ಕರಾವಳಿಗೆ ಸೌತೆ ಕದಿಯಲು ಬಂದು ಸಿಕ್ಕಿಬಿದ್ದರು
ಮಂಗಳೂರು, ಏ.9: ಭಾರತೀಯ ಕಡಲ ವಿಶೇಷ ಆರ್ಥಿಕ ವಲಯ(ಇಇಜಡ್) ಗಡಿಯನ್ನು ದಾಟಿ ಕಡಲ ಸೌತೆ ಕದಿಯುತ್ತಿದ್ದ ಶ್ರೀಲಂಕನ್ನರನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಬಂಧಿಸಿದ್ದಾರೆ.
ಸ್ಥಳೀಯ ಮೀನುಗಾರರ ಮಾಹಿತಿ ಆಧಾರಿಸಿ ಬಲೆ ಬೀಸಿದ ಭಾರತೀಯ ಕರಾವಳಿ ತಟ ರಕ್ಷಣಾ ಪಡೆ ICGS ರಾಜದೂತ್ ಹಡಗಿನ ಮೂಲಕ ನವಮಂಗಳೂರು ಬಂದರಿನಿಂದ 188 ನಾಟಿಕಲ್ ಮೈಲು ದೂರದ ಚೆರಿಯಪಾನಿ ರೀಫ್ ನಲ್ಲಿ ಶ್ರೀಲಂಕಾದ ಬೋಟ್ ಪತ್ತೆ ಹಚ್ಚಿದ್ದಾರೆ. ಅದರಲ್ಲಿದ್ದ 16 ಮಂದಿ ಶ್ರೀಲಂಕಾ ಮೀನುಗಾರರನ್ನು ಬಂಧಿಸಲಾಗಿದೆ. ಭಾರತೀಯ ಮೀಸಲು ಆರ್ಥಿಕ ವಲಯದಲ್ಲಿ ಅಕ್ರಮ ಪ್ರವೇಶ ಹಾಗೂ ಕಡಲ ಸೌತೆ(ಏನಿದು sea cucumber?) ಕದ್ದ ಆರೋಪವನ್ನು ಇವರ ಮೇಲೆ ಹೊರೆಸಲಾಗಿದೆ. ಬೋಟ್, ಸುಸಜ್ಜಿತ ಡೈವಿಂಗ್ ಸಾಮಗ್ರಿಗಳ ಸಹಿತ 1.2 ಲಕ್ಷ ಡಾಲರ್ ವೌಲ್ಯದ 2 ಟನ್ ಕಡಲು ಸೌತೆ ವಶಪಡಿಸಿಕೊಳ್ಳಲಾಗಿದೆ.

ಕರ್ನಾಟಕ ಕರಾವಳಿ ತಟರಕ್ಷಣಾ ಪಡೆಯ ಡಿಐಜಿ ರಾಜಮಣಿ ಶರ್ಮ ಅವರು ಪಣಂಬೂರಿನ ಕರಾವಳಿ ತಟರಕ್ಷಣಾ ಪಡೆಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ವಿವರ ನೀಡಿದರು. ಶ್ರೀಲಂಕಾದ ಸಮುದ್ರದ ಮೀನುಗಾರಿಕೆ ಪರವಾನಿಗೆ ಹೊಂದಿರುವ ಕೊಲಂಬೊ ಮೆರೈನ್ ಎಂಬ ಬೋಟನ್ನು ಕರಾವಳಿ ತಟ ರಕ್ಷಣಾ ಪಡೆಯ ಹಡಗು ಪತ್ತೆಹಚ್ಚಿದ್ದು, ಅದರಲ್ಲಿದ್ದ 16 ಮೀನುಗಾರರನ್ನು ವಶಕ್ಕೆ ತೆಗೆದುಕೊಂಡಿದೆ. ಅಲ್ಲದೇ 1.2 ಲಕ್ಷ ಡಾಲರ್ ವೌಲ್ಯದ 2 ಟನ್ ತೂಕದ ವನ್ಯ ಪದಾರ್ಥ ಕಡಲು ಸೌತೆಯನ್ನು ವಶಪಡಿಸಿಕೊಳ್ಳಲಾಗಿದೆ.
ಲಕ್ಷದ್ವೀಪ, ಅಂಡಮಾನ್ ನಿಕೋಬಾರ್ ನಂಥ ದ್ವೀಪ ಪ್ರದೇಶಗಳಲ್ಲಿ ಕಂಡು ಬರುವ ಕಡಲು ಸೌತೆ ಔಷಧೀಯ ಗುಣವುಳ್ಳ ತರಕಾರಿಯಾಗಿದೆ. ಭಾರತದಲ್ಲಿ ಇದರ ಬಳಕೆ ಅಪರೂಪವಾಗಿದ್ದು, ಅಳಿವಿನಂಚಿನಲ್ಲಿರುವ ಈ ಕಾಡುತ್ಪನ್ನದ ಸಾಗಾಟ, ಬಳಕೆಯನ್ನು ಸರಕಾರ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಬಂಧಿತ ಶ್ರೀಲಂಕಾ ಮೀನುಗಾರರ ವಿಚಾರಣೆ ನಡೆಯುತ್ತಿದ್ದು, ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು

ರಾತ್ರಿ ವೇಳೆ ಮೀನುಗಾರರು ಹಡಗಿನಲ್ಲಿದ್ದ ಸುಸಜ್ಜಿತ ಡೈವಿಂಗ್ ಸಾಧನಗಳನ್ನು ಬಳಸಿ ಸಮುದ್ರ ತೀರದ ದ್ವೀಪ ಪ್ರದೇಶಗಳಿಗೆ ತೆರಳಿ ಅಲ್ಲಿಂದ ಕಡಲು ಸೌತೆಯನ್ನು ತಂದು ಹಡಗಿಗೆ ತುಂಬುತ್ತಿದ್ದರು. ಕಡಲು ಸೌತೆ ಕೆಡದಂತೆ ಐಸ್ ಹಾಕಿಡುತ್ತಿದ್ದರು. ಬಳಿಕ ಅವುಗಳನ್ನು ಬೋಟ್ ನಲ್ಲೇ ಬೇಯಿಸಿ ಉಪ್ಪು ಹಾಕಿ ಒಣಗಿ ಸುವ ಪ್ರಕ್ರಿಯೆಯನ್ನು ಅವರು ಮಾಡುತ್ತಿದ್ದರು. ಹಡಗಿನಲ್ಲಿದ್ದ ಎರಡು ಟನ್ ಕಡಲು ಸೌತೆಯಲ್ಲಿ 500 ಕಿಲೋದಷ್ಟು ಒಣಗಿಸಲಾಗಿತ್ತು. ಚೀನಾ ಮತ್ತು ಆಗ್ನೇಯ ಏಷ್ಯಾದಲ್ಲಿ ಈ ಕಡಲು ಉತ್ಪನ್ನಕ್ಕೆ ಬಹು ಬೇಡಿಕೆ ಇದೆ. ಇದನ್ನು ಅಲ್ಲಿ ಆಹಾರ ಪದಾರ್ಥವಾಗಿ, ಔಷಧಿಗಾಗಿ ಹಾಗೂ ಕಾಂತಿ ವರ್ಧಕಗಳಲ್ಲೂ ಇದನ್ನು ಉಪಯೋಗಿಸಲಾಗುತ್ತದೆ ಎಂದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications