ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆ.8ಕ್ಕೆ ಕೊಡಗು ಜಿಲ್ಲೆಗೆ ಬರಲಿದೆ ಕೇಂದ್ರ ಪರಿಶೀಲನಾ ತಂಡ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಸೆಪ್ಟೆಂಬರ್ 3: ಪ್ರಕೃತಿ ವಿಕೋಪ ಪೀಡಿತ ಕೊಡಗು ಜಿಲ್ಲೆಯಲ್ಲಿ ಭೂ ಕುಸಿತ ಹಾಗೂ ಮಹಾ ಮಳೆಯಿಂದ ಉಂಟಾದ ಸಮಸ್ಯೆ ಪರಿಶೀಲನೆಗೆ ಕೇಂದ್ರ ಸರ್ಕಾರದ ಪರಿಶೀಲನಾ ತಂಡ ಕೊಡಗು ಜಿಲ್ಲೆಗೆ ಭೇಟಿ ನೀಡಲಿದೆ.

Recommended Video

Ragini ಹಾಗು Sanjana ಬಗ್ಗೆ ಹೊಸ ಬಾಂಬ್ ಸಿಡಿಸಿದ Prashanth Sambargi | Oneindia Kannada

ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಸೆಪ್ಟೆಂಬರ್ 8ರಂದು ಕೇಂದ್ರ ಸರ್ಕಾರದ ಕಾರ್ಯದರ್ಶಿ ಪ್ರತಾಪ್ ನೇತೃತ್ವದಲ್ಲಿ ಕೇಂದ್ರ ಸರಕಾರದ ಪರಿಶೀಲನಾ ತಂಡವು ಕೊಡಗಿಗೆ ಭೇಟಿ ನೀಡಲಿದೆ ಎಂದು ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದಾರೆ.

ಕೊಡಗಿನಲ್ಲಿ ತಗ್ಗಿದ ಮಳೆರಾಯ; ಜಿಲ್ಲೆಯ ಮಳೆ ವಿವರ...ಕೊಡಗಿನಲ್ಲಿ ತಗ್ಗಿದ ಮಳೆರಾಯ; ಜಿಲ್ಲೆಯ ಮಳೆ ವಿವರ...

ಈ ತಂಡವು ಬುಧವಾರ ಮುಖ್ಯಮಂತ್ರಿ ಹಾಗೂ ಪ್ರಮುಖ ಸಚಿವರೊಂದಿಗೆ ಸಭೆ ನಡೆಸಲಿದ್ದು ರಾಜ್ಯದ ಇತರೆಡೆ ಉಂಟಾಗಿರುವ ಅತಿವೃಷ್ಟಿ ಹಾನಿ ಬಗ್ಗೆ ಸಮಗ್ರ ವರದಿಯನ್ನು ಈ ಸಮಯದಲ್ಲಿ ಸಲ್ಲಿಸಲಾಗುತ್ತದೆ. ಅಂದಾಜು 4,800 ಕೋಟಿ ರೂಪಾಯಿ ಅತಿವೃಷ್ಟಿಯಿಂದ ನಷ್ಟ ಸಂಭವಿಸಿದೆ ಎಂದು ಆರ್ ಅಶೋಕ್ ತಿಳಿಸಿದ್ದಾರೆ.

Kodagu: Central Inspection Team Visiting On September 8

ಈ ಬಾರಿ ಕೇಂದ್ರ ಸರ್ಕಾರ ರಾಜ್ಯದ ಕೋರಿಕೆಯನ್ನು ಮನ್ನಿಸಿ ಅಧಿಕ ಹಣ ಪರಿಹಾರ ರೂಪದಲ್ಲಿ ನೀಡಬಹುದು ಎಂಬ ಆಶಾಭಾವನೆಯನ್ನು ಅಶೋಕ್ ವ್ಯಕ್ತಪಡಿಸಿದ್ದಾರೆ.

English summary
The central government inspection team will visit Kodagu district to check the impact of the landslide and heavy rains in the Kodagu district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X