ಅಮ್ಮನನ್ನು ಗೆಲ್ಲಿಸಿ ಪಾರ್ಲಿಮೆಂಟ್ ಗೆ ಕಳುಹಿಸಿಕೊಡಿ:ಮಂಡ್ಯದಲ್ಲಿ ಪ್ರಚಾರ ಆರಂಭಿಸಿದ ಡಿಬಾಸ್
Recommended Video

ಮಂಡ್ಯ, ಏಪ್ರಿಲ್ 1: ಇಂದಿನಿಂದ ಮಂಡ್ಯ ಲೋಕಸಭಾ ಚುನಾವಣಾ ಕಣ ಮತ್ತಷ್ಟು ರಂಗೇರಿದೆ. ಸುಮಲತಾ ಅಂಬರೀಷ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಕೈಗೊಂಡಿದ್ದಾರೆ. ದಾಸ ದರ್ಶನ್ ಬಿರು ಬಿಸಿಲನ್ನು ಲೆಕ್ಕಿಸದೇ ಮತ ಯಾಚಿಸುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಅರಳಿಕಟ್ಟೆಯಿಂದ ದರ್ಶನ್ ಪ್ರಚಾರ ಆರಂಭಿಸಿದ್ದು, ಕೆಆರ್ಎಸ್, ಬೆಳಗೊಳ ಸೇರಿದಂತೆ ವಿವಿಧೆಡೆ ಭರ್ಜರಿ ರೋಡ್ ಶೋ ನಡೆಸಿದ್ದಾರೆ.
ಕಣದಲ್ಲಿ ಈ ಬಾರಿ ಮೂರ್ನಾಲ್ಕು ಸುಮಲತಾ ಹೆಸರುಗಳಿವೆ. ಹಾಗಾಗಿ ನಾನು ಹೆಸರನ್ನು ಮತ್ತು ಕ್ರಮ ಸಂಖ್ಯೆಯನ್ನು ಒತ್ತಿ ಹೇಳುತ್ತಿದ್ದೇನೆ. ಗೊಂದಲ ಸೃಷ್ಟಿಸಲು ಈ ಬಾರಿ ಇದನ್ನು ಮಾಡಿದ್ದಾರೆ.ಆ ಕಾರಣದಿಂದ ನೋಡಿ ಮತ ಚಲಾಯಿಸಿ. ಹಿರಿಯರು, ವೃದ್ದರು ಮತ್ತು ಅನಕ್ಷರಸ್ಥರಿಗೆ ಯುವಕರು ತಿಳಿ ಹೇಳಿ. ಯಾವುದೇ ಕಾರಣಕ್ಕೂ ಮತದಾರರು ಗೊಂದಲಕ್ಕೀಡಾಗಬಾರದು ಎಂದು ತಿಳಿಸಿದರು.

ಅಮ್ಮನನ್ನು ಗೆಲ್ಲಿಸಿ ಪಾರ್ಲಿಮೆಂಟ್ ಗೆ ಕಳುಹಿಸಿಕೊಡಿ. ಯಾವುದೇ ಅಧಿಕಾರದ ದಾಹವಿಲ್ಲದೆ ಎಲೆಕ್ಷನ್ ಗೆ ಅಮ್ಮ ನಿಂತಿದ್ದಾರೆ. ಎಲ್ಲಾ ರೀತಿಯ ಅಧಿಕಾರವನ್ನು ಅಪ್ಪಾಜಿ ಅನುಭವಿಸಿದ್ದಾರೆ. ಕ್ಷೇತ್ರದ ಸಾಕಷ್ಟು ಅಭಿವೃದ್ಧಿಗಳು ಅಮ್ಮನಿಂದ ಆಗಬೇಕಿದೆ. ಹೀಗಾಗಿ ಸುಮಲತಾ ಅಮ್ಮನಿಗೆ ನಿಮ್ಮ ಮತ ನೀಡಿ ಎಂದು ದರ್ಶನ್ ಮನವಿ ಮಾಡಿದರು.

ಇದೇ ವೇಳೆ ಊರಿನಲ್ಲಿ ಎಲ್ಲರೂ ತಂಬಿಟ್ಟು ತೆಗೆದುಕೊಂಡು ಹೋಗುತ್ತಿದ್ದರು. ಇದನ್ನು ನೋಡಿದ ದರ್ಶನ್, ನನ್ನ ಬಾಯಲ್ಲಿ ನೀರು ಬರುತ್ತಿದೆ, ತಂಬಿಟ್ಟು ತಿನ್ನಬೇಕೆಂಬ ಆಸೆ ಆಗುತ್ತಿದೆ. ನನಗೂ ತಂಬಿಟ್ಟು ಕೊಡಿ ತಿಂದುಕೊಂಡು ಹೋಗುತ್ತೇನೆ" ಎಂದು ಗ್ರಾಮಸ್ಥರಲ್ಲಿ ಕೇಳಿಕೊಂಡರು. ದರ್ಶನ್ ಮನವಿಗೆ ಸ್ಪಂದಿಸಿದ ಗ್ರಾಮಸ್ಥರು ತಂಬಿಟ್ಟು ಕೊಟ್ಟರು.












Click it and Unblock the Notifications