ಮೇಲುಕೋಟೆ ಬಳಿ ರಾಮಾನುಜಾಚಾರ್ಯ ಪ್ರತಿಮೆ ಅನಾವರಣ
ಕ್ಷೇತ್ರದ 41 ನೇ ಪೀಠಾಧಿಪತಿ ಶ್ರೀಶ್ರೀಶ್ರೀಯತಿರಾಜ ನಾರಾಯಣ ಜೀಯರ್ ಸ್ವಾಮಿ ಈ ಮೂರ್ತಿಯನ್ನು ಅನಾವರಣಗೊಳಿಸಿದರು.
ಮಂಡ್ಯ, ಏಪ್ರಿಲ್ 26: 800ವರ್ಷದ ಹಿಂದೆ ಹಿಂದೂ ಧರ್ಮದಲ್ಲಿ ಜಾಗೃತಿ ತರುವ ಪ್ರಯತ್ನ ಮಾಡಿದ್ದ, ಲೋಕಗುರು ಎಂದೇ ಸಂಬೋಧಿಸಲ್ಪಡುವ ಶ್ರೀಮಾದ್ ರಾಮಾನುಜರ ಭವ್ಯ ಪ್ರತಿಮೆ ಅನಾವರಣ ಏಪ್ರಿಲ್ 25ರಂದು ನಡೆಯಿತು.
ಮೇಲುಕೋಟೆಯ ಹತ್ತಿರವಿರುವ ತೋಂಡನೂರು ಪುಣ್ಯಕ್ಷೇತ್ರದಲ್ಲಿ ಕ್ಷೇತ್ರದ 41 ನೇ ಪೀಠಾಧಿಪತಿ ಶ್ರೀಶ್ರೀಶ್ರೀಯತಿರಾಜ ನಾರಾಯಣ ಜೀಯರ್ ಸ್ವಾಮಿ ಈ ಮೂರ್ತಿಯನ್ನು ಅನಾವರಣಗೊಳಿಸಿದರು.

ಈ ಬೃಹತ್ ಭವ್ಯ ಪ್ರತಿಮೆ ಇಡೀ ಭಾರತದಲ್ಲೇ ರಾಮಾನುಜಾಚಾರ್ಯರ ಏಕೈಕ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಾವಿರ ವರ್ಷದ ಜಯಂತಿ: ಮೇ ತಿಂಗಳ 1ನೇ ತಾರೀಖಿನಂದು ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರ 1000ನೇ ಜಯಂತಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

ಶ್ರೀಮಾದ್ ರಾಮಾನುಜ ಜೀಯರ್ ಸ್ವಾಮಿಯವ ಜೀಯರ್ ಸ್ವಾಮಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ, ಲೋಕಗುರುವಿನ ಆರಾಧನೆಯನ್ನು ಕೈಗೊಳ್ಳಲಾಗುತ್ತದೆ ಎಂದು ಆಯೋಜಕರು ಹೇಳಿದ್ದಾರೆ.












Click it and Unblock the Notifications