ನಾಗರಿಕರೇ, ಜನನ-ಮರಣಗಳನ್ನು ಕಡ್ಡಾಯವಾಗಿ ನೋಂದಾಯಿಸಿ: ಅಶ್ವತಿ
ಮಂಡ್ಯ ನವೆಂಬರ್ 05: ಮಂಡ್ಯ ಜಿಲ್ಲೆಯಲ್ಲಿ ಆಗುವ ನಾಗರಿಕ ಜನನ-ಮರಣಗಳನ್ನು ಕಡ್ಡಾಯವಾಗಿ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನನ-ಮರಣ ನೋಂದಣಿ ಕುರಿತು ನಡೆದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೇವಾ ಸಿಂಧು ಮೂಲಕ ಮರಣ ಪ್ರಮಾಣ ಪತ್ರ ಪಡೆಯುವುದು ಹೇಗೆ?
ನಾಗರಿಕ
ಜನನ-ಮರಣ
ನೋಂದಣಿ
ಕಡ್ಡಾಯವಾಗಿದೆ.
ಈ
ಹಿನ್ನೆಲೆಯಲ್ಲಿ
ಜಿಲ್ಲೆಯಲ್ಲಿ
ಆಗುವ
ಜನನ-ಮರಣಗಳ
ಬಗ್ಗೆ
ತಪ್ಪದೇ
ನೋಂದಣಿ
ಮಾಡಿಕೊಳ್ಳುವುದರ
ಜತೆಗೆ
ಸಂಬಂಧಪಟ್ಟವರಿಗೆ
ತಕ್ಷಣ
ಪ್ರಮಾಣ
ಪತ್ರ
ನೀಡುವ
ವ್ಯವಸ್ಥೆಯನ್ನು
ಸಹ
ಮಾಡಬೇಕೆಂದು
ಸೂಚಿಸಿದರು.
ಆಸ್ಪತ್ರೆಯಲ್ಲಿ
ವಿಳಂಬ
ನೊಂದಣಿಯನ್ನು
ತಪ್ಪಿಸಿ,
ನೋದಣಿ
ಕಾರ್ಯ
ಸಮರ್ಪಕ
ರೀತಿಯಲ್ಲಿ
ಆಗುವಂತೆ
ನೋಡಿಕೊಳ್ಳಿ
ಎಂದರು.
ದೃಢೀಕರಣ: ಗ್ರಾಮಗಳಲ್ಲಿ ಆಗುವ ಜನನ ಮರಣಗಳ ಬಗ್ಗೆ ಅಧಿಕೃತ ಮಾಹಿತಿ ಪಡೆಯಲು ಆಶಾ ಕಾರ್ಯಕರ್ತೆಯರ ಮತ್ತು ಆರೋಗ್ಯ ಸಹಾಯಕಿಯರ ದೃಢೀಕರಣವನ್ನು ಪಡೆದು ಆಯಾ ಗ್ರಾಮ ಲೆಕ್ಕಿಗರು ನೋಂದಣಿ ಮಾಡಿಸಿಕೊಳ್ಳಬೇಕೆಂದು ಸೂಚಿಸಿದರು.
ಜನನ-ಮರಣ ನೋಂದಣಿ ಮಾಹಿತಿಯು ಪ್ರಮುಖ ಪಾತ್ರ ವಹಿಸುವ ಹಿನ್ನೆಲೆಯಲ್ಲಿ ಶೇ.100ರಷ್ಟು ನೋಂದಣಿಯಾಗುವಂತೆ ಎಚ್ಚರ ವಹಿಸುವಂತೆ ನೋಂದಣಾಧಿಕಾರಿಗಳಿಗೆ ಸಲಹೆ ನೀಡಿದರು.
ಸಮನ್ವಯತೆ: ನಾಗರಿಕ ಜನನ-ಮರಣಗಳ ಬಗ್ಗೆ ಸಮರ್ಪಕವಾಗಿ ನೋಂದಣಿಯಾಗಲು ಅನುಕೂಲವಾಗುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ನಗರಸಭೆ, ಪುರಸಭೆ ಅಧಿಕಾರಿಗಳು, ತಹಸೀಲ್ದಾರರು, ಖಾಸಗಿ ಮತ್ತು ಸರ್ಕಾರಿ ವೈದ್ಯಾಧಿಕಾರಿಗಳು, ಗ್ರಾಮಲೆಕ್ಕಿಗರು, ತಾಲೂಕು ಆರೋಗ್ಯ ಅಧಿಕಾರಿಗಳು ಪರಸ್ಪರ ಸಮನ್ವಯತೆ ಸಾಧಿಸಿಕೊಂಡು ಜನನ ಮರಣಗಳ ಬಗ್ಗೆ ಅಧಿಕೃತ ಅಂಕಿ ಅಂಶಗಳ ಪಡೆದು ನೋಂದಣಿ ಮಾಡಿಕೊಳ್ಳಬೇಕು.
ಸಂಬಂಧಪಟ್ಟ ಇಲಾಖೆಗಳ ವ್ಯಾಪ್ತಿಯಲ್ಲಿ ಕಾರ್ಯಾಗಾರಗಳ ಮೂಲಕ ಈ ಕುರಿತು ಸಂಪೂರ್ಣ ಜಾಗೃತಿ ಹೊಂದಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದು ಸೂಚನೆ ನೀಡಿದರು.
ಸೇವಾ ಸಿಂಧು ಮೂಲಕ ಜನನ ಪ್ರಮಾಣ ಪತ್ರ ಪಡೆಯುವುದು ಹೇಗೆ?
ಐಇಸಿ ಚಟುವಟಿಕೆಯಡಿ ಒಂದು ಕ್ರಿಯಾಯೋಜನೆ ತಯಾರಿಸಿ ಸಾರ್ವಜನಿಕರಿಗೆ ಜನನ ಮರಣ ನೋಂದಣಿ ಬಗ್ಗೆ ಅರಿವು ಮೂಡಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮವಹಿಸಿ ಎಂದರು.
ಪ್ರತಿ ತಿಂಗಳಲ್ಲಿ ಸಂಭವಿಸುವ ಜನನ-ಮರಣ ಘಟನೆಗಳ ಸಾಂಖ್ಯಿಕ ಮಾಹಿತಿಯನ್ನು ಆಯಾ ತಿಂಗಳು ಮುಗಿದ ತಕ್ಷಣ ಸಂಬಂಧಿಸಿದ ನೋಂದಣಾಧಿಕಾರಿಗಳಿಗೆ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರು ಕೂಡ ಜನನ-ಮರಣವಾದ ತಕ್ಷಣ ನೋಂದಣಿ ಮಾಡಿಸಿ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ಸಕಾಲಕ್ಕೆ ತಪ್ಪದೇ ಪಡೆಯಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಸಂಜಯ್,ಸಾಂಖ್ಯಿಕ ಅಧಿಕಾರಿ ಶಿವಮ್ಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜುಮೂರ್ತಿ, ನಗರಸಭಾ ಆಯುಕ್ತರಾದ ಲೋಕೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು
ಉಚಿತವಾಗಿ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ
ಮಂಡ್ಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಹಾಲು ಒಕ್ಕೂಟ (ಮನ್ಮುಲ್) ಇವರ ಸಹಕಾರದೊಂದಿಗೆ ನವೆಂಬರ್ 8 ರಿಂದ ಡಿಸೆಂಬರ್ 5 ರವರೆಗೆ ಜಿಲ್ಲೆಯಾದ್ಯಂತ ಎಲ್ಲಾ ದನ, ಎಮ್ಮೆಗಳಿಗೆ ಉಚಿತವಾಗಿ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜನನ ಪ್ರಮಾಣ ಪತ್ರ ಪಡೆಯುವುದು ಹೇಗೆ?
ಇದು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮಡಿಯಲ್ಲಿ 2 ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮವಾಗಿದ್ದು, ಈ ಲಸಿಕಾ ಕಾರ್ಯಕ್ರಮಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 279 ಲಸಿಕೆದಾರರು (ಸಿಬ್ಬಂದಿ) ನಿಯೋಜಿಸಿದ್ದು, ಗ್ರಾಮವಾರು ದಿನಾಂಕಗಳನ್ನು ಸಂಬಂಧಪಟ್ಟ ತಾಲ್ಲೂಕು ಪಶುವೈದ್ಯ ಆಸ್ಪತ್ರೆಗಳು, ಪಶುಚಿಕಿತ್ಸಾಲಯ, ಗ್ರಾಮ ಪಂಚಾಯಿತಿ ಹಾಗೂ ಎಂ.ಪಿ.ಸಿ.ಎಸ್. ಗಳಲ್ಲಿ ಪ್ರಕಟಿಸಲಾಗುವುದು.
ಎಲ್ಲಾ
ಪಶುಪಾಲಕರು
ಈ
ಕಾರ್ಯಕ್ರಮದಲ್ಲಿ
ಸಕ್ರಿಯವಾಗಿ
ಭಾಗವಹಿಸಿ
ತಮ್ಮ
ರಾಸುಗಳಿಗೆ
ಕಡ್ಡಾಯವಾಗಿ
ಲಸಿಕೆ
ಹಾಕಿಸಿಕೊಳ್ಳುವುದರ
ಮೂಲಕ
ಜಾನುವಾರುಗಳನ್ನು
ರಕ್ಷಿಸಿ
ಕಾರ್ಯಕ್ರಮವನ್ನು
ಸದುಪಯೋಗಪಡಿಸಿಕೊಳ್ಳಬೇಕೆಂದು
ಪಶುಪಾಲನಾ
ಇಲಾಖೆಯ
ಉಪನಿರ್ದೇಶಕರು
ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
ಕಾಲು
ಬಾಯಿ
ರೋಗ
ನಿಯಂತ್ರಣಕ್ಕೆ
ಲಸಿಕೆ
ಹಾಕುವುದೊಂದೆ
ಮಾರ್ಗವಾಗಿದ್ದು
ಪ್ರತಿ
6
ತಿಂಗಳಿಗೊಮ್ಮೆ
ಕೈಗೊಳ್ಳುವ
ಸಾಮೂಹಿಕ
ಲಸಿಕಾ
ಕಾರ್ಯಕ್ರಮದಲ್ಲಿ
ಕಡ್ಡಾಯವಾಗಿ
ಎಲ್ಲಾ
ಜಾನು
ವಾರುಗಳಿಗೆ
ಲಸಿಕೆ
ಹಾಕಿಸಿ
ಎಂದು
ಜಿಲ್ಲಾಧಿಕಾರಿ
ಎಸ್.ಅಶ್ವತಿ
ಹೇಳಿದರು.
ಜಿಲ್ಲಾಧಿಕಾರಿಗಳ
ಕಚೇರಿ
ಸಭಾಂಗಣದಲ್ಲಿ
ಪಶುಪಾಲನಾ
ಇಲಾಖಾ
ವತಿಯಿಂದ
ಕಾಲುಬಾಯಿ
ಜ್ವರ
ಲಸಿಕಾ
ಕಾರ್ಯಕ್ರಮ
ಸಂಬಂಧ
ನಡೆದ
ಸಭೆಯಲ್ಲಿ
ಅಧ್ಯಕ್ಷತೆ
ವಹಿಸಿ
ಅವರು
ಮಾತನಾಡಿದರು.