ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾರಂಗಿ ಡ್ಯಾಮ್ ಒಡೆದಿಲ್ಲ, ಕೊಡಗಿನಲ್ಲಿ ಭೂಕಂಪವಾಗಲ್ಲ: ಸಿಎಂ ಟ್ವೀಟ್

By Mahesh
|
Google Oneindia Kannada News

Recommended Video

ಹಾರಂಗಿ ಜಲಾಶಯದ ಬಗ್ಗೆ ಹರಡಿರುವ ಸುದ್ದಿಯ ಬಗ್ಗೆ ಎಚ್ ಡಿ ಕೆ ಸ್ಪಷ್ಟನೆ | Oneindia Kannada

ಮಡಿಕೇರಿ, ಆಗಸ್ಟ್ 19: ಸತತ ಮಳೆಯಿಂದ ತತ್ತರಿಸಿರುವ ಕಿತ್ತಲೆ ನಾಡು ಕೊಡಗಿನಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಈ ನಡುವೆ ಹಾರಂಗಿ ಅಣೆಕಟ್ಟು ಬಿರುಕು ಬಿಟ್ಟಿದೆ ಎಂಬ ಸುಳ್ಳು ಸುದ್ದಿಯೊಂದು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

ಕಿಡಿಗೇಡಿಗಳು ಹಬ್ಬಿಸಿರುವ ಈ ಸುಳ್ಳು ಸುದ್ದಿಯ ಬಗ್ಗೆ ಕಾವೇರಿ ನೀರಾವರಿ ನಿಗಮ ನಿಯಮಿತ ಪುನರ್ವಸತಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಆರ್ ಕೆ ರಾಜೇಗೌಡ ಅವರು ಸ್ಪಷ್ಟನೆ ನೀಡಿದ್ದು, ಇಂಥ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದಿದ್ದಾರೆ.

ಭಾರಿ ಮಳೆಯಿಂದ ಕರ್ನಾಟಕದ ಹಲವು ಜಲಾಶಯಗಳಲ್ಲಿ ಬಿರುಕುಭಾರಿ ಮಳೆಯಿಂದ ಕರ್ನಾಟಕದ ಹಲವು ಜಲಾಶಯಗಳಲ್ಲಿ ಬಿರುಕು

ಇಂಥ ವದಂತಿಗೆ ಕಿವಿಗೊಡಬೇಡಿ, ಅಣೆಕಟ್ಟು ಸುಭದ್ರವಾಗಿದೆ ಎಂದು ಹಾರಂಗಿ ಜಲಾಶಯದ ಕಾರ್ಯಪಾಲಕ ಇಂಜಿನಿಯರ್ ಆರ್ ರಾಜೇಗೌಡ ಅವರು ಪ್ರಕಟಣೆ ಹೊರಡಿಸಿದ್ದಾರೆ.

Harangi Dam is not damaged, Dont spread rumours : Executive Engineer Rajegowda

ಮಳೆ ಸಂತ್ರಸ್ತ ಕೊಡಗು ಜನತೆಗೆ ನೆರವು ಎಲ್ಲೆಡೆಯಿಂದ ಹರಿದು ಬರುತ್ತಿದೆ. ಭಾರತೀಯ ಸೇನೆ, ವಿಪತ್ತು ನಿರ್ವಹಣಾ ದಳ, ಆರೆಸ್ಸೆಸ್, ಸ್ವಯಂ ಸೇವಕರ ಸಂಘ ಸೇರಿದಂತೆ ಹಲವು ಸಂಘಟನೆಗಳು ನೆರವಾಗುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೆರೆ ಪರಿಹಾರ ಕಾರ್ಯವನ್ನು ಗಮನಿಸುತ್ತಿದ್ದಾರೆ. ಈ ನಡುವೆ ಆತಂಕ ಸೃಷ್ಟಿಸುವ ಇಂಥ ಸುದ್ದಿಗಳನ್ನು ನಂಬಬೇಡಿ ಎಂದು ಸಾರ್ವಜನಿಕರು ಕೂಡಾ ಮನವಿ ಮಾಡಬೇಕಾಗಿದೆ.

ಕೊಡಗು ಜಿಲ್ಲೆಯಲ್ಲಿ ಭೂಕಂಪವಾಗಲಿದೆ ಎಂಬ ಸುದ್ದಿ ನಂಬಬೇಡಿ ಎಂದು ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಸಂದೇಶ

English summary
Harangi Dam executive engineer Rajegowda has released a press note to spread awareness. There are few false news, rumour being spread over social media that there is damage over Harangi dam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X