ಪಿಲಿಕುಳದಲ್ಲಿ ದೇಶದ ಪ್ರಥಮ 3ಡಿ 8ಕೆ ಡಿಜಿಟಲ್ ತಾರಾಲಯ!
ದೇಶದ ಪ್ರಥಮ 3ಡಿ ಡಿಜಿಟಲ್ ಹೈಬ್ರೀಡ್ ಸ್ವಾಮಿ ವಿವೇಕಾನಂದ ತಾರಾಲಯ ಮಂಗಳೂರಿನ ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ತೆಲೆ ಎತ್ತಲಿದೆ.
ಮಂಗಳೂರು, ಏಪ್ರಿಲ್ 17 : ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ನಿರ್ಮಾಣವಾಗುತ್ತಿರುವ 3ಡಿ ಡಿಜಿಟಲ್ ಹೈಬ್ರೀಡ್ ಸ್ವಾಮಿ ವಿವೇಕಾನಂದ ತಾರಾಲಯ ಅಕ್ಟೋಬರ್ ಕೊನೆಯಲ್ಲಿ ಉದ್ಘಾಟನೆಗೆ ಸಿದ್ಧಗೊಳ್ಳುತ್ತಿದೆ ಎಂದು ಶಾಸಕ ಜೆ.ಆರ್. ಲೋಬೋ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3ಡಿ 8ಕೆ ಡಿಜಿಟಲ್ ತಾರಾಲಯ ಹೊಂದಲಿರುವ ಭಾರತದ ಪ್ರಥಮ ನಗರ ಎಂಬ ಹೆಗ್ಗಳಿಕೆಗೆ ಮಂಗಳೂರು ಪಾತ್ರವಾಗಲಿದೆ ಎಂದರು.[ಮಂಗಳೂರಿನ ಜೈವಿಕ ಉದ್ಯಾನವನ ಈಗ ಕ್ಯಾಶ್ ಲೆಸ್]
ಮಂಗಳೂರಿನಲ್ಲಿ ಈ ತಾರಾಲಯ ಉದ್ಘಾಟನೆಗೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಉನ್ನತ ತಾರಾಲಯ ಹೊಂದಿರುವ ದೇಶದ ಪ್ರಥಮ ನಗರವಾಗಿ ಮಂಗಳೂರು ಗುರುತಿಸಿಕೊಳ್ಳಲಿದೆ.

ಒಟ್ಟು 35.69 ಕೋಟಿ ರು. ಗಳಲ್ಲಿ ತಾರಾಲಯ ನಿರ್ಮಾಣ
3ಡಿ ಡಿಜಿಟಲ್ ಹೈಬ್ರೀಡ್ ವ್ಯವಸ್ಥೆಯ ತಾರಾಲಯ ನಿರ್ಮಾಣಕ್ಕೆ ಶಿಫಾರಸ್ಸು ಮಾಡಿ 24.50 ಕೋಟಿ ರು. ಅಂದಾಜು ವೆಚ್ಚದ ವರದಿಯನ್ನು ಸರಕಾರಕ್ಕೆ ಸಲ್ಲಿಸಿ, ಮಂಜೂರಾತಿ ಪಡೆದು ಕಾಮಗಾರಿ ಆರಂಭಗೊಂಡಿತ್ತು. ಇದೀಗ ಮತ್ತೆ ಸುಮಾರು 10 ಕೋಟಿ ರು.ಗಳ ಹೆಚ್ಚುವರಿ ಅಂತಾರಾಷ್ಟ್ರೀಯ ಟೆಂಡರ್ ನೊಂದಿಗೆ ಒಟ್ಟು 35.69 ಕೋಟಿ ರು. ಗಳಲ್ಲಿ ತಾರಾಲಯ ನಿರ್ಮಾಣವಾಗುತ್ತಿದೆ. ತಾರಾಲಯದಲ್ಲಿ ಇದೀಗ ಸ್ಪೇಸ್ ಗ್ಯಾಲರಿಯನ್ನೂ ಅಳವಡಿಸಲು ಯೋಜಿಸಲಾಗಿದೆ ಎಂದು ಲೋಬೋ ವಿವರ ನೀಡಿದರು.

ಏನಿದು 3ಡಿ 8ಕೆ ಡಿಜಿಟಲ್ ತಾರಾಲಯ
ಡಿಜಿಟಲ್ ತಾರಾಲಯವು ಉತ್ಕೃಷ್ಟ ತಂತ್ರಜ್ಞಾನದಿಂದ ಕೂಡಿದೆ. ವಿಶೇಷ ಪಠ್ಯಕ್ರಮ ಆಧಾರಿತ ವಿಷಯ ಒಳಗೊಂಡಿದೆ. ಬ್ರಹ್ಮಾಂಡ್ ರಚನೆಯ ವಿಸ್ಮಯಗಳ ಕುರಿತು ತಿಳಿಸುತ್ತದೆ.

ಕಲಿಕೆಗೆ ಪ್ರೋತ್ಸಾಹ
ಮಿನುಗುತ್ತಿರುವ ಖಿಲಿಯನ್ ನಕ್ಷತ್ರಗಳು ಮಾನವನನ್ನು ಚಕಿತಗೊಳಿಸುವ ವಿದ್ಯಮಾನಗಳನ್ನು ತೋರಿಸುವುದು. ನಕ್ಷತ್ರಗಳ ಉಗಮ, ಗೆಲಾಕ್ಸಿ, ವಿಶ್ವದ ಉಗಮ ಮುಂತಾದ ವಿಷಯಗಳನ್ನು ಒದಗಿಸುತ್ತದೆ. ಎಲ್ಲ ಪ್ರೌಢ ಶಾಲಾ ಮಕ್ಕಳಿಗೆ ವಿಜ್ಞಾನ ಕಲಿಕೆಗೆ ಪ್ರೋತ್ಸಾಹ ಮತ್ತು ಪ್ರೇರಣೆ ನೀಡುವುದರೊಂದಿಗೆ ಜಿಲ್ಲೆಯ ಶೈಕ್ಷಣಿಕ ರಂಗದಲ್ಲಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ವಿಷಯಗಳ ಕಲಿಕೆಯಲ್ಲಿ ಹೊಸ ಮನ್ವಂತರಕ್ಕೆ ನಾಂದಿಯಾಗುತ್ತದೆ.

ಈ ತೆರನಾದ ತಾರಾಲಯ ಇರುವ ದೇಶಗಳು
ಈ ತೆರನಾದ ತಾರಾಲಯ ಪ್ರಸ್ತುತ ಸಿಂಗಾಪುರ, ಚೀನಾದ ಶಾಂಗೈ, ಯುಎಸ್ಎಯ ರಿಚ್ಮಂಡ್, ಕೊರಿಯಾದ ಆಯನ್ಸ್ ಯೊಂಗ್, ಕೆನಡಾದ ಕಾಲ್ಗೇರಿ, ಯುಕೆಯ ಬ್ರಿಸ್ಪಾಲ್, ಜರ್ಮನಿಯ ಹ್ಯಾಮ್ಬರ್ಗ್, ಜಪಾನ್ನ ಟೋಕಿಯೋ, ಪೋಲೆಂಡ್ನ ಲೋಡ್ಜ್ ನಗರಗಳಲ್ಲಿದೆ. ಇದೀಗ ಮಂಗಳೂರಿನಲ್ಲಿ ಈ ತಾರಾಲಯ ಉದ್ಘಾಟನೆಗೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಉನ್ನತ ತಾರಾಲಯ ಹೊಂದಿರುವ ದೇಶದ ಪ್ರಥಮ ನಗರವಾಗಿ ಮಂಗಳೂರು ಗುರುತಿಸಿಕೊಳ್ಳಲಿದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video












Click it and Unblock the Notifications