ಸುರತ್ಕಲ್ನಲ್ಲಿ ಮುಸ್ಲಿಂ ವ್ಯಾಪಾರಿಯ ಕೊಲೆ: ನಿಷೇಧಾಜ್ಞೆ, ಮದ್ಯ ಮಾರಾಟ ಬಂದ್
ಮಂಗಳೂರು, ಡಿಸೆಂಬರ್, 25: ಮಂಗಳೂರು ನಗರದ ಸುರತ್ಕಲ್ ಸಮೀಪದ ಕೃಷ್ಣಾಪುರದಲ್ಲಿ ನಿನ್ನೆ ರಾತ್ರಿ ಜಲೀಲ್ ಎಂಬ ಮುಸ್ಲಿಂ ವ್ಯಾಪಾರಿಯ ಹತ್ಯೆ ನಡೆದಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ದೃಷ್ಟಿಯಿಂದ ಸುರತ್ಕಲ್ ಸುತ್ತಮುತ್ತಲಿನ 4 ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸುರತ್ಕಲ್, ಬಜಪೆ, ಕಾವೂರು ಹಾಗೂ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ನಿನ್ನೆ ರಾತ್ರಿ ಕೃಷ್ಣಾಪುರ ನಾಲ್ಕನೇ ಬ್ಲಾಕ್ನ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳಿಬ್ಬರು, ಅಂಗಡಿ ಮಾಲೀಕ ಜಲೀಲ್ ಎಂಬುವರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 6ರಿಂದ ಡಿಸೆಂಬರ್ 27ರ ಬೆಳಗ್ಗೆ 6 ರವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಯಕ್ಷಗಾನ ರಂಗಸ್ಥಳದಲ್ಲೇ ಮಡಿದ ಕಲಾವಿದರು ಯಾರ್ಯಾರು..?
ಸರ್ಕಾರದಿಂದ
ನಿಷೇಧಾಜ್ಞೆ
ಜಾರಿ
ಈ
ನಿಷೇಧಾಜ್ಞೆ
ಸರ್ಕಾರದಿಂದ
ಮಾಡಲಾಗಿದೆ.
ಮತ್ತು
ಸರ್ಕಾರದ
ಆದೇಶದಂತೆ
ನಡೆಸಲ್ಪಡುವ
ಯಾವುದೇ
ಕಾರ್ಯಕ್ರಮ,
ಸಭೆ
ಸಮಾರಂಭಗಳಿಗೆ
ಈ
ನಿಯಮ
ಅನ್ವಯಿಸುವುದಿಲ್ಲ.
ಅಲ್ಲದೆ
ಕ್ರಿಸ್ಮಸ್
ಆಚರಣೆ,
ಧಾರ್ಮಿಕ
ಕಾರ್ಯಕ್ರಮ
ಮತ್ತು
ಅಗತ್ಯ
ತುರ್ತು
ಸೇವೆಗಳಿಗೆ
ಈ
ನಿಯಮ
ಅನ್ವಯಿಸುವುದಿಲ್ಲ
ಎಂದು
ತಿಳಿಸಲಾಗಿದೆ.
ಕೆಲಸದ ಪಾಳಿಯ ಬಗ್ಗೆ ಸೂಚನೆಗಳು
ಮುನ್ನೆಚ್ಚರಿಕೆ ಕ್ರಮ ಹಿನ್ನೆಲೆಯಲ್ಲಿ ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಅಲ್ಲದೆ ಸುರತ್ಕಲ್, ಬಜಪೆ, ಕಾವೂರು, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಕೈಗಾರಿಕಾ ಸಂಸ್ಥೆಗಳ ಕೆಲಸದ ಪಾಳಿಯ ಬಗ್ಗೆ ಕೆಲವೊಂದು ಸೂಚನೆಯನ್ನು ನೀಡಲಾಗಿದೆ. ಡಿಸೆಂಬರ್ 25 ಹಾಗೂ ಡಿಸೆಂಬರ್ 26ರಂದು ಸಂಜೆ 6 ಗಂಟೆವರೆಗೆ ಮಾತ್ರ ತೆರೆಯುವಂತೆ ಸೂಚಿಸಲಾಗಿದೆ. ಹಾಗೆಯೇ ಸಂಜೆ 6 ರಿಂದ ಬೆಳಗ್ಗೆ 6 ಗಂಟೆವರೆಗೆ ಹೊರಗಡೆ ಓಡಾಡದಂತೆ ಅಲ್ಲಿನ ಜನರಿಗೆ ಸೂಚಿಸಲಾಗಿದೆ.