Get Updates
Get notified of breaking news, exclusive insights, and must-see stories!

ಟಿಆರ್‌ಪಿ ಹಗರಣ: ಅರ್ನಬ್ ಗೋಸ್ವಾಮಿ ಮಧ್ಯಂತರ ರಕ್ಷಣೆ ವಿಸ್ತರಣೆ

ಮುಂಬೈ, ಫೆಬ್ರವರಿ 12: ಟಿಆರ್‌ಪಿ ಹಗರಣದ ವಿಚಾರಣೆ ನಡೆಸುತ್ತಿರುವ ಬಾಂಬೆ ಹೈಕೋರ್ಟ್, ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಎಆರ್‌ಜಿ ಓಟ್ಲಿಯರ್ ಮೀಡಿಯಾದ ಇತರೆ ಉದ್ಯೋಗಿಗಳಿಗೆ ಬಂಧನದಿಂದ ನೀಡಿರುವ ಮಧ್ಯಂತರ ರಕ್ಷಣೆಯನ್ನು ಮಾರ್ಚ್ 5ರವರೆಗೂ ವಿಸ್ತರಿಸಿದೆ.

ಟಿಆರ್‌ಪಿ ಹಗರಣ ಪ್ರಕರಣದಲ್ಲಿ ಮುಂಬೈ ಪೊಲೀಸರ ತನಿಖೆಯನ್ನು ಪ್ರಶ್ನಿಸಿ ಎಆರ್‌ಜಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಂದೂಡಿದ ಸಂದರ್ಭದಲ್ಲಿ ಅರ್ನಬ್ ಹಾಗೂ ಇತರೆ ಉದ್ಯೋಗಿಗಳಿಗೆ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಿದ್ದಾರೆ.

ಪೊಲೀಸರ ಆರೋಪಪಟ್ಟಿಗೆ ಪ್ರತಿಯಾಗಿ ಕಳೆದ ವಾರ ಸಲ್ಲಿಸಿದ್ದ ತನ್ನ ಪ್ರತಿವಾದಿ ಅಫಿಡವಿಟ್‌ನಲ್ಲಿ ಎಆರ್‌ಜಿ ಮೀಡಿಯಾ, ತನ್ನ ಅರ್ಜಿಯ ಭಾಗವಾಗಿರದ ಕೆಲವು ಹೊಸ ದಾಖಲೆಗಳನ್ನು ಒದಗಿಸಿತ್ತು ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ತಿಳಿಸಿದ್ದಾರೆ.

Bombay High Court Extends Arnab Goswamis Interim Relief Till March 5 In TRP Scam

ಎಆರ್‌ಜಿ ಸಲ್ಲಿಸಿರುವ ಹೊಸ ದಾಖಲೆಗಳನ್ನು ಪರಿಶೀಲಿಸಲು ತಮಗೆ ಸಮಯಾವಕಾಶದ ಅಗತ್ಯವಿದೆ. ತಮ್ಮ ದಿನದ ವಾದದಲ್ಲಿ ಎಆರ್‌ಜಿ ಪರ ವಕೀಲರಾದ ಹರೀಶ್ ಸಾಳ್ವೆ ಅವರು ಈ ದಾಖಲೆಗಳನ್ನು ಅವಲಂಬಿಸಬಾರದು ಎಂದು ಸಿಬಲ್ ಹೇಳಿದ್ದರು. ಆದರೆ ಈ ದಾಖಲೆಗಳನ್ನೇ ತಾವು ಆಧಾರವಾಗಿಟ್ಟುಕೊಳ್ಳುವುದಾಗಿ ಸಾಳ್ವೆ ವಾದಿಸಿದ್ದರು.

ಸಿಬಲ್ ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಅರ್ನಬ್ ಮತ್ತು ಇತರರಿಗೆ ನೀಡಿದ ಮಧ್ಯಂತರ ನೆಮ್ಮದಿಯನ್ನು ಮುಂದಿನ ದಿನಾಂಕದವರೆಗೂ ವಿಸ್ತರಿಸಿ ಆದೇಶಿಸಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+