ದೇವಸ್ಥಾನದ ಕೊಳಕ್ಕೆ ಬಿದ್ದ ಕಾಡುಕೋಣವನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು
ಮಂಗಳೂರು, ಮೇ 05:ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಿದೆ. ಕಾಡುಕೋಣಗಳ ಹಿಂಡು ಕಾಡಂಚಿನ ಊರುಗಳಿಗೆ ನುಗ್ಗುತ್ತಿವೆ.ರಾತ್ರಿ ಹೊತ್ತಿನಲ್ಲಿ ಆ ಭಾಗದಲ್ಲಿ ಕಾಡುಕೋಣಗಳ ಓಡಾಟ ಹೆಚ್ಚಾಗಿದೆ. ಆದರೆ ಕಾಡುಕೋಣದ ಮರಿಯೊಂದು ದೇವಸ್ಥಾನದ ಕೊಳಕ್ಕೆ ಬಿದ್ದ ಘಟನೆ ಸುಳ್ಯದಲ್ಲಿ ನಡೆದಿದೆ.
ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ವಳಲಂಬೆ ಮಹಾವಿಷ್ಣು ದೇವಸ್ಥಾನದ ಬಳಿ ಇರುವ ತೆರೆದ ಕೊಳಕ್ಕೆ ಕಾಡುಕೋಣ ಆಕಸ್ಮಿಕವಾಗಿ ಬಿದ್ದಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಕೊಳದ ಸುತ್ತ ಕಾಡುಕೋಣ ನೋಡಲು ಜಮಾಯಿಸಿದ್ದರು.
ಕಾಡಾನೆಗಳ ಬಳಿಕ ಸುಳ್ಯದಲ್ಲಿ ಈಗ ಕಾಡು ಕೋಣಗಳ ಹಾವಳಿ
ರಾತ್ರಿ ಹೊತ್ತಿನಲ್ಲಿ ಆ ಭಾಗದಲ್ಲಿ ಕಾಡುಕೋಣಗಳ ಹಿಂಡಿನ ಜೊತೆ ಸಾಗುವಾಗ ಆಕಸ್ಮಿಕವಾಗಿ ಕೊಳಕ್ಕೆ ಬಿದ್ದಿರಬಹುದು ಹೇಳಲಾಗಿದೆ.ಕೊಳಕ್ಕೆ ಕಾಡುಕೋಣ ಬಿದ್ದ ವಿಷಯವನ್ನು ಕೂಡಲೇ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡುಕೋಣವನ್ನು ಕೊಳದಿಂದ ಮೇಲೆಕ್ಕೆತ್ತಿದ್ದಾರೆ.
Comments
English summary
A Bison was found fallen in temple pond near Sullia. Forest department officials rescued the Bison.
Story first published: Sunday, May 5, 2019, 11:49 [IST]