ಪ್ರಸವ ವೇದನೆಯಲ್ಲಿ ಬಾವಿಗೆ ಹಾರಿದ ಅವಿವಾಹಿತೆ, ಮಗು ನೀರಿನಲ್ಲೇ ಸಾವು
ಮಂಗಳೂರು, ಆಗಸ್ಟ್ 2: ಈ ರೀತಿ ಪ್ರಕರಣ ಎಲ್ಲೂ ನಡೆಯೋದು ಬೇಡ. ಆದರೆ ನಾಗರಿಕ ಸಮಾಜ ತಲೆತಗ್ಗಿಸುವಂಥ ಘಟನೆ ನಡೆದುಹೋಗಿದೆ. ಏನಿದು ಪ್ರಕರಣ ಅಂತೀರಾ? ಆ ಯುವತಿಗೆ ಇನ್ನೂ ಮದುವೆಯಾಗಿಲ್ಲ. ಆದರೆ ಗರ್ಭ ಧರಿಸಿದ್ದಳು. ಇನ್ನೇನು ಹೆರಿಗೆ ಆಗುತ್ತದೆ ಅನ್ನುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಆಕೆ ಬಾವಿಗೆ ಹಾರಿದ್ದಳು.
ಆದರೆ, ಆಕೆ ಮಗುವಿಗೆ ಜನ್ಮ ನೀಡಿಯೇಬಿಟ್ಟಳು. ಅದೂ ಎಲ್ಲಿ ಗೊತ್ತಾ? ಬಾವಿ ನೀರಿನಲ್ಲಿ. ಆಕೆ ಅದೇನೋ ಮಾಡಲು ಹೊರಟು ಎಡವಟ್ಟಿನಿಂದ ಗರ್ಭ ಧರಿಸಿದ ಯುವತಿ. ಆದರೆ ಎಡವಟ್ಟು ಮಗುವಿಗೆ ಜನ್ಮ ನೀಡುವ ವಿಚಾರದಲ್ಲೂ ಮುಂದುವರಿಯಿತು. ಈಕೆಗೆ ಗರ್ಭದ ಕೊಡುಗೆ ನೀಡಿದ 'ಮಹಾನುಭಾವ'ನ ಬಗ್ಗೆ ಎಲ್ಲೂ ವಿಚಾರ ಹೊರಬರಲಿಲ್ಲ. ಆದರೆ ಈಕೆಗೆ ಪ್ರಸವ ವೇದನೆ ಪ್ರಾರಂಭವಾದ ಕೂಡಲೇ ಬಾವಿಗೆ ಹಾರಿಬಿಟ್ಟಿದ್ದಾಳೆ.

ಬಾವಿಗೆ ಹಾರಿದ ತಕ್ಷಣ ಮಗು ನೀರಿನಲ್ಲೇ ಜನ್ಮ ತಾಳಿದೆ. ಈಕೆ ಮಾತ್ರ ಪಂಪ್ ಸೆಟ್ ನ ಪೈಪ್ ಹಿಡಿದು ಪಾರಾಗಿದ್ದಾಳೆ . ಕೂಡಲೇ ಅದ್ಯಾರೋ ಈಕೆಯ ಕಿರುಚಾಟ ಕಂಡು ಮೇಲೆತ್ತಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಹಸುಗೂಸು ನೀರಲ್ಲೇ ಮುಳುಗಿ ಅಸುನೀಗಿತ್ತು. ಆದರೆ ಈ ಯುವತಿ ವಿಚಾರವನ್ನು ಎಲ್ಲೂ ಬಾಯಿ ಬಿಟ್ಟಿಲ್ಲ. ಮಂಗಳವಾರ ಮಗುವಿನ ಮೃತದೇಹವನ್ನು ಬಾವಿಯಿಂದ ಹೊರತೆಗೆಯಲಾಗಿದೆ.
ಇದೀಗ ಆಕೆಯ 'ಮಹಾನುಭಾವ'ನ ಸುದ್ದಿ ಊರಿಡೀ ಹಬ್ಬಿದ್ದು , ಜನ ಬೆಚ್ಚಿ ಬಿದ್ದಿದ್ದಾರೆ. ಈ ಘಟನೆ ಕಡಲಕೆರೆ ಸಮೀಪದಲ್ಲಿ ನಡೆದಿದ್ದು, ಆಕೆ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ. ಆ ಯುವತಿಯ ಗರ್ಭಕ್ಕೆ ಕಾರಣನಾದವನು ಆಕೆಯ ಸಹೋದರಿ ಗಂಡನೇ ಎಂಬುದು ಬಯಲಾಗಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications