ಕೊಡವ ಕುಟುಂಬದಿಂದ ಸಂಭ್ರಮವ ಕೈಲ್ ಮುಹೂರ್ತ ಆಚರಣೆ
ಕುಶಾಲನಗರ, ಸೆಪ್ಟೆಂಬರ್ 3: ಕೊಡಗಿನ ಪ್ರಮುಖ ಹಬ್ಬವಾದ ಕೈಲ್ ಮುಹೂರ್ತವನ್ನು ಜಿಲ್ಲೆಯಾದ್ಯಂತ ಸಡಗರ- ಸಂಭ್ರಮದಿಂದ ಶನಿವಾರ ಆಚರಿಸಲಾಯಿತು. ಕೊಡವ ಕುಟುಂಬದ ಹಿರಿಯರು ತಮ್ಮ ಐನ್ ಮನೆಗಳಲ್ಲಿ ಹಿರಿಯರಿಗೆ ಮೀದಿ(ಎಡೆ) ಇಡುವ ಮೂಲಕ ಹಾಗೂ ಗುರು- ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು.

ಕುಶಾಲನಗರ ವ್ಯಾಪ್ತಿಯ ಕೂಡಿಗೆ, ಗುಡ್ಡೆಹೊಸೂರು, ಕೊಡಗರಹಳ್ಳಿ, ಸುಂಟಿಕೊಪ್ಪ, ನಂಜರಾಯಪಟ್ಟಣ, ಹುದುಗೂರು, ವಾಲ್ನೂರು, 7ನೇ ಹೊಸಕೋಟೆ, ರಂಗಸಮುದ್ರ, ಹಾರಂಗಿ, ಚಿಕ್ಕತ್ತೂರು ಮೊದಲಾದೆಡೆ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಕುಶಾಲನಗರದ ನೇತಾಜಿ ಬಡಾವಣೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ.ಅಪ್ಪಣ್ಣ ತಮ್ಮ ನಿವಾಸದಲ್ಲಿ ಹಬ್ಬವನ್ನು ಕೊಡವ ಸಂಪ್ರದಾಯದಂತೆ ಆಚರಿಸಿದರು.[ಸಿಎನ್ ಸಿಯಿಂದ ಮಡಿಕೇರಿಯಲ್ಲಿ ಕೈಲ್ ಪೋಳ್ದ್]

ಇದೇ ಸಂದರ್ಭ ಕೋವಿ, ಕತ್ತಿ, ನೇಗಿಲು, ನೊಗ ಸೇರಿದಂತೆ ನಿತ್ಯ ಬಳಕೆ ಆಯುಧಗಳನ್ನು ಮನೆ ಮುಂಭಾಗದಲ್ಲಿ ಜೋಡಿಸಿ, ಸಾಂಪ್ರದಾಯಿಕ ಉಡುಗೆ ಧರಿಸಿ, ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿದರು. ಕೊಡಗಿನ ಪುರಾತನ ಕಾಲದಲ್ಲಿ ಬಳಸುತ್ತಿದ್ದ ಅಪರೂಪದ ಆಯುಧಗಳು, ಕೃಷಿ ಹತ್ಯಾರುಗಳು ಹಾಗೂ ಇನ್ನಿತರ ಗೃಹ ಬಳಕೆಯ ಸಾಂಪ್ರದಾಯಿಕ ವಸ್ತುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು.
ಕೊಡಗಿನ ವಿವಿಧ ಸ್ಥಳಗಳಿಂದ ಮತ್ತು ಜನರಿಂದ ಸಂಗ್ರಹಿಸಿದ ಪುರಾತನ ಆಯುಧಗಳಾದ ಅಂಬ್ಕತ್ತಿ, ಪೀಚೆಕತ್ತಿ, ಪಿಲ್ಕತ್ತಿ, ಕೊಯಕತ್ತಿ, ಬಾಳ್ಕತ್ತಿ, ಮರದುಡಿ, ಮುಂಬಟ್ಟ, ಲಾಟೀನ್, ಕರಿಕುಟ್ಟು, ಜರಡಿ, ತೊಟ್ಟಿಲು, ಕೈಕಣೆ, ನೊಗ, ತಾವೆ, ಗುಜಾಯಿ, ಪೊಳಿಯ, ಒಟ್ಟಮರಿಯ, ಕೊರಂಬೆ, ನೂಪುಟ್ಟೊರ, ಮೇರ್ಕುತ್ತಿ, ತಾಪೆ, ಪೋಳಿಯ, ಕೂಪಾರ್, ತೊಟ್ಟನೇತಿ, ನೇಂಗಿ, ಕರಗಂಟೆ, ಮಣ್ಣಿನ ದೀಪಗಳು, ಉದಿ ಮುಂತಾದ ಅಪರೂಪದ ವಸ್ತುಗಳು ಸುತ್ತಮುತ್ತಲಿನ ಜನರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾದವು.[ಭತ್ತದ ಕೃಷಿಯ ಬತ್ತದ ಖುಷಿ: ಕೊಡಗಿನಲ್ಲಿ ಕೈಲ್ ಮುಹೂರ್ತದ ಸಂಭ್ರಮ]

ಪೂಜೆಯ ನಂತರ ಹಬ್ಬದ ಸಾಂಪ್ರದಾಯಿಕ ಭಕ್ಷ್ಯಗಳಾದ ಕಡುಬಿಟ್ಟು, ತಳಿಯಪುಟ್ಟ್, ಪಣಿಪುಟ್ಟ್, ಇಡ್ಲಿ, ಕೋಳಿಕರಿ, ಕೊರಿಕರಿ, ಪಾಯಸ, ಶ್ಯಾವಿಗೆ ಹಾಗೂ ಪಂದಿಕರಿಯಂತಹ ವಿಶಿಷ್ಟ ಭೋಜನವನ್ನು ಒಟ್ಟಿಗೆ ಸೇರಿ ಸವಿಯುಂಡರು.
ನಂತರ ಈ ಹಬ್ಬದ ವಿಶೇಷವೆನಿಸಿದ ತೆಂಗಿನ ಕಾಯಿಯನ್ನು ಮರದ ಕೊಂಬೆಗೆ ಕಟ್ಟಿ ಅದನ್ನು ಗುರಿಯಿಟ್ಟು ಗುಂಡು ಹೊಡೆಯುವಲ್ಲಿ ಡಾ.ವಿಕ್ರಂಅಪ್ಪಣ್ಣ, ಡಾ.ಶಾನೀಲ್ ವಿಕ್ರಂ ಯಶಸ್ವಿಯಾದರು.[ದಾಂಪತ್ಯಕ್ಕೆ ಕಾಲಿರಿಸಿದ ಸಾಧಕಿ ಕೊಡಗಿನ ಪ್ರೀತ್]
ಅಕಾಡೆಮಿಯ ಮಾಜಿ ಸದಸ್ಯೆ ರಾಣುಅಪ್ಪಣ್ಣ ಮಾತನಾಡಿ, ನಮ್ಮ ಪೂರ್ವಿಕರು ಆಚರಿಸಿಕೊಂಡು ಬರುತ್ತಿರುವ ಮೂಲ ಕೊಡವ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು ಎಂದರು.
ಹಬ್ಬದ ಅಂಗವಾಗಿ ಹಳ್ಳಿಗಳಲ್ಲಿ ತಮ್ಮ ಕೃಷಿ ಕಾರ್ಯಕ್ಕೆ ಬಳಸುವ ಎತ್ತುಗಳಿಗೆ ಸ್ನಾನ ಮಾಡಿಸಿ, ಪೂಜೆ ಸಲ್ಲಿಸಿ, ಪಣಿಪುಟ್ಟ್ ತಿನ್ನಿಸಲಾಯಿತು.
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications