ಕೊಡಿಯಾಲ ತೇರು, ರಥವೇರಿದ ವೆಂಕಟರಮಣ
ಮಂಗಳೂರು, ಫೆ.,7: ಇಲ್ಲಿನ ರಥ ಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುವ ಕೊಡಿಯಾಲ ತೇರು ಉತ್ಸವ ಸಂಭ್ರಮದಿಂದ ನಡೆದಿದೆ. ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಗಿದೆ. 6 ದಿನಗಳ ಪರ್ಯಂತ ನಡೆಯುವ ಕೊಡಿಯಾಲ್ ತೇರು ಅಥವಾ ಮಂಗಳೂರು ರಥೋತ್ಸವದ ಅಂಗವಾಗಿ ಕಾಶೀ ಮಠಾಧೀಶರಾದ ಸುಧೀಂದ್ರತೀರ್ಥ ಸ್ವಾಮೀಜಿಯವರ ಶಿಷ್ಯರಾದ ಸಂಯಮೀಂದ್ರತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮ ರಥೋರೋಹಣ ಉತ್ಸವ ವಿಜೃಂಭಣೆಯಿಂದ ನೆರವೇರಿಸಲಾಯಿತು.
ದೇಶ-ವಿದೇಶದಿಂದ ಬಂದಿರುವ ಗೌಡ ಸಾರಸ್ವತ ಸಮಾಜದವರು ಸೇರಿದಂತೆ ಎಲ್ಲಾ ಜಾತಿ, ಮತ ಪಂಥಗಳಿಗೆ ಸೇರಿದ ಭಕ್ತಾದಿಗಳು ಒಟ್ಟಿಗೆ ಕೂಡಿಕೊಂಡು ಭಗವಂತನ ಆಶೀರ್ವಾದ, ಕೃಪೆ ಬೇಡುತ್ತಾ, ಪಲ್ಲಕ್ಕಿಗಳಲ್ಲಿ ಶ್ರೀನಿವಾಸ, ವೀರ ವೆಂಕಟರಮಣ ದೇವರ ವಿಗ್ರಹಗಳನ್ನು ಹೊತ್ತು ಸಾಗಿದರು.
ವೆಂಕಟರಮಣ ದೇವರ ಮಾಘ ಮಾಸದ ಬ್ರಹ್ಮ ರಥಾಹೋರಣಕ್ಕೂ ಮುನ್ನ ದೇವರಿಗೆ ಪಂಚಾಮೃತ, ಶಿಯಾಳಭಿಷೇಕ, ಶುದ್ಧಾಭಿಷೇಕಗಳನ್ನು ಶ್ರೀಪಾದಂಗಳವರ ಶ್ರೀಕರಗಳಿಂದ ನೆರೆಸಲಾಗಿತ್ತು. ಗುರುವಾರ ರಾತ್ರಿ ಶ್ರೀದೇವರ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಈ ಶುಭ ಸಂದರ್ಭದ ಕೆಲವು ಚಿತ್ರಗಳನ್ನು ಮಂಜು ನೀರೇಶ್ವಾಲ್ಯ ಅವರು ಕಳಿಸಿದ್ದಾರೆ. ತಪ್ಪದೇ ನೋಡಿ....

ಕೊಡಿಯಾಲ್ ಬೈಲ್ ತೇರು ಉತ್ಸವ ಸಂಭ್ರಮ
ವೆಂಕಟರಮಣ ದೇವರ ಬ್ರಹ್ಮ ರಥಾಹೋರಣ

ಕೊಡಿಯಾಲ್ ಬೈಲ್ ತೇರು ಜನರ ಸಂಭ್ರಮ
ವೆಂಕಟರಮಣ ದೇವರ ಬ್ರಹ್ಮ ರಥಾಹೋರಣ

ಕೊಡಿಯಾಲ್ ಬೈಲ್ ಸರತಿ ಸಾಲಿನಲ್ಲಿ ನಿಂತ ಭಕ್ತರು
ಮಂಗಳೂರಿನ ವೆಂಕಟರಮಣ ದೇವರ ಉತ್ಸವಕ್ಕೆ ಬಂದ ಜನರು ಸರತಿ ಸಾಲಿನಲ್ಲಿ ನಿಂತು ಪೂಜಾ ಕೈಂಕರ್ಯಗಳನ್ನು ವೀಕ್ಷಿಸಿದರು.

