ಮಂಡ್ಯ: ಕಂಬಳಿ ಹುಳುವಿನ ಉಪಟಳ-ಹೈರಾಣಾದ ಗ್ರಾಮೀಣ ಜನತೆ
ಮಂಡ್ಯ, ಜುಲೈ 21: ಜಿಲ್ಲೆಯಲ್ಲಿ ಹಲವೆಡೆ ಕಂಬಳಿ ಹುಳುವಿನ ಕಾಟ ತೀವ್ರಗೊಂಡಿದ್ದು, ಹುಳಗಳು ಗ್ರಾಮೀಣ ಭಾಗದ ಜನಜೀವನದ ಮೇಲೆ ನೇರ ಪರಿಣಾಮ ಉಂಟುಮಾಡಿದ್ದು, ಪರಿಹಾರಕ್ಕಾಗಿ ಹಾತೊರೆಯುವಂತಾಗಿದೆ. ಮಂಗಳೂರು ಹೆಂಚಿನ ಮನೆಯವರಿಗೆ ಮಾತ್ರ ಕಂಬಳಿ ಉಪಟಳ ಕಡಿಮೆ ಇದೆ. ಆದರೆ ನಾಡಂಚಿನ ಮನೆಯವರಿಗೆ ಕಂಬಳಿ ಹುಳುವಿನ ಉಪಟಳವೇ ಹೆಚ್ಚಾಗಿದೆ. ಇದರಲ್ಲಿ ಬೀದಿ, ಮನೆಯ ಜಗುಲಿ ಹಾಗೂ ಗೋಡೆಗಳ ಮೇಲೆ ಸೇರಿದಂತೆ ಹೆಂಚುಗಳ ಮೇಲೆ ಮತ್ತು ಕೆಳಗೆ ಕಂಬಳಿ ಹುಳು ಆಶ್ರಯ ಪಡೆದು ಕುಟುಂಬಸ್ಥರು ಬೆಚ್ಚಿ ಬೀಳುವಂತಾಗಿದೆ.
ಕಂಬಳಿ ಹುಳುವಿನ ಉಪಟಳವು ಇಷ್ಟಕ್ಕೆ ಕಡಿಮೆ ಆಗುವುದಿಲ್ಲ, ಮನೆಯ ಹೊರಗೆ ಕಾಣುವ ಹುಳಗಳನ್ನು ಸಾಯಿಸಲಾಗುತ್ತದೆ. ಆದರೆ ಹೆಂಚಿನ ಮೇಲೆ ಇರುವ ಹುಳುಗಳನ್ನು ಸಾಹಿಸುವುದು ದುಸ್ಸಾಹಸವೇ ಸರಿ. ಕಂಬಳಿ ಹುಳಗಳಿಂದ ರಕ್ಷಣೆ ಪಡೆಯಲು ಕ್ರಿಮಿ ನಾಶಕ ಸಿಂಪಡಣೆ, ಲಕ್ಷ್ಮಣ ರೇಖೆ ಸೇರಿದಂತೆ ಇತರೆ ಕ್ರಿಮಿ ನಾಶಕ ಬಳಸಿದರೂ ಈ ಹುಳಗಳು ಕಡಿಮೆ ಆಗುತ್ತಿಲ್ಲ ಎಂದು ಕಂಬಳಿ ಹುಳದಿಂದ ಹೈರಾಣಾದ ರಾಗಿಮುದ್ದನಹಳ್ಳಿ ದಿನೇಶ್, ದೇವಮ್ಮ, ಚಿಕ್ಕತಾಯಮ್ಮ, ಮಧು, ನವೀನ್, ಮಂಜುನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಅಡುಗೆ ತಯಾರಿಗೂ ಕಷ್ಟ
ಅಡುಗೆ ಮನೆಯಲ್ಲಿ ಅಡುಗೆ ತಯಾರಿ ನಡೆಸುವುದು ಕಷ್ಟವಾಗಿದೆ, ಮನೆಯ ಹೆಂಚುಗಳನ್ನೆಲ್ಲಾ ಆವರಿಸಿಕೊಂಡಿರುವ ಕಂಬಳಿ ಹುಳುಗಳು ಎಲ್ಲಿ ಅಡುಗೆ ತಯಾರಿ ಸಂದರ್ಭದಲ್ಲಿ ಪಾತ್ರೆಯೊಳಗೆ ಸೇರಿಕೊಂಡಿವೆಯೋ ಎಂಬ ಆತಂಕವೂ ಇದೆ. ಕೆಲವೊಮ್ಮೆ ವಿದ್ಯುತ್ ಇಲ್ಲದ ರಾತ್ರಿ ಸಮಯದಲ್ಲಿ ಅಡುಗೆ ತಯಾರಿಸುವುದು ಸಹ ಕಷ್ಟ ಎನಿಸಿದೆ. ಮನೆಯೊಳಗಿನ ಅಲ್ಮೇರಾಗಳಲ್ಲಿ ಜೋಡಿಸಿಟ್ಟಿರುವ ಬಟ್ಟೆಗಳ ಮಧ್ಯದಲ್ಲೂ ಸಹ ಹುಳುಗಳು ಕಂಡುಬರುತ್ತಿದ್ದು, ಇದು ಮತ್ತಷ್ಟು ಆತಂಕವನ್ನುಂಟು ಮಾಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಗ್ರಾಮ ಮಚಾಯಿತಿ ಸದಸ್ಯರ ಗಮನಕ್ಕೆ ತರಲಾಗಿ, ಪಂಚಾಯಿತಿಯ ಪಿಡಿಒ ಸೇರಿದಂತೆ ಸಿಬ್ಬಂದಿ ಬಂದು ಮನೆಯ ಗೋಡೆ ಮೇಲಿರುವ ಕಂಬಳಿ ಹುಳುವಿನ ಫೋಟೋ ತೆಗೆದುಕೊಂಡು ಹೋಗಿದ್ದಾರೆ ಅಷ್ಟೆ. ಆದರೆ ಅದರಿಂದ ಯಾವುದೇ ಪ್ರಯೋಜನವೂ ಆಗಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿದೆ. ವರ್ಷಕ್ಕೊಮ್ಮೆ ಜೂನ್ ಮತ್ತು ಜುಲೈ ತಿಂಗಳಲ್ಲಿ ಈ ಹುಳುವಿನ ಕಾಟ ವಿಪರೀತವಾಗಿದೆ. ಇವುಗಳು ಮೈ ಸೋಕಿದರೆ ಸಾಕು ಆ ಭಾಗದಲ್ಲಿ ಕೆಂಪು ಗುಳ್ಳೆಗಳಾಗಿ ತಡೆಯಲಾರದ ನವೆ ಉಂಟಾಗುತ್ತದೆ ಎಂದು ಕಂಬಳಿ ಹುಳುವಿನಿಂದ ಬಾಧಿತರಾದ ಕುಮಾರ, ಶಿವು, ಮಹೇಶ ಅಸಮಾಧಾನ ವ್ಯಕ್ತಪಡಿಸಿದರು.
ಈಗ ಮಳೆಗಾಲ ಆರಂಭವಾಗಿದೆ ಇಂತಹ ವಾತಾವರಣದಲ್ಲಿ ಕಂಬಳಿ ಹುಳುವಿನ ಉಪಟಳ ಹೆಚ್ಚಿರುತ್ತದೆ. ಬಹುತೇಕ ಗ್ರಾಮೀಣ ಭಾಗದ ನಾಡು ಹಂಚಿನ ಮನೆಗಳಲ್ಲಿ ಜಾಸ್ತಿಯಾಗಿರುತ್ತದೆ. ಈಗಾಗಲೇ ನಮ್ಮ ಭಾಗದ ಗ್ರಾಮಗಳಲ್ಲಿ ಸರ್ವೇ ಮಾಡಿದ್ದೇನೆ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗುವುದು. ಈ ವಾತಾರಣವದಲ್ಲಿ ಕರಿಕಂಬಳಿ ಹುಳುಗಳು ಹೆಚ್ಚಿದ್ದು, ಬಿಸಿಲು ಬಂದ ಕ್ಷಣ ಕಡಿಮೆ ಆಗುತ್ತದೆ. ಜೊತೆಗೆ ಸಾಯುತ್ತವೆ. ಆದರೂ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಪಿಡಿಒ ಸಿ.ಸ್ವಾಮಿ ಹೇಳಿದರು.
ಕಾಂಕ್ರಿಟ್ ಮನೆಗಳಿಗೆ ಕರಿ ಕಂಬಳಿ ಹುಳುಗಳು ಅಷ್ಟೇನು ಇರುವುದಿಲ್ಲ, ನಾಡು ಹಂಚಿನ ಮನೆಯಲ್ಲಿ ಸಂತಾನೋತ್ಪತ್ತಿ ಇರುತ್ತದೆ. ಬಿಸಿಲು ಬಂದರೆ ಅದರ ತಾಪಮಾನಕ್ಕೆ ಹುಳುಗಳು ಸಾಯುತ್ತವೆ. ಮನೆಯ ರೂಮುಗಳಲ್ಲಿ ಹಾಗೂ ರಾಸುಗಳ ಕೊಟ್ಟಿಗೆಯಲ್ಲಿ ಜಾಸ್ತಿ ಇರುತ್ತವೆ. ಬೀದಿಯಲ್ಲಿ ಹಾಗೂ ಹೊರಾಂಡದಲ್ಲಿ ಕಂಬಳಿ ಹುಳುಗಳಿರುವ ಕಡೆ ಕ್ರಿಮಿನಾಶಕ ಸಿಂಪಡಣೆ ಮಾಡಬಹುದು. ಮನೆಯ ಒಳಗಡೆ ಸಿಂಪಡಣೆ ಮಾಡುವುದರಿಂದಲೂ ಅನಾರೋಗ್ಯ ಕಾಡಬಹುದು ಎಂದು ಗ್ರಾಮ ಪಂಚಾಯಿತಿ ಸದಸ್ಯರು ತಿಳಿಸಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications