Get Updates
Get notified of breaking news, exclusive insights, and must-see stories!

'ರಾಮನನ್ನು ಅಯೋಧ್ಯೆಯಲ್ಲಿ ಹುಡುಕಬೇಡಿ, ಆತ್ಮದಲ್ಲಿ ಹುಡುಕಿ'

ಮಂಗಳೂರು, ಡಿ.14:'ಬಿಜೆಪಿಯವರು ರಾಮನನ್ನು ಅಯೋಧ್ಯೆಯಲ್ಲಿ ಹುಡುಕುತ್ತಿದ್ದಾರೆ. ರಾಮ ಖಂಡಿತವಾಗಿಯೂ ಅಲ್ಲಿ ನೆಲೆಸಿದ್ದ. ಆತ ಸಾಮಾನ್ಯ ಮನುಷ್ಯದ ಆತ್ಮದಲ್ಲಿ ನೆಲೆಸಿದ್ದಾನೆ. ಆದ್ದರಿಂದ ಆತನನ್ನು ಎಲ್ಲೋ ಹುಡುಕಿ ಪ್ರಯೋಜನವೇನು?' ಎಂದು ನಿಡುಮಾಮಿಡಿ ಮಹಾಸಂಸ್ಥಾನ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಪ್ರಶ್ನಿಸಿದ್ದಾರೆ.

ನಂತೂರು ಶಾಂತಿ ಕಿರಣದಲ್ಲಿ 'ಅಭಿಮತ ಮಂಗಳೂರು' ಆಯೋಜಿಸಿದ್ದ 'ಜನ ನುಡಿ' ಕಾರ್ಯಕ್ರಮದಲ್ಲಿ ಮಾತಾಡುತ್ತಾ ಮೇಲಿನ ವಿಚಾರವನ್ನು ಪ್ರಸ್ತಾಪಿಸಿದರು.

ಪ್ರತಿ ಧರ್ಮಕ್ಕೂ ಅದರದ್ದೇ ಆದ ಧರ್ಮಗ್ರಂಥವಿದೆ. ನಮ್ಮ ದೇಶಕ್ಕೆ ಸಂವಿಧಾನವೇ ರಾಷ್ಟ್ರೀಯ ಗ್ರಂಥ ಅದನ್ನು ಬದಲಾಯಿಸಲು ಹೊಂಚು ಹಾಕುತ್ತಿರುವವರ ಮೂರ್ಖತನ ನೆನೆದು ನಗು ಬರುತ್ತದೆ ಎಂದರು. ಜನರು ತಾವು ಮಾಡಿರುವ ತಪ್ಪು, ಅವ್ಯವಹಾರ, ಕಳಂಕಗಳನ್ನು ತೊಡೆದು ಹಾಕಲು, ಸಾರ್ವಜನಿಕ ಪ್ರತಿಷ್ಠೆ ಹೆಚ್ಚಿಸಲು ಸಮ್ಮೇಳನಗಳನ್ನು ಆಯೋಜನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Don't Search Lord Rama in Ayodhya search your Soul : Veerabhadra Chennamalla Swamiji of Sri Nidumamidi Mutt

ದಾನ ಧರ್ಮದ ಬಗ್ಗೆ: ನಿಡುಮಾಮಿಡಿ ಮಹಾಸಂಸ್ಥಾನ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಅವರು ಶ್ರೀಮಂತರು ಧಾನ ಧರ್ಮ ಮಾಡುವುದರ ಬಗ್ಗೆ ಪ್ರಶ್ನಿಸುತ್ತಾ, ಮಠ, ದೇಗುಲಗಳಿಗೆ ದಾನ ಮಾಡಬೇಡಿ. ಮಠ- ದೇಗುಲಗಳ ಉದ್ದೇಶ ಅಮೂಲ್ಯ ದ್ರವ್ಯಗಳನ್ನು ಜನರಿಗೆ ತಲುಪಿಸುವುದೇ ಆಗಿದೆ. ಹೀಗಾಗಿ ನೀವು ಬಡಬಗ್ಗರಿಗೆ ಹಣ ನೀಡಿ, ಚಿನ್ನದ ಗೋಪುರ, ಬಾಗಿಲು ಮಾಡಿಸುವ ಮೂಲಕ ದೇವರ ಕೃಪೆ ಸಿಗುತ್ತದೆ ಎಂಬುದು ಹಾಸ್ಯಾಸ್ಪದ.

ಇದರ ಬದಲು ಜನರಿಗೆ ಅಗತ್ಯವಿರುವ ಕುಡಿಯುವ ನೀರು, ಶಿಕ್ಷಣ, ಸಾರಿಗೆ ವ್ಯವಸ್ಥೆ ಕಲ್ಪಿಸಲು ಬೇಕಾದ ಹಣವನ್ನು ಸ್ಥಿತಿವಂತರು ಒದಗಿಸಿದರೆ ಅದೇ ಮಹಾದಾನ ಎಂದರು. ಜನನುಡಿ ಕ್ರಾಂತಿಕಾರಿ ಬದಲಾವಣೆ ತರುವತ್ತ ಸಾಗಬೇಕು, ಇನ್ನಷ್ಟು ಸಾಹಿತಿಗಳು, ಕಾರ್ಯಕರ್ತರಿಗೆ ಸೂಕ್ತ ವೇದಿಕೆ ಒದಗಿಸಲಿ ಎಂದು ಆಶಿಸಿದರು.

Jana Nudi program

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಮಲ್ಲಿಕಾ ಘಂಟೆ ಉಪಸ್ಥಿತರಿದ್ದರು. ಹಿರಿಯ ಸಾಹಿತಿಗಳಾದ ಸಾರಾ ಅಬೂಬಕ್ಕರ್, ಮಾವಳ್ಳಿ ಶಂಕರ್, ಕೆ.ಎಸ್ ವಿಮಲಾ ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+