Dubare Elephant Camp: ದುಬಾರೆ ಆನೆ ಶಿಬಿರದಲ್ಲಿ ಕಾವೇರಿಗೆ ಅಡ್ಡಲಾಗಿ ಬೇಕೇ ಬೇಕು ತೂಗು ಸೇತುವೆ!

ಮಡಿಕೇರಿ, ಜುಲೈ. 01: ಕಾವೇರಿ ನದಿಯಿಂದ ಸೃಷ್ಟಿಯಾದ ದುಬಾರೆ ಕಾಡು ದ್ವೀಪ ಪ್ರದೇಶವಾಗಿದೆ. ಸುತ್ತಲೂ ಹರಿಯುವ ಕಾವೇರಿ ನದಿ ಅದರ ನಡುವೆ ನೆಲೆನಿಂತಿರುವ ಕೊಡಗಿನ ಕುಶಾಲನಗರ ಬಳಿಯ ಈ ಸ್ಥಳ ಇವತ್ತು ಆನೆಗಳ ಶಿಬಿರವಾಗಿ, ಪ್ರವಾಸಿ ಕೇಂದ್ರವಾಗಿ ಎಲ್ಲರನ್ನು ಆಕರ್ಷಿಸುತ್ತದೆ. ದುಬಾರೆ ಕಾಡಿನಲ್ಲಿ ಆನೆ ಶಿಬಿರ ಇದೆ. ಇಲ್ಲಿ ಮದವೇರಿದ ಆನೆಗಳನ್ನು ಹಿಡಿದು ಪಳಗಿಸುತ್ತಾರೆ.

ದುಬಾರೆ ಆನೆ ಶಿಬಿರವು ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಪ್ರವಾಸಿ ತಾಣಕ್ಕೆ ಪ್ರತಿ ವರ್ಷ ಸಾವಿರಾರು ಜನರು ಭೇಟಿ ನೀಡುತ್ತಾರೆ. ಸದ್ಯ ಮಳೆಗಾಲದಲ್ಲಿ ಕಾವೇರಿ ನದಿ ನೀರಿನ ಮಟ್ಟ ಹೆಚ್ಚಾಗಿದೆ. ಆನೆ ಶಿಬಿರಕ್ಕೆ ಬಂದವರು ಹರಸಾಹಸ ಪಡುವಂತಾಗಿದೆ. ಇದಕ್ಕೆ ಕಾರಣ ಕಾವೇರಿ ನದಿಯನ್ನು ದಾಟಲು ಪ್ರವಾಸಿಗರು ಕಷ್ಟ ಪಡುತ್ತಿರುವುದು.

Hanging bridge proposed across Cauvery in Dubare Elephant Camp

ಕಾವೇರಿಯಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಪ್ರಸ್ತಾಪ

ಈ ಪ್ರಸಿದ್ಧ ಆನೆ ಶಿಬಿರವು ಮಳೆಗಾಲದಲ್ಲಿ ಕಾವೇರಿ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳದಿಂದಾಗಿ ಪ್ರವಾಸಿಗರಿಗೆ ತನ್ನ ಬಾಗಿಲುಗಳನ್ನು ಮುಚ್ಚುವಂತಾಗಿದೆ. ಆನೆ ಶಿಬಿರಕ್ಕೆ ತೆರಳಲು ಪಡಿಪಾಟಲು ಪಡುತ್ತಿರುವ ಪ್ರವಾಸಿಗರು ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆ ಕಟ್ಟಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ದುಬಾರೆ ಅನೆ ಶಿಬಿರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣಕ್ಕೆ ಅನುವು ಮಾಡಿಕೊಡುವಂತೆ ರಾಜ್ಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ದುಬಾರೆ ಶಿಬಿರವು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುವ 15 ಕ್ಕೂ ಹೆಚ್ಚು ಪಳಗಿದ ಆನೆಗಳಿಗೆ ನೆಲೆಯಾಗಿದೆ. ಶಿಬಿರವು ಕಾವೇರಿ ನದಿಯ ದಡದಲ್ಲಿದೆ. ಹೀಗಾಗಿ ಪ್ರವಾಸಿಗರು ಆನೆ ಶಿಬಿರವನ್ನು ತಲುಪಲು ನದಿಯನ್ನು ದಾಟಬೇಕು.

ನದಿ ದಾಟಲು ಪ್ರವಾಸಿಗರ ಪಡಿಪಾಟಲು!

ದುಬಾರೆ ಎಲಿಫೆಂಟ್ ಕ್ಯಾಂಪ್ ತಲುಪಲು ಕಾಲ್ನಡಿಗೆಯಲ್ಲಿ ನದಿ ದಾಟಲು ಸಾವಿರಾರು ಪ್ರವಾಸಿಗರು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಪ್ರವಾಸಿ ತಾಣದಲ್ಲಿ ಮಾಮೂಲಿಯಾಗಿಬಿಟ್ಟಿದೆ. ಬೇಸಿಗೆಯಲ್ಲಿ ನದಿ ದಾಟುವುದು ತುಂಬಾ ಸುಲಭದ ಕೆಲಸ. ಆದರೆ, ಮಳೆಗಾಲದಲ್ಲಿ ಹೆಚ್ಚುತ್ತಿರುವ ಕಾವೇರಿ ನದಿ ನೀರಿನ ಮಟ್ಟವು ಕಾಲ್ನಡಿಗೆಯಲ್ಲಿ ಶಿಬಿರ ತಲುಪಲು ಪ್ರಯತ್ನಿಸುವ ಪ್ರವಾಸಿಗರಿಗೆ ಇದು ತುಂಬಾ ಪ್ರಾಸದಾಯಕ ಕೆಲಸ.

Hanging bridge proposed across Cauvery in Dubare Elephant Camp

ಮಳೆಗಾಲದಲ್ಲಿ ಕಾವೇರಿ ನದಿಯ ನೀರಿನ ಮಟ್ಟ ಅಪಾಯಕಾರಿ ಮಟ್ಟದಲ್ಲಿ ಇಲ್ಲದಿದ್ದಾಗ ನದಿ ದಾಟಲು ಇಲಾಖೆಯಿಂದ ದೋಣಿ ಸೌಲಭ್ಯ ಇತ್ತು. ಆದರೆ, ನೀರು ಹೆಚ್ಚಿನ ಮಟ್ಟ ಹೆಚ್ಚಿದಾಗ ಅದು ತುಂಬಾ ಅಪಾಯಕಾರಿ ಎಂದು ಭಾವಿಸಿ ದೋಣಿ ಸೌಲಭ್ಯ ನಿಲ್ಲಿಸಲಾಗುತ್ತದೆ. ಹೀಗಾಗಿ ಆನೆ ನೋಡಲು ದುಬಾರೆಗೆ ಬರುವ ಪ್ರವಾಸಿಗರು ಬೇಸರದಲ್ಲಿ ಹಿಂತಿರುಗುತ್ತಿದ್ದಾರೆ.

ತೂಗು ಸೇತುವೆಯನ್ನು ಸ್ಥಾಪಿಸಲು ಹಲವಾರು ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದ್ದರೂ, ಅದು ಅನುಮೋದನೆ ಪಡೆಯುವಲ್ಲಿ ವಿಫಲವಾಗಿದೆ. ಆದರೆ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧಪಡಿಸುವಂತೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಕುಶಾಲನಗರ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ. 6 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಜ್ಯಕ್ಕೆ ಸಲ್ಲಿಸಲಾಗಿದ್ದು, ಈ ನಿಟ್ಟಿನಲ್ಲಿ ವಿವಿಧ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಡಾ.ಮಂತರ್ ಗೌಡ ಖಚಿತಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+