ಗುದನಾಳದೊಳಗೆ ಚಿನ್ನವಿಟ್ಟುಕೊಂಡು ಸಾಗಿಸುತ್ತಿದ್ದವನ ಬಂಧನ
ಮಂಗಳೂರು, ಏಪ್ರಿಲ್ 20 : ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸುತ್ತಿದ್ದ ಪ್ರಯಾಣಿಕನೋರ್ವನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ, ಸುಮಾರು 10.5 ಲಕ್ಷ ರು. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಕಾಸರಗೋಡು ಮೂಲದ ಅಬ್ದುಲ್ ರಾಝಕ್ (49) ಎಂಬುದಾಗಿ ಗುರುತಿಸಲಾಗಿದೆ. ಬಂಧಿತನಿಂದ ಸುಮಾರು 10.5 ಲಕ್ಷ ರು. ಮೌಲ್ಯದ ಒಟ್ಟು 349.80 ಗ್ರಾಂ ತೂಕದ ಚಿನ್ನದ ಬಾರ್ಗಳನ್ನು ಅಧಿಕರಿಗಳು ವಶಪಡಿಸಿಕೊಂಡಿದ್ದಾರೆ.

ದುಬೈನಿಂದ ಸ್ಪೈಸ್ ಜೆಟ್ ವಿಮಾನದ ಮೂಲಕ ಮಂಗಳೂರಿಗೆ ಸುಮಾರು 6.೩೦ಕ್ಕೆ ತಲುಪಿದ್ದು ನಂತರ, ಪ್ರಯಾಣಿಕರ ಸಂಪೂರ್ಣ ವಿಚಾರಣೆ ಮತ್ತು ಪರೀಕ್ಷೆ ಮಾಡುವ ವೇಳೆ ಗುದನಾಳದೊಳಗೆ ನಾಲ್ಕು ಚಿನ್ನದ ಬಾರ್ ಗಳನ್ನು ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ.
ವೈದ್ಯಕೀಯ ವೃತ್ತಿಪರರ ಸಲಹೆಯನ್ನು ತೆಗೆದುಕೊಂಡ ನಂತರ ಚಿನ್ನವನ್ನು ಗುದನಾಳದಿಂದ ಸುರಕ್ಷಿತವಾಗಿ ತೆಗೆಯಲಾಯಿತು. ಮಂಗಳೂರು, ಮುಂಬೈ, ದೆಹಲಿ, ಅಹ್ಮದಾಬಾದ್, ಚೆನ್ನೈ, ಕೊಚ್ಚಿ, ತಿರುವನಂತಪುರ, ಕೋಳಿಕೋಡು, ಬೆಂಗಳೂರು, ಗೋವಾ ಮತ್ತು ಲಕ್ನೋದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಅಕ್ರಮವಾಗಿ ಚಿನ್ನ ಸಾಗಿಸಿದ್ದಾನೆಂದ ಆರೋಪಿ ವಿಚಾರಣೆ ವೇಳೆ ಒಪಿಕೊಂಡಿದ್ದಾನೆ.












Click it and Unblock the Notifications