ಮಂಗಳೂರು: ಬಾಯಾರಿಕೆ ತಣಿಸುವ ಎಳನೀರೇ ಬಿಸಿಲಿಗೆ ಮಾಯ!!
ಮಂಗಳೂರು : ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ನಗರದಾದ್ಯಂತ ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಸಣ್ಣ ಟೆಂಟ್ ಹಾಕಿಕೊಂಡು ಕುಡ್ಲದ ಜನತೆಯ ದಾಹ ತೀರಿಸಲೆಂಬಂತೆ ಕಾಯುತ್ತಿರುವ ಬೊಂಡ (ಎಳನೀರು) ವ್ಯಾಪಾರಿಗಳನ್ನು ಕಾಣುತ್ತಿದ್ದೆವು. ಆದರೆ ಈ ವರ್ಷ ಇಂತಹ ವ್ಯಾಪಾರಿಗಳನ್ನು ಸೂಕ್ಷ್ಮದರ್ಶಕ ಇಟ್ಟು ಹುಡುಕಿದರೂ ಕಾಣಲು ಸಾಧ್ಯವಿಲ್ಲ.
ಹೌದು, ಈ ಬಾರಿ ಮಾರ್ಗದ ಬದಿಯಲ್ಲಿ ಬೊಂಡ ಮಾರಾಟ ಮಾಡುವ ವ್ಯಾಪಾರಿಗಳೆಲ್ಲಾ ಮಾಯವಾಗಿದ್ದಾರೆ. ಕಾರಣ ಸಾಕಷ್ಟು ಪ್ರಮಾಣದ ಸೀಯಾಳ ಲಭ್ಯವಿಲ್ಲ. ಕರಾವಳಿ ಜಿಲ್ಲೆಗಳು ಸೇರಿದಂತೆ ಪ್ರಮುಖ ತೆಂಗು ಬೆಳೆಯುವ ಪ್ರದೇಶಗಳಾದ ಹಳೆ ಮೈಸೂರು ಮತ್ತು ಬಯಲು ಸೀಮೆಗಳಲ್ಲಿ ಈ ವರ್ಷ ಕಡಿಮೆ ಉತ್ಪಾದನೆ ಸಮಸ್ಯೆಯನ್ನು ಎದುರಿಸುತ್ತಿದೆ. ಪರಿಣಾಮ ಸೀಯಾಳ (ಎಳನೀರು) ಬೆಲೆ ಏರಿಕೆಯಾಗಿದೆ.

ಬೇಸಿಗೆ ಆರಂಭದಲ್ಲಿಯೇ ಸೀಯಾಳ ಪೂರೈಕೆ ಕಡಿಮೆಯಾಗಿದೆ. ಸೀಯಾಳ ಬೆಳೆಯುವ ಪ್ರದೇಶಗಳಾದ ರಾಮನಗರ, ಮಂಡ್ಯ, ತುಮಕೂರು, ತಿಪ್ಟೂರು, ಹಾಸನ ಮತ್ತು ಚಿಕ್ಕಬಳ್ಳಾಪುರ ಮತ್ತು ಮೈಸೂರಿನ ಕೆಲವು ಭಾಗಗಳ ಪ್ರಮುಖ ಬೆಳೆಗಾಗರರು ತಮ್ಮ ಸೀಯಾಳವನ್ನು ಬೆಂಗಳೂರು ನಗರಕ್ಕೆ ಪೂರೈಸುತ್ತಿದ್ದಾರೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡದಲ್ಲಿ ಸುಮಾರು 50,000 ಹೆಕ್ಟೇರು ಭೂಮಿಯಲ್ಲಿ ತೆಂಗು ಬೆಳೆಯಲಾಗುತ್ತಿದ್ದರೂ ಈ ಬೆಳೆಗಾರರು ಮುಂಬಯಿ ಮತ್ತು ಪಣಜಿಯಲ್ಲಿ ಹೆಚ್ಚು ಬೆಲೆ ಪಡೆಯುತ್ತಿರುವುದರಿಂದ ಬೆಂಗಳೂರು, ಮುಂಬಯಿ ಮತ್ತು ಪಣಜಿ ಮಾರುಕಟ್ಟೆಯತ್ತ ವಾಲಿದ್ದಾರೆ.

ಇದೇ ವೇಳೆ ರಾಜ್ಯಾದ್ಯಂತದ ಮತ್ತು ನೆರೆಯ ಗೋವಾ ರಾಜ್ಯದ ಮಾಲ್ ಮಾಲಕರು ಮೈಸೂರು, ಕರಾವಳಿ ಕರ್ನಾಟಕ ಮತ್ತು ಕೇರಳ ರಾಜ್ಯದ ಸೀಯಾಳಕ್ಕಾಗಿ ಮುಗಿಬೀಳುತ್ತಿದ್ದಾರೆ. ಮಂಗಳೂರಿನ ಒಂದು ಮಾಲ್ ಎದುರುಗಡೆ ಉತ್ತರ ಮಲಬಾರ್ ಮತ್ತು ದಕ್ಷಿಣ ಕರಾವಳಿಯ ಸೀಯಾಳ ಎಂಬ ಬೋರ್ಡನ್ನೇ ನೇತುಹಾಕಿದೆ. ಆದರೆ ಸೀಯಾಳದ ತೊಟ್ಟಿ ಮಾತ್ರ ಖಾಲಿಯಾಗಿಯೇ ಉಳಿದಿದೆ.
ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಜಿಲ್ಲೆಗಳ ಸೀಯಾಳ ಬೆಳೆಗಾರರು ಮುಂಬಯಿ ಮತ್ತು ಪಣಜಿ ಮಾರುಕಟ್ಟೆಗೆ ಸೀಯಾಳ ಪೂರೈಸುತ್ತಿದ್ದಾರೆ. ಈ ಬೆಳೆಗಾರರು ಕರ್ನಾಟಕದ ಮಾರುಕಟ್ಟೆಗಳಲ್ಲಿ ದೊರೆಯುವ ಬೆಲೆಗಿಂತ ಶೇಕಡಾ 42ರಷ್ಟು ಹೆಚ್ಚು ಬೆಲೆಯನ್ನು ಮುಂಬಯಿ ಮತ್ತು ಪಣಜಿ ಮಾರುಕಟ್ಟೆಗಳಲ್ಲಿ ಪಡೆಯುತ್ತಿರುವುದೇ ಇದಕ್ಕೆ ಕಾರಣ.

ಬೆಳೆಗಾರರು ಏನಂತಾರೆ?
''ಮಾಲ್ಗಳು ಗುಣಮಟ್ಟದ ಸೀಯಾಳಗಳಿಗೆ ಬೇಡಿಕೆ ಇಡುತ್ತಿವೆ. ಅವರಿಗೆ ಕೀಳು ಅಥವಾ ಒಣಗಿದ ಸೀಯಾಳಗಳು ಬೇಡ, ಹಸಿರು, ಹಳದಿ ತಳಿಯ ಆಕಾರದಲ್ಲಿ ಉತ್ತಮವಾಗಿರುವ ಸೀಯಾಳಗಳು ಬೇಕು''
- ಹರೀಶ್, ಸ್ಥಳೀಯ ಮಾಲ್ ದಲ್ಲಾಳಿ
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications