ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಿಯಾಲ ತೇರು, ರಥವೇರಿದ ವೆಂಕಟರಮಣ

By Mahesh
|
Google Oneindia Kannada News

ಮಂಗಳೂರು, ಫೆ.,7: ಇಲ್ಲಿನ ರಥ ಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುವ ಕೊಡಿಯಾಲ ತೇರು ಉತ್ಸವ ಸಂಭ್ರಮದಿಂದ ನಡೆದಿದೆ. ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಗಿದೆ. 6 ದಿನಗಳ ಪರ್ಯಂತ ನಡೆಯುವ ಕೊಡಿಯಾಲ್ ತೇರು ಅಥವಾ ಮಂಗಳೂರು ರಥೋತ್ಸವದ ಅಂಗವಾಗಿ ಕಾಶೀ ಮಠಾಧೀಶರಾದ ಸುಧೀಂದ್ರತೀರ್ಥ ಸ್ವಾಮೀಜಿಯವರ ಶಿಷ್ಯರಾದ ಸಂಯಮೀಂದ್ರತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮ ರಥೋರೋಹಣ ಉತ್ಸವ ವಿಜೃಂಭಣೆಯಿಂದ ನೆರವೇರಿಸಲಾಯಿತು.

ದೇಶ-ವಿದೇಶದಿಂದ ಬಂದಿರುವ ಗೌಡ ಸಾರಸ್ವತ ಸಮಾಜದವರು ಸೇರಿದಂತೆ ಎಲ್ಲಾ ಜಾತಿ, ಮತ ಪಂಥಗಳಿಗೆ ಸೇರಿದ ಭಕ್ತಾದಿಗಳು ಒಟ್ಟಿಗೆ ಕೂಡಿಕೊಂಡು ಭಗವಂತನ ಆಶೀರ್ವಾದ, ಕೃಪೆ ಬೇಡುತ್ತಾ, ಪಲ್ಲಕ್ಕಿಗಳಲ್ಲಿ ಶ್ರೀನಿವಾಸ, ವೀರ ವೆಂಕಟರಮಣ ದೇವರ ವಿಗ್ರಹಗಳನ್ನು ಹೊತ್ತು ಸಾಗಿದರು.

ವೆಂಕಟರಮಣ ದೇವರ ಮಾಘ ಮಾಸದ ಬ್ರಹ್ಮ ರಥಾಹೋರಣಕ್ಕೂ ಮುನ್ನ ದೇವರಿಗೆ ಪಂಚಾಮೃತ, ಶಿಯಾಳಭಿಷೇಕ, ಶುದ್ಧಾಭಿಷೇಕಗಳನ್ನು ಶ್ರೀಪಾದಂಗಳವರ ಶ್ರೀಕರಗಳಿಂದ ನೆರೆಸಲಾಗಿತ್ತು. ಗುರುವಾರ ರಾತ್ರಿ ಶ್ರೀದೇವರ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಈ ಶುಭ ಸಂದರ್ಭದ ಕೆಲವು ಚಿತ್ರಗಳನ್ನು ಮಂಜು ನೀರೇಶ್ವಾಲ್ಯ ಅವರು ಕಳಿಸಿದ್ದಾರೆ. ತಪ್ಪದೇ ನೋಡಿ....

ಕೊಡಿಯಾಲ್ ಬೈಲ್ ತೇರು ಉತ್ಸವ ಸಂಭ್ರಮ

ಕೊಡಿಯಾಲ್ ಬೈಲ್ ತೇರು ಉತ್ಸವ ಸಂಭ್ರಮ

ವೆಂಕಟರಮಣ ದೇವರ ಬ್ರಹ್ಮ ರಥಾಹೋರಣ

ಕೊಡಿಯಾಲ್ ಬೈಲ್ ತೇರು ಜನರ ಸಂಭ್ರಮ

ಕೊಡಿಯಾಲ್ ಬೈಲ್ ತೇರು ಜನರ ಸಂಭ್ರಮ

ವೆಂಕಟರಮಣ ದೇವರ ಬ್ರಹ್ಮ ರಥಾಹೋರಣ

ಕೊಡಿಯಾಲ್ ಬೈಲ್ ಸರತಿ ಸಾಲಿನಲ್ಲಿ ನಿಂತ ಭಕ್ತರು

ಕೊಡಿಯಾಲ್ ಬೈಲ್ ಸರತಿ ಸಾಲಿನಲ್ಲಿ ನಿಂತ ಭಕ್ತರು

ಮಂಗಳೂರಿನ ವೆಂಕಟರಮಣ ದೇವರ ಉತ್ಸವಕ್ಕೆ ಬಂದ ಜನರು ಸರತಿ ಸಾಲಿನಲ್ಲಿ ನಿಂತು ಪೂಜಾ ಕೈಂಕರ್ಯಗಳನ್ನು ವೀಕ್ಷಿಸಿದರು.

ಕೊಡಿಯಾಲ್ ದೇಗುಲದಲ್ಲಿ ಪೂಜಾ ಕೈಂಕರ್ಯ

ಕೊಡಿಯಾಲ್ ದೇಗುಲದಲ್ಲಿ ಪೂಜಾ ಕೈಂಕರ್ಯ

ಕೊಡಿಯಾಲ್ ಬೈಲ್ ವೆಂಕಟರಮಣ ದೇಗುಲದಲ್ಲಿ ಗುರುವಾರ ನಡೆದ ಪೂಜಾ ಕೈಂಕರ್ಯ

ವೆಂಕಟರಮಣ ದೇವರಿಗೆ ವಿಶೇಷ ಅಭಿಷೇಕ

ವೆಂಕಟರಮಣ ದೇವರಿಗೆ ವಿಶೇಷ ಅಭಿಷೇಕ

ಕೊಡಿಯಾಲ್ ಬೈಲ್ ವೆಂಕಟರಮಣ ದೇಗುಲದಲ್ಲಿ ಶ್ರೀದೇವರಿಗೆ ವಿಶೇಷ ಅಭಿಷೇಕ

ಶ್ರೀಪಾದಂಗಳವರಿಂದ ವಿಶೇಷ ಪೂಜೆ, ಅರ್ಚನೆ

ಶ್ರೀಪಾದಂಗಳವರಿಂದ ವಿಶೇಷ ಪೂಜೆ, ಅರ್ಚನೆ

ಕೊಡಿಯಾಲ್ ಬೈಲ್ ವೆಂಕಟರಮಣ ದೇಗುಲದಲ್ಲಿ ಶ್ರೀದೇವರಿಗೆ ಶ್ರೀಪಾದಂಗಳವರಿಂದ ವಿಶೇಷ ಪೂಜೆ, ಅರ್ಚನೆ, ಅಭಿಷೇಕ

ಶ್ರೀಪಾದಂಗಳವರಿಂದ ವಿಶೇಷ ಪೂಜೆ, ಅರ್ಚನೆ

ಶ್ರೀಪಾದಂಗಳವರಿಂದ ವಿಶೇಷ ಪೂಜೆ, ಅರ್ಚನೆ

ಶ್ರೀದೇವರಿಗೆ ಶ್ರೀಪಾದಂಗಳವರಿಂದ ವಿಶೇಷ ಪೂಜೆ, ಅರ್ಚನೆ, ಅಭಿಷೇಕ

ಶ್ರೀದೇವರಿಗೆ ಶ್ರೀಪಾದಂಗಳವರಿಂದ ಶ್ರೀರಕ್ಷೆ

ಶ್ರೀದೇವರಿಗೆ ಶ್ರೀಪಾದಂಗಳವರಿಂದ ಶ್ರೀರಕ್ಷೆ

ಕೊಡಿಯಾಲ್ ಬೈಲ್ ವೆಂಕಟರಮಣ ದೇಗುಲದಲ್ಲಿ ಶ್ರೀದೇವರಿಗೆ ಶ್ರೀಪಾದಂಗಳವರಿಂದ ಶ್ರೀರಕ್ಷೆ

ವೆಂಕಟರಮಣ ದೇವರಿಗೆ ವಿಶೇಷ ಆರತಿ

ವೆಂಕಟರಮಣ ದೇವರಿಗೆ ವಿಶೇಷ ಆರತಿ

ಕೊಡಿಯಾಲ್ ಬೈಲ್ ವೆಂಕಟರಮಣ ದೇಗುಲದಲ್ಲಿ ಶ್ರೀದೇವರಿಗೆ ವಿಶೇಷ ಆರತಿ

ಪಲ್ಲಕ್ಕಿಗಳಲ್ಲಿ ಶ್ರೀದೇವರ ಉತ್ಸವ ಮೂರ್ತಿಗಳು

ಪಲ್ಲಕ್ಕಿಗಳಲ್ಲಿ ಶ್ರೀದೇವರ ಉತ್ಸವ ಮೂರ್ತಿಗಳು

ಕೊಡಿಯಾಲ್ ಬೈಲ್ ನಲ್ಲಿ ಪಲ್ಲಕ್ಕಿಗಳಲ್ಲಿ ಶ್ರೀದೇವರ ಉತ್ಸವ ಮೂರ್ತಿಗಳನ್ನು ಹೊತ್ತು ಸಂಭ್ರಮಿಸಿದ ಭಕ್ತಾದಿಗಳು

English summary
Thousands of devotees gathered in Kodial Bail, Mangalore and celebrated Kodial Theru or Mangalore Car festival. This festival is celebrated without any discrepancy of caste, creed and religion for the grace of Lord Venkatakarama. The idols of Shri Srinivasa and Shri Veera Venkatesa carried during Brahma Ratharohana
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X