ಕೊಡಿಯಾಲ್ ದೇಗುಲದಲ್ಲಿ ಪೂಜಾ ಕೈಂಕರ್ಯ
ಕೊಡಿಯಾಲ್ ಬೈಲ್ ವೆಂಕಟರಮಣ ದೇಗುಲದಲ್ಲಿ ಗುರುವಾರ ನಡೆದ ಪೂಜಾ ಕೈಂಕರ್ಯ

ವೆಂಕಟರಮಣ ದೇವರಿಗೆ ವಿಶೇಷ ಅಭಿಷೇಕ
ಕೊಡಿಯಾಲ್ ಬೈಲ್ ವೆಂಕಟರಮಣ ದೇಗುಲದಲ್ಲಿ ಶ್ರೀದೇವರಿಗೆ ವಿಶೇಷ ಅಭಿಷೇಕ

ಶ್ರೀಪಾದಂಗಳವರಿಂದ ವಿಶೇಷ ಪೂಜೆ, ಅರ್ಚನೆ
ಕೊಡಿಯಾಲ್ ಬೈಲ್ ವೆಂಕಟರಮಣ ದೇಗುಲದಲ್ಲಿ ಶ್ರೀದೇವರಿಗೆ ಶ್ರೀಪಾದಂಗಳವರಿಂದ ವಿಶೇಷ ಪೂಜೆ, ಅರ್ಚನೆ, ಅಭಿಷೇಕ

ಶ್ರೀಪಾದಂಗಳವರಿಂದ ವಿಶೇಷ ಪೂಜೆ, ಅರ್ಚನೆ
ಶ್ರೀದೇವರಿಗೆ ಶ್ರೀಪಾದಂಗಳವರಿಂದ ವಿಶೇಷ ಪೂಜೆ, ಅರ್ಚನೆ, ಅಭಿಷೇಕ

ಶ್ರೀದೇವರಿಗೆ ಶ್ರೀಪಾದಂಗಳವರಿಂದ ಶ್ರೀರಕ್ಷೆ
ಕೊಡಿಯಾಲ್ ಬೈಲ್ ವೆಂಕಟರಮಣ ದೇಗುಲದಲ್ಲಿ ಶ್ರೀದೇವರಿಗೆ ಶ್ರೀಪಾದಂಗಳವರಿಂದ ಶ್ರೀರಕ್ಷೆ

ವೆಂಕಟರಮಣ ದೇವರಿಗೆ ವಿಶೇಷ ಆರತಿ
ಕೊಡಿಯಾಲ್ ಬೈಲ್ ವೆಂಕಟರಮಣ ದೇಗುಲದಲ್ಲಿ ಶ್ರೀದೇವರಿಗೆ ವಿಶೇಷ ಆರತಿ

ಪಲ್ಲಕ್ಕಿಗಳಲ್ಲಿ ಶ್ರೀದೇವರ ಉತ್ಸವ ಮೂರ್ತಿಗಳು
ಕೊಡಿಯಾಲ್ ಬೈಲ್ ನಲ್ಲಿ ಪಲ್ಲಕ್ಕಿಗಳಲ್ಲಿ ಶ್ರೀದೇವರ ಉತ್ಸವ ಮೂರ್ತಿಗಳನ್ನು ಹೊತ್ತು ಸಂಭ್ರಮಿಸಿದ ಭಕ್ತಾದಿಗಳು
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications