೆ ವಿಹರಿಸುವ ಪೋಟೋ ಹಾಕಿದ್ದ ಠಾಕ್ರೆ

ಚಿರತೆ ವಿಹರಿಸುವ ಪೋಟೋ ಹಾಕಿದ್ದ ಠಾಕ್ರೆ

ಅವರ ಸರ್ಕಾರವು ಕಾರ್ ಶೆಡ್‌ಗಾಗಿ ಮೀಸಲಿಟ್ಟ ಕಂಜೂರಿನ ನಿವೇಶನ ವಿವಾದಿತ ಭೂಮಿಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಅಲ್ಲದೆ ಅನೇಕ ಖಾಸಗಿ ಸಂಸ್ಥೆಗಳು ಅದರ ಮೇಲೆ ಹಕ್ಕು ಸಾಧಿಸಿವೆ. ಅತ್ಯಾಸಕ್ತಿಯ ವನ್ಯಜೀವಿ ಛಾಯಾಗ್ರಾಹಕ ಎಂದು ಕರೆಯಲ್ಪಡುವ ಠಾಕ್ರೆ, ಫಡ್ನವಿಸ್ ಸರ್ಕಾರದ ಅವಧಿಯಲ್ಲಿ ಕಾರ್ ಶೆಡ್ ನಿರ್ಮಿಸಲು ಆರೆ ಕಾಲೋನಿಯಲ್ಲಿ ಮರಗಳನ್ನು ಕತ್ತರಿಸುವಾಗ, ಆ ಪ್ರದೇಶದಲ್ಲಿ ಚಿರತೆಗಳು ಸ್ವತಂತ್ರವಾಗಿ ವಿಹರಿಸುತ್ತಿದ್ದ ಚಿತ್ರಗಳು ಕಾಣಿಸಿಕೊಂಡವು ಎಂದು ಹೇಳಿದ್ದರು. ಈ ಪ್ರದೇಶವು ಅಭಿವೃದ್ಧಿ ಹೊಂದುತ್ತಿರುವ ವನ್ಯಜೀವಿಗಳನ್ನು ಹೊಂದಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+