ಬಾಂಜಾರುಮಲೆಗೆ ಒದಗಿ ಬಂತು ವಿಧಾನಸಭೆ ಚುನಾವಣಾ ಮತಗಟ್ಟೆ ಭಾಗ್ಯ
ಮಂಗಳೂರು ಮೇ 8 : ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೂಡ ದುರ್ಗಮ ಮತಗಟ್ಟೆಗಳಿದ್ದು, ಅಂತಹ ಪ್ರದೇಶದಲ್ಲೂ ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ ಸಿದ್ಧತೆ ನಡೆಸಲಾಗಿದೆ.
ಪ್ರಯಾಣ ಮಾಡುವ ವ್ಯವಸ್ಥೆಗಳಿಲ್ಲ, ಅಸಮರ್ಪಕ ಸೌಲಭ್ಯ, ಮುಖ್ಯವಾಹಿನಿಯಿಂದ ದೂರ ಉಳಿದಿರುವಂತಹ ಹಳ್ಳಿಗಳಲ್ಲೂ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತಹ ಎರಡು ಶ್ಯಾಡೋ ಮತಗಟ್ಟೆಗಳು ದಕ್ಷಿಣಕನ್ನಡ ಜಿಲ್ಲೆಯಲ್ಲಿದೆ.
ಅವುಗಳಲ್ಲೊಂದು ಬೆಳ್ತಂಗಡಿ ತಾಲೂಕಿನ ಬಾಂಜಾರುಮಲೆ. ಇಲ್ಲಿಗೆ ಕೆಲ ವರ್ಷಗಳ ಹಿಂದೆಯಷ್ಟೇ ಮತಗಟ್ಟೆ ಒದಗಿಸಲಾಗಿತ್ತು. ಆದರೆ ಮೊದಲು ನೆರಿಯ ಗ್ರಾಮಕ್ಕೆ ಮತ ಹಾಕಲು ಬರಬೇಕಿತ್ತು. ಬಾಂಜಾರುಮಲೆಗೆ ಭೇಟಿ ನೀಡಿದ್ದ ಆಗಿನ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಮತಗಟ್ಟೆ ಒದಗಿಸುವ ಭರವಸೆ ಒದಗಿಸಿದ್ದರು.

ಮತ ಹಾಕುವ ಸೌಭಾಗ್ಯ
ಮೊದಲು ಇವರೆಲ್ಲರೂ 30 ಕಿಲೋ ಮೀಟರ್ ನಷ್ಟು ಕ್ರಮಿಸಿ ಗುಂಡಿಬಾಗಿಲು ಎಂಬಲ್ಲಿ ಮತಹಾಕಬೇಕಿತ್ತು. 2013ರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮೊದಲ ಬಾರಿಗೆ ಬಾಂಜಾರಮಲೆಗೆ ತೆರಳಿ ಮತ ಹಾಕಿದ್ದ ಗ್ರಾಮಸ್ಥರು ಇದೇ ಮೊದಲ ಬಾರಿಗೆ ಅಸೆಂಬ್ಲಿ ಚುನಾವಣೆಯೊಂದರಲ್ಲಿ ತಮ್ಮೂರಲ್ಲೇ ಊರಿನ ಸಮುದಾಯ ಭವನದಲ್ಲಿರುವ ಮತಗಟ್ಟೆಯಲ್ಲಿ ಮತಹಾಕುವ ಭಾಗ್ಯ ಪಡೆದಿದ್ದಾರೆ.

ಆದಿವಾಸಿ ಜನಾಂಗದವರೇ ಹೆಚ್ಚು
ಬಾಂಜಾರು ಮಲೆಯಲ್ಲಿ 61 ಪುರುಷ ಹಾಗೂ 58 ಮಹಿಳೆಯರು ಸೇರಿದಂತೆ 119 ಮತದಾರರಿದ್ದಾರೆ. ಬೆಳ್ತಂಗಡಿಯಿಂದ ಸುಮಾರು 35 ಕಿಲೋ ಮೀಟರ್ ದೂರದಲ್ಲಿರುವ ಬಾಂಜಾರು ಮಲೆಯಲ್ಲಿ ಇರುವವರು ಬಹುತೇಕ ಮಂದಿ ಮಲೆಕುಡಿಯ ಆದಿವಾಸಿ ಜನಾಂಗದವರು.

ಪರಿಹಾರದ ವ್ಯವಸ್ಥೆ
ಮತಗಟ್ಟೆಯಲ್ಲಿ ಮತದಾನದ ವ್ಯವಸ್ಥೆ ಮಾಡಲು ಹಿಂದಿನ ದಿನವೇ ಇದೇ ಸುತ್ತು ದಾರಿಯಲ್ಲಿ ಸಿಬ್ಬಂದಿ ಹೋಗುತ್ತಾರೆ. ರಾಷ್ಟ್ರೀಯ ಉದ್ಯಾನವನವಾಗಿದ್ದರಿಂದ ಅಭಿವೃದ್ದಿ ಕೆಲಸ ಮಾಡಲು ಕಾನೂನಿನ ತೊಡಕು ಇದ್ದು, ಹಾಗಾಗಿ ಜನರು ಇಲ್ಲಿಂದ ಪರಿಹಾರ ತೆಗೆದುಕೊಂಡು ಹೊರಹೋಗುತ್ತಾರೆ.

ಮತದಾರರ ಸಂಖ್ಯೆ ಕಡಿಮೆಯಿಲ್ಲ
ಕಳೆದ ವರ್ಷ ಕೂಡ 11 ಕುಟುಂಬಗಳು ಇಲ್ಲಿಂದ ವರ್ಗಾವಣೆಗೊಂಡಿವೆ. ಆದರೂ ಹೊಸ ಮತದಾರರು ಸೇರ್ಪಡೆಯಾಗಿರುವ ಕಾರಣ ಸದ್ಯಕ್ಕೆ ಮತದಾರರ ಸಂಖ್ಯೆ ಕಡಿಮೆಯಾಗಿಲ್ಲ.

ಉಡುಪಿಯಲ್ಲಿ ದುರ್ಗಮ ಮತಗಟ್ಟೆಗಳಿಲ್ಲ
ಉಡುಪಿ ಜಿಲ್ಲೆಯಲ್ಲಿ ಯಾವುದೇ ದುರ್ಗಮ ಮತಗಟ್ಟೆಗಳಿಲ್ಲ. ಕುಂದಾಪುರ, ಬೈಂದೂರು, ಕಾರ್ಕಳ ವಿಧಾನಸಭಾ ಕ್ಷೇತ್ರದ ಕೆಲವು ಪ್ರದೇಶದಲ್ಲಿ ವಾಹನ ಸೌಕರ್ಯ ಕೊರತೆ ಹೊರತು ಪಡಿಸಿದರೆ ದುರ್ಗಮ ಮತಗಟ್ಟೆಗಳಿಲ್ಲ.

ಅಧಿಕಾರಿಗಳಿಗೆ ತಾಪತ್ರಯವಿರುವುದಿಲ್ಲ
ಕೆಲವು ಮತಗಟ್ಟೆಗಳು ಕಚ್ಚಾ ರಸ್ತೆಗಳನ್ನು ಹೊಂದಿದ್ದು ಹೀಗಾಗಿ ಮತಗಟ್ಟೆ ಅಧಿಕಾರಿಗಳಿಗೆ ಮತದಾನ ಕೇಂದ್ರ ತಲುಪಲು ಜೀಪ್ ವಾಹನದ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಮತದಾನ ಕೇಂದ್ರದ ಬಾಗಿಲಿನವರೆಗೆ ವಾಹನಗಳು ತಲುಪುವುದರಿಂದ ಅಧಿಕಾರಿಗಳು ಮತಯಂತ್ರ ಹೊತ್ತು ಸಾಗುವ ಪರಿಸ್ಥಿತಿ ಇಲ್ಲ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications