ವೆಂಕಟರಮಣ ದೇವರ ಕುಂಭಾಭಿಷೇಕ ಪ್ರಯುಕ್ತ ದೇವಿಗೆ ಕನಕಾಭಿಷೇಕ
ಮಂಗಳೂರು, ನ 8 : ಕೊಂಚಾಡಿ ಶ್ರೀ ವೆಂಕಟರಮಣ ದೇವರ ಸಹಸ್ರ ಕುಂಭಾಭಿಷೇಕ ಪ್ರಯುಕ್ತ ಬುಧವಾರ (ನ 8) ಶ್ರೀ ಮಹಾಲಸಾ ನಾರಾಯಣಿ ದೇವಿಗೆ ಕಾಶೀ ಮಠಾಧೀಶರಾದ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶತಕಲಶಾಭಿಷೇಕ, ಗಂಗಾಭಿಷೇಕ, ಕನಕಾಭಿಷೇಕ ನೆರವೇರಿಸಿದರು.
ಕುಂಭಾಭಿಷೇಕದ ಸವಿ ನೆನಪಿಗಾಗಿ ದೇವರಿಗೆ ನೂತನವಾಗಿ ನಿರ್ಮಿಸಲಾದ ದಶಾವತಾರ ಸ್ವರ್ಣ ಮಾಲೆ ಸಮರ್ಪಿಸಲಾಯಿತು. ಕುಂಭಾಭಿಷೇಕ ಪೂರ್ವಭಾವಿಯಾಗಿ ದೇವಳದಲ್ಲಿ ಶತಕಲಶಾಭಿಷೇಕ ಸ್ನಪನ. ಗಣಪತಿ ಪೂಜನ, ಸ್ವಸ್ತಿವಾಚನ ಆವಾಹಿತ ದೇವತಾ ಪೂಜನ ಯಜ್ಞಾರಂಭ ಶತಕಲಶಾಭಿಷೇಕ ಸ್ನಪನ ನಡೆಯಿತು.

ಜೊತೆಗೆ, ಲಘುಪೂರ್ಣಾಹುತಿ, ಮಹಾಮಂಗಳಾರತಿ, ಗೋಪೂಜೆ, ಮಧ್ವಗುರುಪೂಜೆ, ಗುರುಭಿಕ್ಷೆ ಸುವಾಸಿನ ಬ್ರಾಹ್ಮಣ ಆರಾಧನೆ ಸಮಾರಾಧನೆ ನಡೆಯಿತು .
ಗುರುವಾರ (ನ 9) ಬೆಳಗ್ಗೆ 5ಕ್ಕೆ ದೇವತಾ ಪ್ರಾರ್ಥನೆ ಯಮುನಾ ಪೂಜೆ, ಕಲಶ ಪೂರಣ, ಗಣಪತಿ ಪೂಜನ ಪೂರ್ವಕ ಧಾರ್ಮಿಕ ವಿಧಿಗಳ ಆರಂಭ, ಏಕೋತ್ತರ ಸಹಸ್ರ ಕಲಶ ಸ್ನಪನ ಕಲಶಾಭಿ ಮಂತ್ರಣ, ಪಂಚಾಮೃತ ಕಲಶಾಭಿಷೇಕ,
ಯಜ್ಞದಲ್ಲಿ ಆವಾಹಿತ ದೇವತಾ ಪೂಜನ ಪೂರ್ವಕ ಯಜ್ಞಾರಂಭ ನಿತ್ಯಹವನ, ಸಾನಿಧ್ಯ ಹವನ, ಕಾಶೀಮಠಾಧೀಶ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ನೆರವೇರಲಿದೆ.
ಇದಾದ ನಂತರ ಬೆಳಿಗ್ಗೆ 9.30ಕ್ಕೆ ಪದ್ಮಸಂಹಿತ ಆಗಮರೀತ್ಯಾ ಸಹಸ್ರಕುಂಭಾಭಿಷೇಕ, ಬ್ರಹ್ಮಕಲಶಾಭಿಷೇಕ, ವರ್ಧಿನೀಕಲಶಾಭಿಷೇಕ, ಗಂಗಾಜಲಾಭಿಷೇಕ, ಪ್ರಸನ್ನ ಪೂಜೆ, ಅಷ್ಠಮಂಗಲದರ್ಶನ, ಪಟ್ಟಕಾಣಿಕೆ, ಮಹಾ ಪ್ರಸಾದ, ಯಜ್ಞದಲ್ಲಿ ದೇವರ ಆಗಮನ ಪೂರ್ಣಾಹುತಿ, ಯಜ್ಞಾರತಿ ಶ್ರೇಯೋಗ್ರಹಣ ಪ್ರಸಾದ, ಉತ್ತರ ಪೂಜೆ, ಮಹಾ ಪೂಜೆ, ಗೋಪೂಜೆ, ಗುರುಭಿಕ್ಷೆ, ಬ್ರಾಹ್ಮಣ ಸಂತರ್ಪಣೆ, ಭೂರಿ ಸಮಾರಾಧನೆ ನಡೆಯಲಿದೆ.
ಬಳಿಕ ಸಾಯಂಕಾಲ ಸಭಾಕಾರ್ಯಕ್ರಮ ಶ್ರೀಗುರುಗಳಿಗೆ ಪಾದಪೂಜೆ, ವೈದಿಕ ಸಂಭಾವನೆ, ಶ್ರೀಗುರುಗಳ ಅಮೃತ ಹಸ್ತಗಳಿಂದ ಸೇವಾದಾರರಿಗೆ ಸನ್ಮಾನ, ಆಶೀರ್ವಚನ ಮಂತ್ರಾಕ್ಷತೆ ,ರಾತ್ರಿ ಪೂಜೆ, ಉತ್ಸವ, ವಸಂತ ಪೂಜೆ ಅಷ್ಠಾವಧಾನ ಸೇವೆ ನಡೆಯಲಿರುವುದು. (ಚಿತ್ರ : ಮಂಜು ನೀರೇಶ್ವಾಲ್ಯ)
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications