ಮಂಡ್ಯದಲ್ಲಿ ಬಿಜೆಪಿಗೆ ನೆಲೆ ಇಲ್ಲ, ಜೆಡಿಎಸ್ ಮುಕ್ತ ಹೇಗೆ ಮಾಡುತ್ತಾರೆ: ನಿಖಿಲ್ ಕುಮಾರಸ್ವಾಮಿ
ಮಂಡ್ಯ ನವೆಂಬರ್ 7 : ಬಿಜೆಪಿಗೆ ಮಂಡ್ಯ ಜಿಲ್ಲೆಯಲ್ಲಿ ನೆಲೆಯೇ ಇಲ್ಲ, ಅವರು ಹೇಗೆ ಜೆಡಿಎಸ್ ಮುಕ್ತ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಮಂಡ್ಯ ತಾಲೂಕಿನ ದುದ್ದ ಹೋಬಳಿಯ ಪುರದಕೊಪ್ಪಲು ಗ್ರಾಮದಲ್ಲಿ ಶ್ರೀವೀರಾಂಜನೇಯ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಕಟೀಲ್ ಸಾಹೇಬರು, ಮಾತನಾಡುವ ವೇಳೆ ಬಹುತೇಕ ಎಲ್ಲಾ ಕುರ್ಚಿಗಳು ಖಾಲಿಯಾಗಿದ್ದವು. ಹೀಗಿರುವಾಗ ಮಂಡ್ಯದಲ್ಲಿ ಜೆಡಿಎಸ್ ಮುಕ್ತ ಮಾಡುವುದಕ್ಕೆ ಬಿಜೆಪಿಗೆ ಮಂಡ್ಯದಲ್ಲಿ ನೆಲೆಯೇ ಇಲ್ಲ. ಅದರ ಬಗ್ಗೆ ಚರ್ಚೆ ಮಾಡುವುದಕ್ಕೆ ನಾನು ಇಷ್ಟಪಡಲ್ಲ ಎಂದು ಹೇಳಿದ್ದಾರೆ.
ಜಲಧಾರೆಯಿಂದ ಉತ್ತಮ ಮಳೆ, ಪಂಚರತ್ನದಿಂದ ರಾಜ್ಯದ ಅಭಿವೃದ್ಧಿ; ನಿಖಿಲ್
ಎಚ್.ಡಿ ಕುಮಾರಸ್ವಾಮಿ ಕಣ್ಣೀರ ನಾಯಕ ಎನ್ನುವ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದ ನಿಖಿಲ್ ಕುಮಾರಸ್ವಾಮಿ, ಕುಮಾರಣ್ಣ ಮಂಡ್ಯಕ್ಕೆ ಬಜೆಟ್ನಲ್ಲಿ ಎಂಟೂಮುಕ್ಕಾಲು ಸಾವಿರ ಕೋಟಿ ಮೀಸಲಿಟ್ಟಿದ್ದರು. ಆಗ ಬಿಜೆಪಿಯವರು ಲಘುವಾಗಿ ಮಾತನಾಡಿದರು. ಮಂಡ್ಯ, ರಾಮನಗರ, ಹಾಸನಕ್ಕೆ ಸೀಮಿತವಾದ ಬಜೆಟ್ ಅಂದರು. ಬಳಿಕ ಬಿಜೆಪಿ ಸರ್ಕಾರ ಬಂದ ಮೇಲೆ ಆ ಅನುದಾನ ಏನಾಯಿತು ಅಂತ ಪ್ರಶ್ನೆ ಮಾಡಿಕೊಳ್ಳಲಿ ಎಂದರು.
ಇನ್ನು
ರಾಜ್ಯದ
ರೈತರು,
ಜನಸಾಮಾನ್ಯರಿಗೆ
ಪೂರಕವಾಗಿರುವ
ಪಂಚರತ್ನ
ಯೋಜನೆಗಳ
ಬಗ್ಗೆ
ತಿಳಿಸಲು
ಮಾಜಿ
ಮುಖ್ಯಮಂತ್ರಿ
ಎಚ್.ಡಿ.ಕುಮಾರಸ್ವಾಮಿ
ರಾಜ್ಯಾದ್ಯಂತ
ಪ್ರವಾಸ
ಕೈಗೊಂಡಿದ್ದಾರೆ.
ರೈತರು,ರಾಜ್ಯದ
ಜನರ
ದೃಷ್ಟಿಯಿಂದ
ಜೆಡಿಎಸ್
ಪಕ್ಷ
ಪಂಚರತ್ನ
ಯೋಜನೆ
ಜಾರಿಗೆ
ತರಲಾಗಿದೆ.
ರಾಜ್ಯದ
ಜನರು
5
ವರ್ಷ
ಜೆಡಿಎಸ್
ಪಕ್ಷ
ಸರ್ಕಾರ
ರಚನೆಗೆ
ಆಶೀರ್ವಾದ
ಮಾಡಿದರೆ
ಈ
ಯೋಜನೆಯಿಂದ
ಅನುಕೂಲವಾಗಲಿದೆ
ಎಂದರು.
ಸದ್ಯ
ಪಕ್ಷ
ಸಂಘಟನೆ
ಮಾಡುವ
ಜವಾಬ್ದಾರಿ
ವಹಿಸಿದ್ದಾರೆ.
ಅದನ್ನು
ಮಾಡುತ್ತಿದ್ದೇನೆ.
ರಾಜ್ಯದ
ಎಲ್ಲಡೆ
ಪಕ್ಷ
ಸಂಘಟಿಸಲು
ಪ್ರವಾಸ
ಮಾಡುತ್ತೇನೆ.
ಮುಂಬರುವ
ವಿಧಾನಸಭಾ
ಚುನಾವಣೆಯಲ್ಲಿ
ಎಚ್.ಡಿ.ಕುಮಾರಣ್ಣ
ಮುಖ್ಯಮಂತ್ರಿಯಾಗಿ
ಸರ್ಕಾರ
ರಚಿಸುವುದು
ಶತಸಿದ್ಧ.
ಈ
ಬಾರಿ
ಸ್ವತಂತ್ರವಾದ
ಜಾತ್ಯತೀತ
ಜನತಾದಳ
ಪಕ್ಷವನ್ನು
ಅಧಿಕಾರಕ್ಕೆ
ತರಲು
ರಾಜ್ಯಾದ್ಯಂತ
ಪ್ರವಾಸ
ಕೈಗೊಳ್ಳಲಾಗಿದೆ.
ಎಲ್ಲರೂ
ಒಗ್ಗೂಡಿ
2023
ಕ್ಕೆ
ಜೆಡಿಎಸ್
ಪಕ್ಷವನ್ನು
ಅಧಿಕಾರಕ್ಕೆ
ತರಲು
ಶ್ರಮಿಸೋಣ
ಎಂದು
ಕಾರ್ಯಕರ್ತರಲ್ಲಿ
ಮನವಿ
ಮಾಡಿಕೊಂಡರು.
ಜನವರಿಯಲ್ಲಿ ಸಿದ್ದರಾಮಯ್ಯ ಜೈಲು ಸೇರುತ್ತಾರೆ: ನಳೀನ್ಕುಮಾರ್ ಕಟೀಲ್
ಶ್ರೀವೀರಾಂಜನೇಯ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಮುದಗಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರೇಗೌಡ, ಮನ್ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರ, ಶಾಸಕ ಸಿ.ಎಸ್. ಪುಟ್ಟರಾಜು ಪುತ್ರ ಸಿ.ಪಿ.ಶಿವರಾಜ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಸಿ. ಅಶೋಕ್, ಎಚ್.ಟಿ ಮಂಜು ಹಾಗೂ ಗುತ್ತಿಗೆದಾರ ಬಾಲರಾಜು ಉಪಸ್ಥಿತರಿದ್ದರು.