ರಾಷ್ಟ್ರೀಯ ಯೂತ್ ಅಥ್ಲೆಟಿಕ್ಸ್ ಗೆ ಆಳ್ವಾಸ್ ನ 8 ಕ್ರೀಡಾಪಟುಗಳು ಆಯ್ಕೆ
ಮಂಗಳೂರು, ಫೆಬ್ರವರಿ 06: ರಾಜ್ಯ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಅದ್ಭುತ ಪ್ರದರ್ಶನ ತೋರಿದ ಆಳ್ವಾಸ್ ನ 8 ಮಂದಿ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯ ಕರಾಟೆ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಮಂಗಳೂರಿನ ಆದಿತ್ಯ ಶೆಣೈ
ರಾಜ್ಯ
ಅಥ್ಲೆಟಿಕ್ಸ್
ಸಂಸ್ಥೆ
ಹಾಗೂ
ಮೈಸೂರು
ಅಥ್ಲೆಟಿಕ್ಸ್
ಸಂಸ್ಥೆ
ಆಶ್ರಯದಲ್ಲಿ
ಮೈಸೂರಿನ
ಚಾಮುಂಡಿ
ವಿಹಾರ
ಮೈದಾನದಲ್ಲಿ
ನಡೆದ
18ರ
ರಾಜ್ಯ
ಯೂತ್
ಅಥ್ಲೆಟಿಕ್ಸ್
ನಲ್ಲಿ
ಆಳ್ವಾಸ್
ಸಂಸ್ಥೆಯ
ಕ್ರೀಡಾಪಟುಗಳು
16
ಪದಕಗಳನ್ನು
ಪಡೆದಿದ್ದಾರೆ.
ಈ
ಪೈಕಿ
8
ಮಂದಿ
ಕ್ರೀಡಾಪಟುಗಳು
ಫೆಬ್ರವರಿ
19ರಿಂದ
23ರವರೆಗೆ
ರಾಯಪುರದಲ್ಲಿ
ನಡೆಯುವ
ರಾಷ್ಟ್ರೀಯ
ಯೂತ್
ಅಥ್ಲೆಟಿಕ್ಸ್
ಗೆ
ಆಯ್ಕೆಯಾಗಿದ್ದಾರೆ.
ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಆಳ್ವಾಸ್ ಗೆ 17 ಪದಕ
ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ಸಂಸ್ಥೆಯ ಚೈತ್ರ 1500ಮೀ, 200ಮೀ ಓಟದಲ್ಲಿ ಪ್ರಥಮ, ಧನುಷಾ ಶೆಟ್ಟಿ 5 ಕಿ.ಮೀ. ನಡಿಗೆಯಲ್ಲಿ ಪ್ರಥಮ, ಪಲ್ಲವಿ ಎತ್ತರ ಜಿಗಿತದಲ್ಲಿ ಪ್ರಥಮ, ಸಿಂಚನ ಎತ್ತರ ಜಿಗಿತದಲ್ಲಿ ದ್ವಿತೀಯ, ಬಿಲುಲಾ ಗುಂಡು ಎಸೆತದಲ್ಲಿ ತೃತೀಯ, ವಿಜಯಲಕ್ಷ್ಮೀ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಾಲಕರ ವಿಭಾಗದಲ್ಲಿ ಮಹಾಂತೇಶ್ 400ಮೀ. ಪ್ರಥಮ, 200ಮೀ.ನಲ್ಲಿ ದ್ವಿತೀಯ, ಹ್ಯಾಮರ್ ಎಸೆತದಲ್ಲಿ ಮುತ್ತಪ್ಪ ಪ್ರಥಮ, ದೀಶತ್ 110 ಹರ್ಡಲ್ಸ್ ನಲ್ಲಿ ಪ್ರಥಮ, ಕಿರಣ್ ಪೋಲ್ ವಾಲ್ಟ್ ನಲ್ಲಿ ಪ್ರಥಮ, ನಾಗೇಂದ್ರ ಅಣ್ಣಪ್ಪ ಗುಂಡು ಎಸೆತ, ಚಕ್ರ ಎಸೆತದಲ್ಲಿ ಪ್ರಥಮ, ನಾಗರಾಜ್ 10 ಕಿ.ಮೀ ನಡಿಗೆಯಲ್ಲಿ ಪ್ರಥಮ ಸತೀಶ್ 3000 ಮೀ. ದ್ವಿತೀಯ, ರೋಹಿತ್ ತ್ರಿವಿಧ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.