8ನೇ ಪರಿಚ್ಛೇದಕ್ಕೆ ತುಳು, ಟ್ವೀಟ್ ಅಭಿಯಾನಕ್ಕೆ ಭರ್ಜರಿ ಬೆಂಬಲ
ಮಂಗಳೂರು,
ಆಗಸ್ಟ್
11:
ಕರ್ನಾಟಕ
ಕರಾವಳಿಯ
ತುಳು
ಭಾಷೆಯನ್ನು
ಸಂವಿಧಾನದ
8ನೇ
ಪರಿಚ್ಛೇದಕ್ಕೆ
ಸೇರ್ಪಡೆಯಾಗಬೇಕೆಂಬ
ನಿಟ್ಟಿನಲ್ಲಿ
ಗುರುವಾರ
ನಡೆದ
ಟ್ವೀಟ್
ಅಭಿಯಾನ
ಯಶಸ್ವಿಯಾಗಿದೆ.
ಕೇಂದ್ರ
ಮತ್ತು
ರಾಜ್ಯ
ಸರಕಾರಕ್ಕೆ
ಹಕ್ಕೊತ್ತಾಯ
ಮಂಡಿಸಲು
ನಡೆಸಿದ
ಈ
ಅಭಿಯಾನಕ್ಕೆ
ಬೆಂಬಲ
ಸೂಚಿಸಿ
ರಾತ್ರಿ
8
ಗಂಟೆ
ವೇಳೆಗೆ
45,200
ಮಂದಿ
ಟ್ವೀಟ್
ಮಾಡಿದ್ದಾರೆ
ಎಂದು
ವಿಜಯ
ಕರ್ನಾಟಕ
ವರದಿ
ಮಾಡಿದೆ.
8ನೇ ಪರಿಚ್ಛೇದಕ್ಕೆ ತುಳು ಸೇರಿಸಲು ಇಂದು ಟ್ವಿಟ್ಟರ್ ಹಕ್ಕೊತ್ತಾಯ
ಬೆಳಗ್ಗೆ 6 ಗಂಟೆಯಿಂದಲೇ ಆರಂಭವಾದ ಈ ಅಭಿಯಾನದಲ್ಲಿ #TuluTo8thSchedule ಹ್ಯಾಷ್ ಟ್ಯಾಗ್ ಹಾಕಿ ಟ್ವೀಟ್ ಮಾಡಿ ಜನರು ಬೆಂಬಲ ಸೂಚಿಸಿದರು. ಸಿನಿ ತಾರೆಯರು, ರಾಜಕೀಯ ಮುಖಂಡರು, ಕನ್ನಡ ಪರ ಹೋರಾಟಗಾರರು ಸೇರಿದಂತೆ ಸಾವಿರಾರು ಮಂದಿ ಟ್ವೀಟ್ ನಲ್ಲೇ ಸರಕಾರಕ್ಕೆ ಹಕ್ಕೊತ್ತಾಯ ಮಂಡಿಸಿದರು.
Tulu owing to its history,rich oral tradition & cultural significance deserves international recognition. #TuluTo8thSchedule is way forward.
— C.T.Ravi (@CTRavi_BJP) August 10, 2017
"ದೇಶಾದ್ಯಂತ ಬಳಕೆಯಲ್ಲಿರುವ 15 ಭಾಷೆಗಳನ್ನು ಬಳಕೆ ಮಾಡಿಕೊಂಡು ಟ್ವೀಟ್ ಮಾಡಲಾಗಿದೆ. ಈ ಟ್ವೀಟ್ ಅಭಿಯಾನದಲ್ಲಿ ಕರಾವಳಿಯ ಜನರು ಮಾತ್ರವಲ್ಲದೆ ರಾಜ್ಯ, ರಾಷ್ಟ್ರಾದ್ಯಂತ ತುಳು ಅಭಿಮಾನಿಗಳು ಪಾಲ್ಗೊಂಡಿದ್ದಾರೆ. ವಿದೇಶದಲ್ಲಿರುವ ತುಳು, ಕನ್ನಡ ಅಭಿಮಾನಿಗಳು ತುಳು ಪರ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ," ಎಂದು ಜೈ ತುಳುನಾಡು ಅಧ್ಯಕ್ಷ ಅಶ್ವತ್ಥ್ ವಿಜಯ ಕರ್ನಾಟಕಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ತುಳು ಭಾಷೆ ತುಳುನಾಡಿನ ಪ್ರಾಚೀನ ಭಾಷೆ, ತುಳುನಾಡಿಗರ ಮಾತೃಭಾಷೆ, ಇದರ ಉಳಿವಿಗಾಗಿ ಎಲ್ಲರೂ ಶ್ರಮಿಸೋಣ. #tuluto8schedule @PMOIndia pic.twitter.com/Oo1c4rhH4z
— Nalinkumar Kateel (@nalinkateel) August 11, 2017
ಇನ್ನು ಈ ಟ್ವೀಟ್ ಅಭಿಯಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ. ಎ. ನಾರಾಯಣ ಗೌಡ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿಯ ಮಾಜಿ ಸಚಿವ ಸಿ.ಟಿ. ರವಿ ಪಾಲ್ಗೊಂಡಿದ್ದರು.
ಕರಾವಳಿ ಭಾಗದ ಸುಂದರವಾದ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸಬೇಕೆಂದು ಕರವೇ ವತಿಯಿಂದ
— Narayanagowdru T.A. (@narayanagowdru) August 10, 2017
ನಾವು ಒತ್ತಾಯಿಸುತ್ತೇವೆ#TuluTo8thSchedule