ಮಂಗಳೂರು-ಓವರ್ ಪಾಸ್ ನಿರ್ಮಾಣಕ್ಕೆ ಆರುನೂರು ಮರಗಳ ಮಾರಣಹೋಮಕ್ಕೆ ಸಿದ್ಧತೆ
ಮಂಗಳೂರು, ಜುಲೈ 20: ರಸ್ತೆ ಅಭಿವೃದ್ಧಿ ನೆಪದಲ್ಲಿ ವೃಕ್ಷಗಳು ಧರೆಗುರುತ್ತಲೇ ಇರುತ್ತದೆ. ನೂರಾರು ವರ್ಷಗಳಿಂದ ಬೆಳೆದ ಮರಗಳು ರಸ್ತೆ ಅಗಲೀಕರಣದಡಿಯಲ್ಲಿ ಸಮಾಧಿಯಾಗುತ್ತಿರುತ್ತದೆ. ಆದರೆ ಬೆಕ್ಕಿಗೆ ಗಂಟೆಕಟ್ಟುವವರು ಯಾರು? ಎಂಬಂತೆ ಕಡಿದ ಮರಗಳಿಗೆ ಪರ್ಯಾಯವಾಗಿ ಮತ್ತೆ ಗಿಡಗಳನ್ನು ನೆಡುವವರು ಯಾರು ಅನ್ನೋದೆ ಪರಿಸರಪ್ರಿಯರಿಗೆ ಎದುರಾದ ಯಕ್ಷಪ್ರಶ್ನೆಯಾಗಿದೆ.
ನಾವೀಗ ಅಭಿವೃದ್ಧಿಯ ಯುಗದಲ್ಲಿದ್ದೇವೆ. ಕಾಂಕ್ರಿಟ್ ಕಾಡಿನೊಳಗಿರುವ ನಮಗೆ ಪ್ರಕೃತಿದತ್ತ ಹಸಿರು ಗಿಡಮರಗಳು ಬೇಡವಾಗಿದೆ. ಪರಿಸರಪ್ರೇಮಿಗಳು ಮರ ಕಡಿಯುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರೂ, ಅದಕ್ಕೆ ಕ್ಯಾರೇ ಎನ್ನದೆ ರಾಜ್ಯ ಸರಕಾರ, ಅಧಿಕಾರಿಗಳು ಅಭಿವೃದ್ಧಿ ಹೆಸರಿನಲ್ಲಿ ಮರಗಳ ಬುಡ ಉರುಳಿಸುತ್ತಲೇ ಇದೆ.

ಇದೀಗ ಎನ್ಎಚ್ಐ ವಾಹನ ದಟ್ಟಣೆ ನಿಯಂತ್ರಣಕ್ಕೆ ನಂತೂರು ಜಂಕ್ಷನ್ ಎಂದು ಕೆಪಿಟಿ ಜಂಕ್ಷನ್ವೆರೆಗೆ 1.6 ಕಿ.ಮೀ ವ್ಯಾಪ್ತಿಯಲ್ಲಿ ವೆಹಿಕ್ಯುಲರ್ ಓವರ್ ಪಾಸ್ 602 ಮರಗಳನ್ನು ತೆರವುಗೊಳಿಸಲು ಗುರುತಿಸಲಾಗಿದೆ. ಇವುಗಳಲ್ಲಿ 370 ಮರಗಳನ್ನು ಸ್ಥಳಾಂತರಿಸಬಹುದು. ಇನ್ನುಳಿದಂತೆ 232 ಮರಗಳನ್ನು ಕಡಿಯಲೇಬೇಕಾದ ಅನಿವಾರ್ಯತೆಯಿದೆ ಎಂದು ಹೇಳಲಾಗಿದೆ.
ಪರಸರ ಪ್ರೇಮಿಗಳಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಅಭಿವೃದ್ಧಿ ಕಾರ್ಯಕ್ಕೆ ತಮ್ಮದೇನು ತಕರಾರು ಇಲ್ಲ. ಆದರೆ ಪದೇಪದೇ ಅಭಿವೃದ್ಧಿ ನೆಪದಲ್ಲಿ ಮರಗಳ ಮಾರಣಹೋಮವೇಕೆ. ಈಗಾಗಲೇ ಭೂಮಿಯ ತಾಪಮಾನ ಏರಿಕೆಯಾಗುತ್ತಿದೆ. ಅತಿವೃಷ್ಟಿ, ಅನಾವೃಷ್ಟಿಗಳಿಂದ ಜನರು ಕಂಗಾಲಾಗಿದ್ದಾರೆ. ಆದರೆ ಅಧಿಕಾರಿಗಳು, ಸರಕಾರ ಮಾತ್ರ ವಾಸ್ತವಾಂಶಗಳನ್ನು ಅರಿಯದೆ, ಅಧ್ಯಯನ ನಡೆಸದೆ ಬೀರಿ ಅಭಿವೃದ್ಧಿಯ ಜಪ ಮಾಡುತ್ತಿದ್ದಾರೆ.

ಮರಗಿಡಗಳನ್ನು ಉಳಿಸಿ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಿಲ್ಲವೇ. ಅದಕ್ಕೆ ಇಚ್ಛಾಶಕ್ತಿ ಬೇಕು. ಕಲ್ಲಡ್ಕದಲ್ಲಿ ಮಸೀದಿ, ಮಂದಿರಗಳನ್ನು ಉಳಿಸಿ ರಸ್ತೆ ಅಭಿವೃದ್ಧಿ ಮಾಡಲು ಸಾಧ್ಯವಿದೆ ಎನ್ನುವುದಾದಲ್ಲಿ ಕೆಪಿಟಿಯಲ್ಲೂ ಆ ಪ್ರಯತ್ನವಾಗಲಿ ಎಂಬುದು ಪರಿಸರ ಪ್ರೇಮಿಗಳ ಆಗ್ರಹ.
ಪರ್ಯಾಯ ಮೇಲ್ಸೇತುವೆಯ ಬಗ್ಗೆ ಪರಿಸರ ಪ್ರೇಮಿಗಳ ಸಲಹೆ ಬೆನ್ನಲ್ಲೇ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆದರೆ ಅದು ಪ್ರಸಕ್ತ ಯೋಜನೆಗಿಂತ ಅಧಿಕ ವೆಚ್ಚದಾಯಕವೆಂದು ಎನ್ಎಚ್ ಎಐ ಅಧಿಕಾರಿಗಳು ವಾದ. ಆದರೆ ಮಂಗಳೂರಿನ ಸೂಕ್ಷತೆಯನ್ನು ಗಮನದಲ್ಲಿರಿಸಿ ವೆಚ್ಚ ಹೆಚ್ಚಾದರೂ ಮರಗಳನ್ನು ಉಳಿಸಿ ವರ್ಟಿಕಲ್ ಹೈವೇ ನಿರ್ಮಾಣದ ಅಗತ್ಯವಿದೆ ಎಂದು ಪರಿಸರ ಸ್ನೇಹಿಗಳು ಆಗ್ರಹಿಸಿದ್ದಾರೆ..

ಎನ್ಎಚ್ಎಐಯವರಿಂದ ಈಗಿನ ಯೋಜನೆಯ ಡಿಪಿಆರ್ ಪಡೆದು ಪಡೆದು ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ. ಈಗಿನ ಮಟ್ಟದಿಂದ ಸುಮಾರು 7.5 ಅಡಿಯಷ್ಟು ಹೆದ್ದಾರಿಯನ್ನು ಅಗೆದು ತಳಮಟ್ಟದಲ್ಲಿ ಕೊಂಡೊಯ್ಯಲಾಗುವುದು, ಕೆಪಿಟಿ ಜಂಕ್ಷನ್ ಹಾಗೂ ನಂತೂರು ಜಂಕ್ಷನ್ಗಳಲ್ಲಿ ವಾಹನ ಮೇಲೇತುವೆ ಬರಲಿದೆ. ಇದು ಒಟ್ಟು 40 ಕೋಟಿ ರೂ. ಯೋಜನೆಯಾಗಿದೆ.
ರಸ್ತೆ ಅಭಿವೃದ್ಧಿ ಕಾಮಗಾರಿಗೆ ತಮ್ಮದೇನು ತಕರಾರಿಲ್ಲ. ಆದರೆ ಸಾಧ್ಯವಾದಷ್ಟು ಮರಗಳನ್ನು ಉಳಿಸಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸುವಂತೆ ಪರಿಸರ ಪ್ರೇಮಿಗಳು ಎನ್ಎಚ್ಐ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಅಭಿವೃದ್ಧಿಗೆ ಮರಗಳ ಬುಡಕ್ಕೆ ಕೊಡಲಿಯೇಟು ಬೇಡ. ಓವರ್ ಪಾಸ್ ನಿರ್ಮಾಣಕ್ಕೆ ಮರಗಳನ್ನು ಉಳಿಸಿ ಪರಿಸರ ಪ್ರೇಮಿಗಳೇ ಸೇರಿ ಪ್ಲ್ಯಾನ್ ಮಾಡಿದ್ದೇವೆ. ಅದನ್ನು ತಾವು ಪರಿಗಣಿಸಬಹುದಲ್ಲ ಎಂದು ಪರಿಸರ ಪ್ರೇಮಿಗಳು ಹೇಳಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications