ಕರಾವಳಿ ರಕ್ಷಣೆಗೆ ಬಂದ ಹೋವರ್ ಕ್ರಾಫ್ಟ್ಗಳು
ಮಂಗಳೂರು, ನ.11 : ಕರಾವಳಿ ತಟರಕ್ಷಣಾ ಪಡೆಯ (ಕೋಸ್ಟ್ಗಾರ್ಡ್) ಕರ್ನಾಟಕ ವಲಯಕ್ಕೆ ಹೊಸದಾಗಿ ಅತ್ಯಾಧುನಿಕ ಹೋವರ್ ಕ್ರಾಫ್ಟ್ ಎಸಿವಿ ಐಸಿಜಿಎಸ್ ಎಚ್-196 ಹಾಗೂ ಎಚ್-198 ಕಣ್ಗಾವಲು ನೌಕೆಗಳು ಸೇರ್ಪಡೆಗೊಂಡಿವೆ. ಗಂಟೆಗೆ 45 ನಾಟಿಕಲ್ ಮೈಲು ವೇಗದಲ್ಲಿ ಚಲಿಸುವ ಶಕ್ತಿಯನ್ನು ಇವು ಹೊಂದಿವೆ.
ಪಣಂಬೂರಿನಲ್ಲಿರುವ ಕೋಸ್ಟ್ಗಾರ್ಡ್ ಮಂಗಳೂರು ಕೇಂದ್ರ ಕಚೇರಿಯಲ್ಲಿ ಸೋಮವಾರ ರಾಜ್ಯಪಾಲ ವಜೂಭಾಯಿ ವಾಲಾ ಅವರು ಹೋವರ್ಕ್ರಾಫ್ಟ್ ಎಸಿವಿ ಐಸಿಜಿಎಸ್ ಎಚ್-196 ಹಾಗೂ ಎಚ್-198 ಕಣ್ಗಾವಲು ನೌಕೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.
ಈ ಹೋವರ್ ಕ್ರಾಫ್ಟ್ಗಳನ್ನು ಇಂಗ್ಲೆಂಡ್ನ ಗ್ರಿಫೂನ್ ಹೋವರ್ ವರ್ಕ್ಸ್ ಲಿ. ನಿರ್ಮಿಸಿದೆ. 21 ಮೀಟರ್ ಉದ್ದ ಮತ್ತು 31 ಟನ್ ಭಾರವಿರುವ ಇವು ಗಂಟೆಗೆ 45 ನಾಟಿಕಲ್ ಮೈಲು ವೇಗದಲ್ಲಿ ಚಲಿಸುವ ಶಕ್ತಿ ಹೊಂದಿವೆ. 2 ಅಧಿಕಾರಿಗಳು 11 ಸಿಬ್ಬಂದಿ ಸೇರಿದಂತೆ ಒಟ್ಟು 13 ಮಂದಿ ನೌಕೆಯಲ್ಲಿ ಇರುತ್ತಾರೆ. ಹೋವರ್ ಕ್ರಾಫ್ಟ್ ಚಿತ್ರಗಳು [ಚಿತ್ರಗಳು : ಐಸಾಕ್ ರಿಚರ್ಡ್, ಮಂಗಳೂರು]

ರಾಜ್ಯಪಾಲರಿಂದ ಲೋಕಾರ್ಪಣೆ
ಕರಾವಳಿ ತಟರಕ್ಷಣಾ ಪಡೆಯ (ಕೋಸ್ಟ್ಗಾರ್ಡ್) ಕರ್ನಾಟಕ ವಲಯಕ್ಕೆ ಹೊಸದಾಗಿ ಅತ್ಯಾಧುನಿಕ ಹೋವರ್ ಕ್ರಾಫ್ಟ್ ಎಸಿವಿ ಐಸಿಜಿಎಸ್ ಎಚ್-196 ಹಾಗೂ ಎಚ್-198 ಕಣ್ಗಾವಲು ನೌಕೆಗಳು ಸೇರ್ಪಡೆಗೊಂಡಿವೆ. ರಾಜ್ಯಪಾಲ ವಝೂಭಾಯಿ ವಾಲಾ ಅವರು ಹೋವರ್ ಕ್ರಾಫ್ಟ್ ಲೋಕಾರ್ಪಣೆ ಮಾಡಿದ್ದಾರೆ.

45 ಕಿ.ಮೀವೇಗದ ಹೋವರ್ ಕ್ರಾಫ್ಟ್
ಅತ್ಯಾಧುನಿಕ ಎಸಿವಿ ಐಸಿಜಿಎಸ್ ಎಚ್ - 196 ಹಾಗೂ ಎಚ್-198 ಹೋವರ್ ಕ್ರಾಫ್ಟ್ಗಳು 21 ಮೀಟರ್ ಉದ್ದವಿದ್ದು 31 ಟನ್ ಭಾರವಿದೆ. ಗಂಟೆಗೆ 45 ನಾಟಿಕಲ್ ಮೈಲು ವೇಗದಲ್ಲಿ ಚಲಿಸಲಿವೆ. ಇವುಗಳಲ್ಲಿ ಒಟ್ಟು 13 ಮಂದಿ ಪ್ರಯಾಣಿಸಬಹುದು.

ನೀರು, ನೆಲದಲ್ಲಿ ಸಂಚಾರ ನಡೆಸಲಿದೆ
ಸಮುದ್ರ ಮತ್ತು ಸಮುದ್ರ ದಂಡೆಯಲ್ಲಿ ಹಾಗೂ ಸಮತಟ್ಟಾದ ಪ್ರದೇಶದಲ್ಲಿಯೂ ಹೋವರ್ ಕ್ರಾಪ್ಟ್ ಚಲಿಸುತ್ತದೆ. ಸಾಗರದಲ್ಲಿ ಕಣ್ಗಾವಲಿಡಲು, ಅವಘಡಗಳು ಸಂಭವಿಸಿದರೆ, ರಕ್ಷಣೆ ಮತ್ತು ಶೋಧ ಕಾರ್ಯ ನಡೆಸಲು ಈ ಹೋವರ್ ಕ್ರಾಫ್ಟ್ ನೆರವಾಗುತ್ತದೆ. ಆಧುನಿಕ ನೇವಿಗೇಶನ್ ಹಾಗೂ ಮಾಹಿತಿ ಸಾಧನಗಳನ್ನು ಇದು ಒಳಗೊಂಡಿದೆ.

ಇಂಗ್ಲೆಂಡ್ನಲ್ಲಿ ನಿರ್ಮಾಣಗೊಂಡಿವೆ
ಈ ಹೋವರ್ ಕ್ರಾಫ್ಟ್ಗಳನ್ನು ಇಂಗ್ಲೆಂಡ್ನ ಗ್ರಿಫೂನ್ ಹೋವರ್ ವರ್ಕ್ಸ್ ಲಿ. ನಿರ್ಮಿಸಿದೆ. ಗುಲ್ವಿಂದರ್ಸಿಂಗ್ ಅವರು ಎಸಿವಿ ಐಸಿಜಿಎಸ್ ಎಚ್ -196 ಹಾಗೂ ಅಮಿತಾಬ್ ಬ್ಯಾನರ್ಜಿ ಅವರು ಎಚ್-198 ಹೋವರ್ ಕ್ರಾಫ್ಟ್ ಕಮಾಂಡೆಂಟ್ಗಳಾಗಿದ್ದಾರೆ.

ನಿಲ್ದಾಣಕ್ಕಾಗಿ ಜಾಗ ಕೊಡಲು ಮನವಿ
ಕರ್ನಾಟಕದ ಕರಾವಳಿಯಲ್ಲಿ ಕೋರ್ಸ್ಡ್ ಗಾರ್ಡ್ನ ನೌಕೆಗಳು, ಸೌಲಭ್ಯಗಳನ್ನು ಇಡಲು ಸ್ಥಳಾವಕಾಶದ ಸಮಸ್ಯೆಯಿದೆ. ಈ ಹಿನ್ನಲೆಯಲ್ಲಿ ಕಾರವಾರದಲ್ಲಿ ಕೋಸ್ಟ್ಗಾರ್ಡ್ ಉಪಕೇಂದ್ರವನ್ನು ಸ್ಥಾಪಿಸಲು ಅಗತ್ಯ ಭೂಮಿಯನ್ನು ಒದಗಿಸಬೇಕು ಎಂದು ಕೋಸ್ಟ್ಗಾರ್ಡ್ ಪಶ್ಚಿಮ ವಲಯ ಐಜಿಪಿ ಎಸ್.ಪಿ.ಎಸ್. ಬಸ್ರಾ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಂಸದ ನಳೀನ್ ಕುಮಾರ್ ಕಟೀಲ್ ಪಾಲ್ಗೊಂಡಿದ್ದರು
ಹೋವರ್ ಕ್ರಾಫ್ಟ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಮಂಗಳೂರು ಪೊಲೀಸ್ ಆಯುಕ್ತ ಹೀತೇಂದ್ರ ಮುಂತಾದವರು ಪಾಲ್ಗೊಂಡಿದ್ದರು.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications