ಮಂಡ್ಯ: ಕಂಬಳಿ ಹುಳುವಿನ ಉಪಟಳ-ಹೈರಾಣಾದ ಗ್ರಾಮೀಣ ಜನತೆ
ಮಂಡ್ಯ, ಜುಲೈ 21: ಜಿಲ್ಲೆಯಲ್ಲಿ ಹಲವೆಡೆ ಕಂಬಳಿ ಹುಳುವಿನ ಕಾಟ ತೀವ್ರಗೊಂಡಿದ್ದು, ಹುಳಗಳು ಗ್ರಾಮೀಣ ಭಾಗದ ಜನಜೀವನದ ಮೇಲೆ ನೇರ ಪರಿಣಾಮ ಉಂಟುಮಾಡಿದ್ದು, ಪರಿಹಾರಕ್ಕಾಗಿ ಹಾತೊರೆಯುವಂತಾಗಿದೆ. ಮಂಗಳೂರು ಹೆಂಚಿನ ಮನೆಯವರಿಗೆ ಮಾತ್ರ ಕಂಬಳಿ ಉಪಟಳ ಕಡಿಮೆ ಇದೆ. ಆದರೆ ನಾಡಂಚಿನ ಮನೆಯವರಿಗೆ ಕಂಬಳಿ ಹುಳುವಿನ ಉಪಟಳವೇ ಹೆಚ್ಚಾಗಿದೆ. ಇದರಲ್ಲಿ ಬೀದಿ, ಮನೆಯ ಜಗುಲಿ ಹಾಗೂ ಗೋಡೆಗಳ ಮೇಲೆ ಸೇರಿದಂತೆ ಹೆಂಚುಗಳ ಮೇಲೆ ಮತ್ತು ಕೆಳಗೆ ಕಂಬಳಿ ಹುಳು ಆಶ್ರಯ ಪಡೆದು ಕುಟುಂಬಸ್ಥರು ಬೆಚ್ಚಿ ಬೀಳುವಂತಾಗಿದೆ.
ಕಂಬಳಿ ಹುಳುವಿನ ಉಪಟಳವು ಇಷ್ಟಕ್ಕೆ ಕಡಿಮೆ ಆಗುವುದಿಲ್ಲ, ಮನೆಯ ಹೊರಗೆ ಕಾಣುವ ಹುಳಗಳನ್ನು ಸಾಯಿಸಲಾಗುತ್ತದೆ. ಆದರೆ ಹೆಂಚಿನ ಮೇಲೆ ಇರುವ ಹುಳುಗಳನ್ನು ಸಾಹಿಸುವುದು ದುಸ್ಸಾಹಸವೇ ಸರಿ. ಕಂಬಳಿ ಹುಳಗಳಿಂದ ರಕ್ಷಣೆ ಪಡೆಯಲು ಕ್ರಿಮಿ ನಾಶಕ ಸಿಂಪಡಣೆ, ಲಕ್ಷ್ಮಣ ರೇಖೆ ಸೇರಿದಂತೆ ಇತರೆ ಕ್ರಿಮಿ ನಾಶಕ ಬಳಸಿದರೂ ಈ ಹುಳಗಳು ಕಡಿಮೆ ಆಗುತ್ತಿಲ್ಲ ಎಂದು ಕಂಬಳಿ ಹುಳದಿಂದ ಹೈರಾಣಾದ ರಾಗಿಮುದ್ದನಹಳ್ಳಿ ದಿನೇಶ್, ದೇವಮ್ಮ, ಚಿಕ್ಕತಾಯಮ್ಮ, ಮಧು, ನವೀನ್, ಮಂಜುನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಅಡುಗೆ ತಯಾರಿಗೂ ಕಷ್ಟ
ಅಡುಗೆ ಮನೆಯಲ್ಲಿ ಅಡುಗೆ ತಯಾರಿ ನಡೆಸುವುದು ಕಷ್ಟವಾಗಿದೆ, ಮನೆಯ ಹೆಂಚುಗಳನ್ನೆಲ್ಲಾ ಆವರಿಸಿಕೊಂಡಿರುವ ಕಂಬಳಿ ಹುಳುಗಳು ಎಲ್ಲಿ ಅಡುಗೆ ತಯಾರಿ ಸಂದರ್ಭದಲ್ಲಿ ಪಾತ್ರೆಯೊಳಗೆ ಸೇರಿಕೊಂಡಿವೆಯೋ ಎಂಬ ಆತಂಕವೂ ಇದೆ. ಕೆಲವೊಮ್ಮೆ ವಿದ್ಯುತ್ ಇಲ್ಲದ ರಾತ್ರಿ ಸಮಯದಲ್ಲಿ ಅಡುಗೆ ತಯಾರಿಸುವುದು ಸಹ ಕಷ್ಟ ಎನಿಸಿದೆ. ಮನೆಯೊಳಗಿನ ಅಲ್ಮೇರಾಗಳಲ್ಲಿ ಜೋಡಿಸಿಟ್ಟಿರುವ ಬಟ್ಟೆಗಳ ಮಧ್ಯದಲ್ಲೂ ಸಹ ಹುಳುಗಳು ಕಂಡುಬರುತ್ತಿದ್ದು, ಇದು ಮತ್ತಷ್ಟು ಆತಂಕವನ್ನುಂಟು ಮಾಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಗ್ರಾಮ ಮಚಾಯಿತಿ ಸದಸ್ಯರ ಗಮನಕ್ಕೆ ತರಲಾಗಿ, ಪಂಚಾಯಿತಿಯ ಪಿಡಿಒ ಸೇರಿದಂತೆ ಸಿಬ್ಬಂದಿ ಬಂದು ಮನೆಯ ಗೋಡೆ ಮೇಲಿರುವ ಕಂಬಳಿ ಹುಳುವಿನ ಫೋಟೋ ತೆಗೆದುಕೊಂಡು ಹೋಗಿದ್ದಾರೆ ಅಷ್ಟೆ. ಆದರೆ ಅದರಿಂದ ಯಾವುದೇ ಪ್ರಯೋಜನವೂ ಆಗಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿದೆ. ವರ್ಷಕ್ಕೊಮ್ಮೆ ಜೂನ್ ಮತ್ತು ಜುಲೈ ತಿಂಗಳಲ್ಲಿ ಈ ಹುಳುವಿನ ಕಾಟ ವಿಪರೀತವಾಗಿದೆ. ಇವುಗಳು ಮೈ ಸೋಕಿದರೆ ಸಾಕು ಆ ಭಾಗದಲ್ಲಿ ಕೆಂಪು ಗುಳ್ಳೆಗಳಾಗಿ ತಡೆಯಲಾರದ ನವೆ ಉಂಟಾಗುತ್ತದೆ ಎಂದು ಕಂಬಳಿ ಹುಳುವಿನಿಂದ ಬಾಧಿತರಾದ ಕುಮಾರ, ಶಿವು, ಮಹೇಶ ಅಸಮಾಧಾನ ವ್ಯಕ್ತಪಡಿಸಿದರು.
ಈಗ ಮಳೆಗಾಲ ಆರಂಭವಾಗಿದೆ ಇಂತಹ ವಾತಾವರಣದಲ್ಲಿ ಕಂಬಳಿ ಹುಳುವಿನ ಉಪಟಳ ಹೆಚ್ಚಿರುತ್ತದೆ. ಬಹುತೇಕ ಗ್ರಾಮೀಣ ಭಾಗದ ನಾಡು ಹಂಚಿನ ಮನೆಗಳಲ್ಲಿ ಜಾಸ್ತಿಯಾಗಿರುತ್ತದೆ. ಈಗಾಗಲೇ ನಮ್ಮ ಭಾಗದ ಗ್ರಾಮಗಳಲ್ಲಿ ಸರ್ವೇ ಮಾಡಿದ್ದೇನೆ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗುವುದು. ಈ ವಾತಾರಣವದಲ್ಲಿ ಕರಿಕಂಬಳಿ ಹುಳುಗಳು ಹೆಚ್ಚಿದ್ದು, ಬಿಸಿಲು ಬಂದ ಕ್ಷಣ ಕಡಿಮೆ ಆಗುತ್ತದೆ. ಜೊತೆಗೆ ಸಾಯುತ್ತವೆ. ಆದರೂ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಪಿಡಿಒ ಸಿ.ಸ್ವಾಮಿ ಹೇಳಿದರು.
ಕಾಂಕ್ರಿಟ್ ಮನೆಗಳಿಗೆ ಕರಿ ಕಂಬಳಿ ಹುಳುಗಳು ಅಷ್ಟೇನು ಇರುವುದಿಲ್ಲ, ನಾಡು ಹಂಚಿನ ಮನೆಯಲ್ಲಿ ಸಂತಾನೋತ್ಪತ್ತಿ ಇರುತ್ತದೆ. ಬಿಸಿಲು ಬಂದರೆ ಅದರ ತಾಪಮಾನಕ್ಕೆ ಹುಳುಗಳು ಸಾಯುತ್ತವೆ. ಮನೆಯ ರೂಮುಗಳಲ್ಲಿ ಹಾಗೂ ರಾಸುಗಳ ಕೊಟ್ಟಿಗೆಯಲ್ಲಿ ಜಾಸ್ತಿ ಇರುತ್ತವೆ. ಬೀದಿಯಲ್ಲಿ ಹಾಗೂ ಹೊರಾಂಡದಲ್ಲಿ ಕಂಬಳಿ ಹುಳುಗಳಿರುವ ಕಡೆ ಕ್ರಿಮಿನಾಶಕ ಸಿಂಪಡಣೆ ಮಾಡಬಹುದು. ಮನೆಯ ಒಳಗಡೆ ಸಿಂಪಡಣೆ ಮಾಡುವುದರಿಂದಲೂ ಅನಾರೋಗ್ಯ ಕಾಡಬಹುದು ಎಂದು ಗ್ರಾಮ ಪಂಚಾಯಿತಿ ಸದಸ್ಯರು ತಿಳಿಸಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications