'ಪಿಎಂ ಕೇರ್ ಅಡಿ ಲಭಿಸಿದ ವೆಂಟಿಲೇಟರ್ನ ದೋಷ ಸಾವಿಗೆ ಕಾರಣವಾದರೆ ಕೇಂದ್ರವೇ ಹೊಣೆ' : ಬಾಂಬೆ ಹೈಕೋರ್ಟ್
ಮುಂಬೈ, ಜೂ. 03: ಗುಜರಾತ್ ಕಂಪನಿಯೊಂದು ಪಿಎಂ ಕೇರ್ಸ್ ಫಂಡ್ ಮೂಲಕ ಸರಬರಾಜು ಮಾಡಿದ ಯಾವುದೇ ದೋಷಯುಕ್ತ ವೆಂಟಿಲೇಟರ್ಗಳು ಕೋವಿಡ್ -19 ರೋಗಿಗಳ ಸಾವಿಗೆ ಕಾರಣವಾದರೆ ಅದಕ್ಕೆ ಕೇಂದ್ರವೇ ಹೊಣೆಯಾಗಲಿದೆ ಎಂದು ಬಾಂಬೆ ಹೈಕೋರ್ಟ್ ವೆಂಟಿಲೇಟರ್ ವಿಚಾರದಲ್ಲಿ ಮಹತ್ವದ ತೀರ್ಪಿನ್ನು ನೀಡಿದೆ.
ಬುಧವಾರ ತನ್ನ ತೀರ್ಪಿನಲ್ಲಿ ನ್ಯಾಯಮೂರ್ತಿ ರವೀಂದ್ರ ಗೂಗೆ ಹಾಗೂ ನ್ಯಾಯಮೂರ್ತಿ ಬಿ.ಯು. ದೇಬಾದ್ವಾರ್, "ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲೇ ಹಲವಾರು ಬಾರಿ ರಿಪೇರಿ ಮಾಡಬೇಕಾದ ವೆಂಟಿಲೇಟರ್ಗಳ ಉಪಯೋಗ ಸರಿಯಲ್ಲ. ಇದು ರೋಗಿಗಳಿಗೆ ಅಪಾಯವನ್ನುಂಟುಮಾಡುತ್ತದೆ. ದುರದೃಷ್ಟವಶಾತ್, ಅಂತಹ ವೆಂಟಿಲೇಟರ್ಗಳ ಬಳಕೆಯು ಪ್ರಾಣ ಹಾನಿಗೆ ಕಾರಣವಾಗಬಹುದು'' ಎಂದು ಹೇಳಿದ್ದಾರೆ.
ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಮತ್ತು ಸಫ್ದರ್ಜಂಗ್ ಆಸ್ಪತ್ರೆಯಿಂದ ತಲಾ ಒಬ್ಬರ ತಜ್ಞ ವೈದ್ಯರ ತಂಡ ದೋಷಯುಕ್ತ ವೆಂಟಿಲೇಟರ್ಗಳನ್ನು ಪರೀಕ್ಷಿಸಲು ಗುರುವಾರ ಔರಂಗಾಬಾದ್ (ಜಿಎಂಸಿಎಚ್) ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಲು ಸೂಚಿಸಿದ ನ್ಯಾಯಾಲಯ ದೋಷಯುಕ್ತ ವೆಂಟಿಲೇಟರ್ಗಳನ್ನು ಪರಿಶೀಲಿಸಿದ ಬಳಿಕ ವಿಚಾರಣೆ ನಡೆಸುವ ನಿಟ್ಟಿನಲ್ಲಿ ವಿಚಾರಣೆಯನ್ನು ಜೂನ್ 7 ಕ್ಕೆ ಮುಂದೂಡಿದೆ.

ಪಿಎಂ ಕೇರ್ಸ್ ಫಂಡ್ ಅಡಿಯಲ್ಲಿ ಏಪ್ರಿಲ್ನಲ್ಲಿ ರಾಜ್ಕೋಟ್ ಮೂಲದ ಜ್ಯೋತಿ ಸಿಎನ್ಸಿ ಸರಬರಾಜು ಮಾಡಿದ150 ವೆಂಟಿಲೇಟರ್ಗಳಲ್ಲಿ ಕನಿಷ್ಠ 113 ದೋಷಯುಕ್ತವಾಗಿರುವುದು ಮೇ 18 ರಂದು ಕಂಡು ಬಂದಿದ್ದು ಈ ಹಿನ್ನೆಲೆ ಆಸ್ಪತ್ರೆಯು ಉಳಿದ 37 ವೆಂಟಿಲೇಟರ್ಗಳನ್ನು ಉಪಯೋಗಿಸಿಲ್ಲ.
ಈ ಬಗ್ಗೆ ಮೇ 25 ರಂದು ನ್ಯಾಯಾಲಯವು ವಿಚಾರಣೆ ನಡೆಸಿದ್ದು ಕೇಂದ್ರ ಸರ್ಕಾವನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಬಗ್ಗೆ ಪರಿಹಾರ ಕ್ರಮ ಏನು ಎಂದು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದ್ದ ಹೈಕೋರ್ಟ್, ''ಕೇಂದ್ರ ಸರ್ಕಾರ ಕೆಳಮಟ್ಟದ ವೆಂಟಿಲೇಟರ್ ಪೂರೈಸಿದ್ದಾರೆಂದು ಅರಿತುಕೊಳ್ಳಲಿ'' ಎಂದು ಹೇಳಿತ್ತು. ವೆಂಟಿಲೇಟರ್ ಹಿಂದಿರುಗಿಸುವಂತೆಯೂ ತಿಳಿಸಿತ್ತು.
"ಇದು ತುಂಬಾ ಗಂಭೀರವಾದ ವಿಷಯವಾಗಿದೆ, ನೀವು ವೆಂಟಿಲೇಟರ್ ಅನ್ನು ಏಕೆ ವಾಪಸ್ ಕಳುಹಿಸಬಾರದು? ಕೇಂದ್ರ ಸಚಿವಾಲಯವು ಅದನ್ನು ನಿಮಗೆ ನೀಡಿದ್ದನ್ನು ನಾವು ಪ್ರಶಂಸಿಸುತ್ತೇವೆ, ಆದರೆ ಇದು ರೋಗಿಗೆ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದರೆ, ನೀವು ಅದನ್ನು ಬಳಸಲಾಗುವುದಿಲ್ಲ. ಈ ವೆಂಟಿಲೇಟರ್ಗಳನ್ನು ನೀವು ಸರ್ಕಾರಕ್ಕೆ ವಾಪಸ್ ಕಳುಹಿಸುವುದು ಉತ್ತಮ" ಎಂದು ಬಾಂಬೆ ಹೈಕೋರ್ಟ್ ತಿಳಿಸಿತ್ತು.
(ಒನ್ಇಂಡಿಯಾ ಸುದ್ದಿ)
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications