ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ: ಕಾಂಗ್ರೆಸ್ ಗೆ ಶಕ್ತಿ ಸಿಗಲಿದೆ ಎಂದ ಬಿ. ಜನಾರ್ಧನ ಪೂಜಾರಿ
ಮಂಗಳೂರು, ಜನವರಿ 24: ಪ್ರಿಯಾಂಕ ಗಾಂಧಿ ನೆಹರೂ ಕುಟುಂಬದ ಕುಡಿ. ಪ್ರಿಯಾಂಕ ಆಗಮನ ಕಾಂಗ್ರೆಸ್ ಗೆ ದೊಡ್ಡ ಶಕ್ತಿಯಾಗಿದ್ದು, ಕಾಂಗ್ರೆಸ್ ಗೆ ಇಷ್ಟರವರೆಗೆ ಸಿಗದ ಶಕ್ತಿ ಸಿಗಲಿದೆ ಎಂದು ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ ಹೇಳಿದರು.
ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶ ಸ್ವಾಗತಿಸಿದ ಶಿವಸೇನೆ
ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ಶಕ್ತಿ ಇದೆ. ಆ ಶಕ್ತಿ ಪ್ರಿಯಾಂಕಾ ಬಂದ ಮೇಲೆ ಜಾಸ್ತಿಯಾಗಲಿದೆ. ಮೋದಿಯವರಿಗೆ ನಿದ್ದೆ ಬಾರದ ರೀತಿ ಪ್ರಿಯಾಂಕಾ ಕೆಲಸ ಮಾಡಲಿದ್ದಾರೆ ಎಂದರು.
'3ವರ್ಷದ ಹಿಂದೆ ಪ್ರಿಯಾಂಕಾ ರಾಜಕೀಯಕ್ಕೆ ಬಂದಿದ್ದರೆ ಕತೆ ಬೇರೆ ಇತ್ತು'
ರಾಬರ್ಟ್ ವಾದ್ರಾ ಮೇಲಿನ ಪ್ರಕರಣ ಸಾಬೀತಾಗಿಲ್ಲ. ಆದರೆ ಪ್ರಿಯಾಂಕಾಗೆ ಕಾಂಗ್ರೆಸ್ ಅಧಿಕಾರ ನೀಡುತ್ತದೆ ಎಂದ ಜನಾರ್ಧನ ಪೂಜಾರಿ ಅವರು ಬಿಜೆಪಿಯೂ ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ಮಾಡಿದೆ ಎಂದು ಆರೋಪಿಸಿದರು.
ಶಾಸಕ ಆನಂದ್ ಸಿಂಗ್ ಗೆ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಕರ್ನಾಟಕದಲ್ಲಿ ರಾಜಕೀಯ ಕೊಳಕಾಗಿದೆ. ನಾನು ಮಾಡಿದ್ದೇ ಸರಿ ಎಂಬ ಭಾವನೆ ಬಂದಿದೆ. ಅದಕ್ಕೆ ದಾರಿಯಲ್ಲಿ ಪೆಟ್ಟು ತಿಂದಿದ್ದಾರೆ. ಜನ ಪೆಟ್ಟು ಕೊಡೋದು ಮಾತ್ರ ಬಾಕಿಯಿದೆ ಎಂದು ನುಡಿದರು.