ಕೊಡಗಿನಲ್ಲಿ 500 ರೂಪಾಯಿಯ ನಕಲಿ ನೋಟು ಪತ್ತೆ
ಮಡಿಕೇರಿ, ಅಕ್ಟೋಬರ್ 22: ಕೊಡಗಿನ ನಾಪೋಕ್ಲುವಿನಲ್ಲಿ ವ್ಯಕ್ತಿಯೊಬ್ಬರಿಗೆ ಸಿಕ್ಕಿರುವ 500 ಮುಖ ಬೆಲೆಯ ನೋಟೊಂದು ಆತಂಕಕ್ಕೆ ಕಾರಣವಾಗಿದೆ.
ನಾಪೋಕ್ಲು ಪ್ರಮುಖ ವಾಣಿಜ್ಯ ವಹಿವಾಟುಗಳ ಕೇಂದ್ರವಾಗಿದ್ದು, ಕೇರಳದ ನಂಟಿರುವ ಕಾರಣದಿಂದಾಗಿ ಇಲ್ಲಿ ನಕಲಿ ನೋಟು ಚಲಾವಣೆಗೆ ಬಂದಿರಬಹುದೆಂಬುದು ಹಲವರ ಅಭಿಪ್ರಾಯವಾಗಿದೆ.

ಮೋದಿ ಅವರು 500 ಮತ್ತು 1000 ರೂ.ಗಳ ನೋಟನ್ನು ಅಮಾನ್ಯಗೊಳಿಸಿದರೂ ನೂತನ ನೋಟನ್ನೇ ಖದೀಮರು ನಕಲಿ ಮಾಡಿರುವುದರಿಂದ ನಕಲಿ ನೋಟು ಇಲ್ಲಿಗೆ ಬಂದಿರಬಹುದು ಎಂದುಕೊಳ್ಳಲಾಗಿದೆ.
ಇಷ್ಟಕ್ಕೂ ಆಗಿರುವುದೇನೆಂದರೆ, ನಾಪೋಕ್ಲು ನಿವಾಸಿ ಬಿಜೆಪಿ ಮುಖಂಡರೂ ಆದ ಪಾಡಿಯಮ್ಮಂಡ ಮನುಮಹೇಶ್ ಎಂಬುವರಿಗೆ 500 ರೂ. ಮುಖಬೆಲೆಯ ನೋಟೊಂದು ಇತರೆ ನೋಟುಗಳ ನಡುವೆ ಬಂದಿತ್ತು. ಈ ನೋಟು ಮಾಮೂಲಿ 500ರ ನೋಟಿಗಿಂತ ಉದ್ದದಲ್ಲಿ ಕಡಿಮೆಯಿದೆಯಂತೆ. ಜತೆಗೆ ನೋಟಿನ ಮೇಲ್ಭಾಗದಲ್ಲಿ ಮುದ್ರಣವಾಗಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕೆಳಗೆ ಸೆಂಟ್ರಲ್ ಗವರ್ನಮೆಂಟ್ ಎಂಬ ಪದದಲ್ಲಿ ಸೆಂಟ್ರಲ್ನ ಆರಂಭಿಕ ಅಕ್ಷರ ಸಿ ಬದಲಿಗೆ ಜಿ ಎಂದಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪೆಲ್ಲಿಂಗ್ ನಲ್ಲೂ ವ್ಯತ್ಯಾಸವಿದೆ.
ಇನ್ನು ಗಾಂಧೀಜಿ ಭಾವಚಿತ್ರದ ಒಳಗೆ ಬರೆದಿರುವ 500 ಅಕ್ಷರ ಅಸಲಿ ನೋಟಿನಲ್ಲಿ ಎರಡು ಸುತ್ತಿನಲ್ಲಿದ್ದು. ನಕಲಿ ನೋಟಿನಲ್ಲಿ ಒಂದೇ ಸುತ್ತಿನಲ್ಲಿದೆ. ಹೀಗಾಗಿ ಇದು ನಕಲಿ ನೋಟಾಗಿದೆ ಎಂಬುದು ಮನು ಮಹೇಶ್ ಅಭಿಪ್ರಾಯ. ಹೀಗಾಗಿ ನೋಟುಗಳನ್ನು ಪಡೆಯುವ ಮುನ್ನ ಪರಿಶೀಲಿಸುವಂತೆ ಅವರು ಸಾರ್ವಜನಿಕರನ್ನು ಕೇಳಿಕೊಂಡಿದ್ದಾರೆ.
ನಾಪೋಕ್ಲು ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಕೂಲಿ ಕಾರ್ಮಿಕರಿದ್ದು, ಅವರಿಗೆ ಇಂತಹ ನೋಟುಗಳನ್ನು ನೀಡುವ ಸಾಧ್ಯತೆಯಿದೆ. ಈ ಬಗ್ಗೆ ಜನತೆ ಎಚ್ಚರವಾಗಿರುವುದು ಒಳಿತು. ಜತೆಗೆ ಜಿಲ್ಲಾಡಳಿತ ಇತ್ತ ಗಮನಹರಿಸಿ ತನಿಖೆ ನಡೆಸುವ ಅಗತ್ಯವಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications