ತಮಿಳುನಾಡಿಗೆ ಕಾವೇರಿ ನೀರು ಬಿಟ್ಟರೆ, ಹುಷಾರ್!: ಮಾದೇಗೌಡ ಗುಡುಗು
ಮಂಡ್ಯ, ಮೇ 03: 'ನಮಗೇ ನೀರಿಲ್ಲ. ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಇದನ್ನೆಲ್ಲ ಸಂಸದರು ಕೇಂದ್ರಕ್ಕೂ ಮನವರಿಕೆ ಮಾಡಿಕೊಡಬೇಕು. ಒಂದು ವೇಳೆ ನಮ್ಮ ವಿರೋಧದ ನಡುವೆಯೂ ಸಿದ್ದರಾಮಯ್ಯ ಅವರ ಸರ್ಕಾರ ನೀರು ಬಿಟ್ಟರೆ ಜನ ನಿಮ್ಮ ರಕ್ತ ಕುಡಿತಾರೆ ಎಂದು ಮಾಜಿ ಸಂಸದ, ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ಅವರು ಎಚ್ಚರಿಸಿದ್ದಾರೆ.
ಕಾವೇರಿ ನದಿಯಿಂದ 4 ಟಿಎಂಸಿ ನೀರು ತಮಿಳುನಾಡಿಗೆ ಬಿಡುವಂತೆ ಸುಪ್ರೀಂಕೋರ್ಟ್ ಗುರುವಾರ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ತಮಿಳುನಾಡಿಗೆ 4 ಟಿಎಂಸಿ ನೀರು ಬಿಡುವಂತೆ ಸುಪ್ರಿಂ ಆದೇಶ
'ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ನೀರು ಬಿಟ್ಟರೆ ಜನ ನಿಮ್ಮ ರಕ್ತ ಕುಡಿತಾರೆ' ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ. ಜಿ ಮಾದೇಗೌಡ ಸಿಎಂಗೆ ಎಚ್ಚರಿಕೆ ನೀಡಿದ್ದಾರೆ.
ತಮಿಳುನಾಡು ಸರ್ಕಾರವು ಸುಳ್ಳು ಮಾಹಿತಿ ನೀಡಿದೆ. ಹೀಗಾಗಿ ಕೋರ್ಟ್ ಈ ತೀರ್ಪು ನೀಡಿದೆ. ಸರ್ಕಾರ ಕೋರ್ಟ್ಗೆ ಸಮಗ್ರ ಮಾಹಿತಿ ನೀಡಬೇಕು. ನೀರು ಬಿಡಲು ಸಾಧ್ಯವಿಲ್ಲ ಅನ್ನೋದನ್ನ ಮನದಟ್ಟು ಮಾಡಿಕೊಡಬೇಕು ಎಂದರು.
ತಮಿಳುನಾಡಿಗೆ
ನೀರು
ಬಿಡುವ
ಸ್ಥಿತಿಯಲ್ಲಿ
ನಾವಿಲ್ಲ:
ಎಂಬಿ
ಪಾಟೀಲ್
ಕಾವೇರಿ
ನದಿ
ನೀರು
ಹಂಚಿಕೆ
ಕರಡು
ಬಗ್ಗೆರಚನೆ
ಕೇಂದ್ರ
ಸರ್ಕಾರಕ್ಕೂ
ಎಚ್ಚರಿಕೆ
ನೀಡಿರುವ
ಸುಪ್ರೀಂ
ಇನ್ನು
10
ದಿನಗಳೊಳಗೆ
ನೀರು
ಹಂಚಿಕೆ
ಕರಡನ್ನು
ಕರಡು
ಪ್ರತಿಯನ್ನು
ಸುಪ್ರಿಂಕೋರ್ಟ್ಗೆ
ಸಲ್ಲಿಸಬೇಕೆಂದು
ಕರಾವಕ್ಕಾಗಿ
ತಿಳಿಸಿದೆ.