ಬರಾವಲೋಕನ: ಕಾಣೆಯಾಗಿರೋ ಮಂಗಳೂರಿನ 64 ಕೆರೆ ಹುಡಿಕಿಕೊಡಿ ಪ್ಲೀಸ್!!
ಮಂಗಳೂರು, ಮಾರ್ಚ್ 25: ಬೇಸಿಗೆ ಶುರುವಾಗಿದೆ. ಕಡಲ ತೀರದಲ್ಲಿರುವ ಮಂಗಳೂರಿನಲ್ಲಿ ಅಗಾಧ ಧಗೆ ಶುರುವಾಗಿದೆ. ಎಲ್ಲೆಡೆಯೂ ನೀರಿನ ಹಾಹಾಕಾರವಿದೆ. ಮಂಗಳೂರು ನಗರ ವಾಸಿಗಳು ಮೂರೂ ದಿನಕ್ಕೊಮ್ಮೆ ಒಂದು ದಿನ ನೀರು ಬಳಸುವ ಪರಿಸ್ಥಿತಿ ಬಂದಿದೆ.
ಅಂದಹಾಗೆ, ಮಂಗಳೂರಿನಲ್ಲಿ 64 ಕೆರೆಗಳಿವೆ ಎಂದು ಹೇಳಲಾಗಿದೆ. ಆದರೆ, ಮಂಗಳೂರಿನಲ್ಲಿರುವ ನೀರಿನ ಬವಣೆ ನೋಡಿದರೆ, ಇದು ಇಷ್ಟು ಕೆರೆಗಳಿರುವ ಊರಿನಲ್ಲಿ ನೀರಿಗೇಕೆ ಬರ ಎಂದೆನಿಸಬಹುದು. ಇದೇ ವಿಚಾರದ ಬೆನ್ನು ಹತ್ತಿ ಕೆರೆಗಳನ್ನು ಹುಡುಕ ಹೊರಟರೆ ನಿಮಗೆ ನಿರಾಸೆಯಾಗುವುದಂತೂ ಗ್ಯಾರಂಟಿ.

ಏಕೆಂದರೆ ಹಾಗೆ ಹೊರಟರೆ ನಿಮಗೆ ಸಿಗುವುದು ಕೇವಲ 4 ಅಥವಾ 5 ಕೆರೆಗಳು ಮಾತ್ರ. ಅವಾದರೂ ನೀರಿನಿಂದ ಸಂಪದ್ಭರಿತವಾಗಿವಯೇ ಎಂದರೆ ಇಲ್ಲ ಎಂಬ ನಿರಾಶಾದಾಯಕ ಉತ್ತರವಷ್ಟೇ ಬರುತ್ತದೆ. ಹಾಗಾದರೆ, ಉಳಿದ ಕೆರೆಗಳೆಲ್ಲಿ? ಎಂಬ ಪ್ರಶ್ನೆಗೆ ಖುದ್ದು ಮಹಾನಗರ ಪಾಲಿಕೆಯಿಂದಲೂ ಸೂಕ್ತ ಉತ್ತರವಿಲ್ಲ!!
ಮಂಗಳೂರು ಮಹಾನಗರ ಪಾಲಿಕೆಯ ಲೆಕ್ಕಾಚಾರದಂತೆ ನಗರ ವ್ಯಾಪ್ತಿಯಲ್ಲಿ ೬೪ ಕೆರೆಗಳಿದ್ದಾವೆ. ಈ ಕೆರೆಗಳು ಎಲ್ಲಿ ಇದ್ದಾವೆ ಎಂಬುದನ್ನು ಮಾತ್ರ ಕೇಳುವಂತಿಲ್ಲ. ನಗರದ್ಲಲಿ ಈಗ ಕಾಣಿಸುತ್ತಿರುವುದು ೪ ಅಥವಾ ೫ ಕೆರೆಗಳು ಮಾತ್ರ ಅಂದರೆ ೬೦ ಕೆರೆಗಳು ಎಲ್ಲಿ ಮಾಯವಾದವು. ಕೆರೆಗಳು ಪ್ರಭಾವಿತರ ಕಟ್ಟಡದ ಅಡಿಯಲ್ಲಿ ಜೀವ ಬಿಟ್ಟಿವೆ. ನಗರದ ನಾಗರಿಕರು ಕೆರೆಗಳಿಗೆ ಮರು ಜೀವ ಒದಗಿಸಲು ಮುಂದಾಗಬೇಕಿದೆ.
ಮಂಗಳೂರು ನಗರದ ಸರಿಸುಮಾರು ೫ ಲಕ್ಷ ಜನ ಸಂಖ್ಯೆಗೆ ೧೦೦ ಎಂಎಲ್ ಡಿ ನೀರಿನ ಅವಶ್ಯಕತೆ ಇದೆ. ಕೆರೆ ಮತ್ತು ಬಾವಿಗಳನ್ನು ಸರಿಯಾಗಿ ನಿಭಾಯಿಸಿದ್ದಾದರೆ ಅರ್ಧದಷ್ಟು ನೀರು ಇಲ್ಲಿಯೇ ಸಿಗುತ್ತದೆ, ಬೇಸಿಗೆಯಲ್ಲಿ ಪರದಾಡುವುದು ತಪ್ಪುತ್ತದೆ. ಆದರೆ ಕೆರೆಗಳೇ ಮಾಯವಾದರೆ ನೀರು ಹುಡುಕುವುದು ಎಲ್ಲಿ?

ಮಂಗಳೂರು ನಗರದಲ್ಲಿ ಸಾವಿರದಷ್ಟು ಖಾಸಗಿ ಬಾವಿಗಳಿವೆ. ಆದರೆ ಅದರಲ್ಲಿ ಕುಡಿಯಲು ಯೋಗ್ಯವಾದ ನೀರು ಸಿಗುವ ಬಾವಿಗಳ ಸಂಖ್ಯೆ ೧೩೫ ಮಾತ್ರ. ಹಾಗಾದರೆ ಉಳಿದ ಬಾವಿಗಳ ನೀರು ಕುಡಿಯಲು ಯೋಗ್ಯವಲ್ಲ ಯಾಕೆ, ಯೋಗ್ಯವಾಗಿಸುವ ಹೊಣೆಗಾರಿಕೆ ಯಾರದು? ಇಂಥ ಪ್ರಶ್ನೆಗಳ ಬೆಂಬೆತ್ತಿ ಇರುವ ನೀರಿನ ಸದ್ಬಳಕೆ ಬಗ್ಗೆ ಯೋಚಿಸುವ ಆಡಳಿತಗಾರರು ಮಂಗಳೂರು ಮಹಾನಗರ ಪಾಲಿಕೆಗೆ ಬೇಕಾಗಿದ್ದಾರೆ.
ನೀರಿನ ಸಮಸ್ಯೆ ಪರಿಹಾರವಾಗಬೇಕಾದರೆ ಕಳೆದು ಹೋಗಿರುವ ೬೦ ಕೆರೆಗಳನ್ನು ಹುಡುಕುವ ಕೆಲಸ ಆರಂಭವಾಗಬೇಕು ಅತಿಕ್ರಮಣವಾಗಿದ್ದರೆ ತೆರವುಗೊಳಿಸುವ ಕಾರ್ಯ ಮಾಡಬೇಕು . ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿದ್ದಲ್ಲಿ ನೀರಿನ ಸಮಸ್ಯೆ ಪರಿಹಾರವಾಗುವ ಲಕ್ಷಣಗಳನ್ನು ಕಾಣಬಹುದಾಗಿದೆ.
-
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply












Click it and Unblock the Notifications