Get Updates
Get notified of breaking news, exclusive insights, and must-see stories!

ಕೈತಪ್ಪಿದ ಮಡಿಕೇರಿ ಟಿಕೆಟ್: ರಾಜೇಶ್ ಖನ್ನಾ ಡೈಲಾಗ್ ಹೇಳಿದ ಕಾಳಪ್ಪ

ಬೆಂಗಳೂರು, ಏಪ್ರಿಲ್ 16: ಮಡಿಕೇರಿ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಪ್ರೀಂ ಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ನಿರಾಶರಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಧಾನ ಹೊರಹಾಕಿರುವ ಅವರು ನಾನು ಮುಂದಿನ ಬಾರಿ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ ರಾಜೇಶ್ ಖನ್ನಾ ಡೈಲಾಗ್ ಉಲ್ಲೇಖಿಸಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಮಡಿಕೇರಿಯ ಟಿಕೆಟನ್ನು ಮಾಜಿ ಕರ್ನಾಟಕದ ಸರ್ಕಾರಿ ಅಭಿಯೋಜಕ ಎಚ್.ಎಸ್ ಚಂದ್ರಮೌಳಿಯವರಿಗೆ ನೀಡಲಾಗಿದೆ. ಇದರಿಂದ ಕಾಳಪ್ಪ ಆಕ್ರೋಶಿತರಾಗಿದ್ದಾರೆ.

ಸತತ ಟಿಕೆಟ್ ನಿರಾಕರಣೆ

ಸತತ ಟಿಕೆಟ್ ನಿರಾಕರಣೆ

ಫೇಸ್ಬುಕ್ ನಲ್ಲಿ ಬ್ರಿಜೇಶ್ ಕಾಳಪ್ಪ ಹೀಗೆ ಬರೆದುಕೊಂಡಿದ್ದಾರೆ. "ನನಗೆ 2009, 2014ರಲ್ಲಿ ಲೋಕಸಭೆ, 2014, 16, 18ರಲ್ಲಿ ರಾಜ್ಯ ಸಭೆ ಮತ್ತು ಈಗ ವಿಧಾನಸಭೆಗೆ ಟಿಕೆಟ್ ನೀಡಿಲ್ಲ.

2016ರಲ್ಲಿ ಪಕ್ಷ ಸೇರಿದವನಿಂದಾಗಿ ಚುನಾವಣಾ ಸ್ಪರ್ಧೆಯಿಂದ ಹೊರಗುಳಿಯುವಂತಾದ ಅವಮಾನವನ್ನು ಸಹಿಸಿಕೊಂಡಿದ್ದೇನೆ. ಅವರಿಗೆ ಅದೇ ವರ್ಷ ಪರಿಷತ್ತಿಗೆ ಟಿಕೆಟ್ ನೀಡಲಾಯಿತು. ಅಂದು ಪರಿಷತ್ ಚುನಾವಣೆಯಲ್ಲಿ ಸೋತ ವ್ಯಕ್ತಿಗೆ ಈಗ ಮಡಿಕೇರಿಯಿಂದ ವಿಧಾನಸಭೆಗೆ ಟಿಕೆಟ್ ನೀಡಲಾಗಿದೆ. ಒಬ್ಬ ವ್ಯಕ್ತಿಗೆ ಇಷ್ಟೊಂದು ಅವಕಾಶ ನೀಡಬಹುದಾದರೆ, ಜಯಪ್ರಕಾಶ್ ಹೆಗ್ಡೆಯಂಥ ಅತ್ಯುತ್ತಮ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇಕೆ? ಲೋಕಸಭೆಯಲ್ಲಿ ಸೋತ ನಂತರ ಪರಿಷತ್ತಿಗೆ ಟಿಕೆಟ್ ಕೇಳಿದ್ದಕ್ಕಾ ಎಂಬ ಪ್ರಶ್ನೆ ಹುಟ್ಟುತ್ತದೆ," ಎಂದು ಅವರು ಫೇಸ್ಬುಕ್ ಗೋಡೆ ಮೇಲೆ ಬರೆದುಕೊಂಡಿದ್ದಾರೆ.

 ವಿನೋದ್ ಖನ್ನಾ ಡೈಲಾಗ್

ವಿನೋದ್ ಖನ್ನಾ ಡೈಲಾಗ್

"ಮುಂದಿನ ಬಾರಿ ನಾನು ಗ್ರಾಮ ಪಂಚಾಯತ್ ಚುನಾವಣೆಗೆ ನಿಲ್ಲುತ್ತೇನೆ!

