ಕೊಡಗಿನಲ್ಲಿ ಮನೆ ಕಳೆದುಕೊಂಡವರಿಗೆ ಹೊಸ ಮನೆ: ವಸತಿ ಸಚಿವರ ಭರವಸೆ
ಕೊಡಗು, ಆಗಸ್ಟ್ 23: ಕೊಡಗಿನಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಹಳೆ ಮನೆಯ ಪಹಣಿ ಇದ್ದರೆ ಹೊಸ ಮನೆ ಕಟ್ಟಿ ಕೊಡುವುದಾಗಿ ವಸತಿ ಸಚಿವ ಯು.ಟಿ.ಖಾದರ್ ಇಂದು ಭರವಸೆ ನೀಡಿದ್ದಾರೆ.
ಇಂದು ಕೊಡಗಿಗೆ ಭೇಟಿ ನೀಡಿದ್ದ ಅವರು, ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ನಿರಾಶ್ರಿತರೊಂದಿಗೆ ಮಾತನಾಡಿದರು.
ಪಹಣಿ ಹೊಂದಿದವರಿಗೆ ಹಕ್ಕು ಪತ್ರ ನೀಡುವ ಮೂಲಕ ಹೊಸ ಮನೆ ಕಟ್ಟಿಕೊಡಲು ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದ ಅವರು, ನಿರಾಶ್ರಿತರಿಗೆ ಧೈರ್ಯ ತುಂಬಿದರು.

ಕೊಡಗು ಜಿಲ್ಲೆಯಲ್ಲಿ ಪ್ರವಾಃ ಪೀಡಿತ ಸ್ಥಳಗಳು ಹಾಗೂ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಜೊತೆಗೆ ನಿರಾಶ್ರಿತರೊಂದಿಗೂ ಮಾತನಾಡಿದರು.
ಕೊಡಗಿನ ಜನರ ಕಷ್ಟಗಳಲ್ಲಿ ಸರ್ಕಾರ ಜೊತೆಯಾಗಿ ನಿಲ್ಲುತ್ತದೆ ಎಂದ ಅವರು, ಆಸರೆ ಕಳೆದುಕೊಂಡಿರುವ ನದಿ ತೀರದ ಜನರು, ಸರ್ಕಾರ ಪುನರ್ವಸತಿ ಕಲ್ಪಿಸಿಕೊಡುವ ಸ್ಥಳಕ್ಕೆ ತೆರಳಿ ಹೊಸ ಜೀವನ ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಈ ವರೆಗಿನ ಲೆಕ್ಕದ ಪ್ರಕಾರ ಸುಮಾರು 800 ಮನೆಗಳು ಮಳೆಯಿಂದ ಹಾನಿಗೊಳಗಾಗಿವೆ. ಈ ಸಂಖ್ಯೆಯಲ್ಲಿ ಅರ್ಧದಷ್ಟು ಮನೆಗಳು ಸಂಪೂರ್ಣ ನಾಮಾವಶೇಷವಾಗಿವೆ.












Click it and Unblock the Notifications