ಕೊಡಗಿನಲ್ಲಿ 500 ರೂಪಾಯಿಯ ನಕಲಿ ನೋಟು ಪತ್ತೆ
ಮಡಿಕೇರಿ, ಅಕ್ಟೋಬರ್ 22: ಕೊಡಗಿನ ನಾಪೋಕ್ಲುವಿನಲ್ಲಿ ವ್ಯಕ್ತಿಯೊಬ್ಬರಿಗೆ ಸಿಕ್ಕಿರುವ 500 ಮುಖ ಬೆಲೆಯ ನೋಟೊಂದು ಆತಂಕಕ್ಕೆ ಕಾರಣವಾಗಿದೆ.
ನಾಪೋಕ್ಲು ಪ್ರಮುಖ ವಾಣಿಜ್ಯ ವಹಿವಾಟುಗಳ ಕೇಂದ್ರವಾಗಿದ್ದು, ಕೇರಳದ ನಂಟಿರುವ ಕಾರಣದಿಂದಾಗಿ ಇಲ್ಲಿ ನಕಲಿ ನೋಟು ಚಲಾವಣೆಗೆ ಬಂದಿರಬಹುದೆಂಬುದು ಹಲವರ ಅಭಿಪ್ರಾಯವಾಗಿದೆ.

ಮೋದಿ ಅವರು 500 ಮತ್ತು 1000 ರೂ.ಗಳ ನೋಟನ್ನು ಅಮಾನ್ಯಗೊಳಿಸಿದರೂ ನೂತನ ನೋಟನ್ನೇ ಖದೀಮರು ನಕಲಿ ಮಾಡಿರುವುದರಿಂದ ನಕಲಿ ನೋಟು ಇಲ್ಲಿಗೆ ಬಂದಿರಬಹುದು ಎಂದುಕೊಳ್ಳಲಾಗಿದೆ.
ಇಷ್ಟಕ್ಕೂ ಆಗಿರುವುದೇನೆಂದರೆ, ನಾಪೋಕ್ಲು ನಿವಾಸಿ ಬಿಜೆಪಿ ಮುಖಂಡರೂ ಆದ ಪಾಡಿಯಮ್ಮಂಡ ಮನುಮಹೇಶ್ ಎಂಬುವರಿಗೆ 500 ರೂ. ಮುಖಬೆಲೆಯ ನೋಟೊಂದು ಇತರೆ ನೋಟುಗಳ ನಡುವೆ ಬಂದಿತ್ತು. ಈ ನೋಟು ಮಾಮೂಲಿ 500ರ ನೋಟಿಗಿಂತ ಉದ್ದದಲ್ಲಿ ಕಡಿಮೆಯಿದೆಯಂತೆ. ಜತೆಗೆ ನೋಟಿನ ಮೇಲ್ಭಾಗದಲ್ಲಿ ಮುದ್ರಣವಾಗಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕೆಳಗೆ ಸೆಂಟ್ರಲ್ ಗವರ್ನಮೆಂಟ್ ಎಂಬ ಪದದಲ್ಲಿ ಸೆಂಟ್ರಲ್ನ ಆರಂಭಿಕ ಅಕ್ಷರ ಸಿ ಬದಲಿಗೆ ಜಿ ಎಂದಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪೆಲ್ಲಿಂಗ್ ನಲ್ಲೂ ವ್ಯತ್ಯಾಸವಿದೆ.
ಇನ್ನು ಗಾಂಧೀಜಿ ಭಾವಚಿತ್ರದ ಒಳಗೆ ಬರೆದಿರುವ 500 ಅಕ್ಷರ ಅಸಲಿ ನೋಟಿನಲ್ಲಿ ಎರಡು ಸುತ್ತಿನಲ್ಲಿದ್ದು. ನಕಲಿ ನೋಟಿನಲ್ಲಿ ಒಂದೇ ಸುತ್ತಿನಲ್ಲಿದೆ. ಹೀಗಾಗಿ ಇದು ನಕಲಿ ನೋಟಾಗಿದೆ ಎಂಬುದು ಮನು ಮಹೇಶ್ ಅಭಿಪ್ರಾಯ. ಹೀಗಾಗಿ ನೋಟುಗಳನ್ನು ಪಡೆಯುವ ಮುನ್ನ ಪರಿಶೀಲಿಸುವಂತೆ ಅವರು ಸಾರ್ವಜನಿಕರನ್ನು ಕೇಳಿಕೊಂಡಿದ್ದಾರೆ.
ನಾಪೋಕ್ಲು ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಕೂಲಿ ಕಾರ್ಮಿಕರಿದ್ದು, ಅವರಿಗೆ ಇಂತಹ ನೋಟುಗಳನ್ನು ನೀಡುವ ಸಾಧ್ಯತೆಯಿದೆ. ಈ ಬಗ್ಗೆ ಜನತೆ ಎಚ್ಚರವಾಗಿರುವುದು ಒಳಿತು. ಜತೆಗೆ ಜಿಲ್ಲಾಡಳಿತ ಇತ್ತ ಗಮನಹರಿಸಿ ತನಿಖೆ ನಡೆಸುವ ಅಗತ್ಯವಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications