5 ಬ್ಯಾಂಕುಗಳ ವಿಲೀನ: SBI- SBM ವಿಲೀನಕ್ಕೆ ಮಹೂರ್ತ

ಈ ಐದೂ ಅಧೀನ ಬ್ಯಾಂಕುಗಳನ್ನು ಮರ್ಜ್ ಮಾಡಿಕೊಂಡರೆ SBI ಆಸ್ತಿಯ ಮೊತ್ತ ಸುಮಾರು 22 ಲಕ್ಷ ಕೋಟಿ ರೂ. ಗೆ ಏರುತ್ತದೆ. ಜತೆಗೆ ಈಗಾಗಲೇ 15,143 ಶಾಖೆಗಳನ್ನು ಹೊಂದಿರುವ SBI ಲೆಕ್ಕಕ್ಕೆ ಈ ಪಂಚ ಬ್ಯಾಂಕುಗಳ 5,658 ಶಾಖೆಗಳು ಸೇರ್ಪಡೆಯಾದಂತಾಗುತ್ತದೆ.
ಮಾರುಕಟ್ಟೆ ಪಾಲು ಸಹ ಈಗಿನ ಶೇ. 19ರಿಂದ ಶೇ. 24ಕ್ಕೆ ವೃದ್ಧಿಸುತ್ತದೆ. ಅಂದರೆ ಅಗ್ರಗಣ್ಯ SBI ಮತ್ತಷ್ಟು ಬಲಾಢ್ಯವಾಗುತ್ತದೆ. ದೇಶ ಮತ್ತು ವಿಶ್ವದ ಆರ್ಥಿಕತೆಯನ್ನು ಪರಿಗಣಿಸಿದರೆ ಈಗಿನ ಸೇರ್ಪಡೆ ಸಮಯವೂ ಸುಸಮಯವಾಗಿದೆ ಎಂದು ಎಸ್ ಬಿಐ ನೂನತ ಅಧ್ಯಕ್ಷೆ ಆರುಂಧತಿ ಭಟ್ಟಾಚಾರ್ಯ ಹೇಳುತ್ತಾರೆ.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕೊನೆಗೂ ವಿಲೀನ?:
ರಾಜ್ಯದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ State Bank of Mysore, State Bank of Travancore, State Bank of Hyderabad, State Bank of Patiala ಮತ್ತು State Bank of Bikaner & Jaipur ಮಾತೃ ಬ್ಯಾಂಕಿನೊ0ದಿಗೆ ವಿಲೀನವಾಗಲಿದೆ.
ಆದರೆ ಇದು ಕೈಗೂಡುತ್ತದಾ? ಎಂಬುದು ಒಂದು ದಶಕದಿಂದ ಕೇಳಿಬರುತ್ತಿರುವ ಪ್ರಶ್ನೆ. ಏಕೆಂದರೆ ದಶಕದ ಹಿಂದೆಯೇ ಇವುಗಳ ವಿಲೀನಕ್ಕೆ ಚಿಂತನೆ ನಡೆಯಿತು. ಆದರೆ ಬ್ಯಾಂಕ್ ಯೂನಿಯನ್ನುಗಳು ಇದನ್ನು ಸುತರಾಂ ಒಪ್ಪುತ್ತಿಲ್ಲ. ಇನ್ನು ಹಿಂದಿನ ಸರಕಾರವೂ ಇದರ ಬಗ್ಗೆ ಹೆಚ್ಚು ಕಾಳಜಿ ವಹಿಸಲಿಲ್ಲ. ಆದರೆ ಈಗಿನ ಹೊಸ ಕೇಂದ್ರ ಸರಕಾರ ಮತ್ತು ಹೊಸ ಸಿಎಂಡಿ ಆರುಂಧತಿ ಅವರು ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಾರಾ? ಎಂಬುದು ಕಾದುನೋಡಬೇಕಾದ ವಿಚಾರ.
ಏಕೆಂದರೆ ಕಳೆದೊಂದು ದಶಕದಲ್ಲಿ ಅಪಾರ ಚಿಂತನೆ, ವಿರೋಧಗಳು, ವಿರೋಧಾಭಾಸಗಳ ನಡುವೆ State Bank of Saurashtra ಮತ್ತು State Bank of Indore ಬ್ಯಾಂಕುಗಳನ್ನು SBI ತನ್ನ ಜತೆ ವಿಲೀನಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಏನೇ ಆಗಲಿ, ಬ್ಯಾಂಕುಗಳ ವಿಲೀನವಾದರೆ ಬ್ಯಾಂಕಿನ ಅಂತಃಶಕ್ತಿ ಹೆಚ್ಚಾಗಿ, ದೇಶದ ಆರ್ಥಿಕತೆಗೆ ನೆರವಾಗುತ್ತದೆ ಎಂಬುದಂತೂ ಈ ಕ್ಷಣದ ಸತ್ಯ.
-
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ?












Click it and Unblock the Notifications