ನಿಮಗೆ ಸ್ಟೇಟಸ್ಸಿಗೆ ಸೂಕ್ತವಾಗುವಂಥ ಸಾಂವಿಧಾನಿಕ ಸ್ಥಾನಮಾನಕ್ಕೆ ಯತ್ನಿಸಿ ಎಂದು ನಮ್ಮ ಪಕ್ಷದಲ್ಲಿ ಒಬ್ಬರು ಹೇಳುತ್ತಿದ್ದರು.

ಅಂಥ ಸ್ನೇಹಿತರ ಮಾತಿಗೆ ನನ್ನ ಗೌರವವಿದೆ. ದಯವಿಟ್ಟು ನನ್ನ ಸ್ಥಿತಿಗೆ ಮರುಗಿ ಕಣ್ಣೀರು ಸುರಿಸಬೇಡಿ. ಇಷ್ಟೊಂದು ನಿರಾಶೆಗಳಾದ ಮೇಲೆ ರಾಜೇಶ್ ಖನ್ನಾ ಅವರ 'ಪುಷ್ಪಾ, ನಾನು ಕಣ್ಣೀರನ್ನು ದ್ವೇಷಿಸುತ್ತೇನೆ' ಎಂಬ ಮಾತಿಗೆ ನಾನು ಅರ್ಹನಾಗಿದ್ದೇನೆ," ಎಂದು ಹೇಳಿದ್ದಾರೆ.

ಗೆಲ್ಲುವುದು ಖಚಿತವಾಗಿತ್ತು

ಗೆಲ್ಲುವುದು ಖಚಿತವಾಗಿತ್ತು

"ದೇವರ ಮಾರ್ಗವು ಅವನ ಹಾಕಿದ ಹಾದಿಯಲ್ಲಿದೆ ಎಂದು ಪ್ರತಿ ಎರಡು ಬಾರಿ ಪಾದ್ರಿಯು ನಿಮಗೆ ಹೇಳುವಂತೆಯೇ, ರಾಜಕೀಯ ಕಾರ್ಯಕರ್ತನು ನೀವು ಚುನಾವಣೆಗೆ ಸ್ಪರ್ಧಿಸುವ ಮುನ್ನವೇ ನೀವು ಗೆಲ್ಲುತ್ತಿರೋ ಅಥವಾ ಇಲ್ಲವೋ ಎಂದು ಹೇಳುತ್ತಾನೆ.

ದೇವರೊಂದಿಗೆ ಸಂಬಂಧವು ಖಾಸಗಿ ಮತ್ತು ವೈಯಕ್ತಿಕವಾಗಿರುವಂತೆ, ಮತದಾರರೊಂದಿಗೆ ಸಂಬಂಧವೂ ಅದೇ ರೀತಿಯಾದದ್ದು.

ಒಬ್ಬ ಅಭ್ಯರ್ಥಿಯು ನನ್ನ ಸುರಕ್ಷತಾ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದನು. ಮತದಾರರು ಏನು ಆಲೋಚಿಸುತ್ತಿದ್ದಾರೆಂಬುದನ್ನು ಅವರಿಗೆ ಸ್ಪಷ್ಟವಾಗಿರುವಾಗ, ಅವರು ಪಕ್ಷದಿಂದ ನಾಮಪತ್ರವನ್ನು ಯಾಕೆ ಬಯಸುತ್ತಿದ್ದರು? ಸ್ವತಂತ್ರವಾಗಿ ಭಾರೀ ಅಂತರದಿಂದ ಅವರು ಜಯ ಸಾಧಿಸಬಹುದಿತ್ತು !!!," ಎಂದು ಬ್ರಿಜೇಶ್ ಕಾಳಪ್ಪ ವ್ಯಂಗ್ಯವಾಡಿದ್ದಾರೆ.

ಅಭಿಯಾನದ ಬಲಿಪಶು

ಅಭಿಯಾನದ ಬಲಿಪಶು

"ಜನರು 'ಆಯ್ಕೆಯಾಗದವರು' ಎಂದು ಕರೆಯುವ ತಪ್ಪನ್ನು ನನ್ನಂತ ಕಾಂಗ್ರೆಸ್ ನಲ್ಲಿರುವ ಅನೇಕರ ವಿರುದ್ಧ ಮಾಡಿದ್ದಾರೆ- ಅದೇ ವ್ಯಕ್ತಿಗಳು ನಮಗೆ ಇದೆಲ್ಲಾ ತಪ್ಪು ಎಂದು ಸಾಬೀತು ಮಾಡಿದ್ದಾರೆ. ಸಂಪೂರ್ಣವಾಗಿ ತಪ್ಪು!

ನಾನು ಅಂತಹ ಒಂದು ಅಭಿಯಾನದ ಬಲಿಪಶುವಾಗಿದ್ದೇನೆ. ಏಕೆ? ಏಕೆಂದರೆ ನಾನು ಸಾಮಾನ್ಯ ಬಟ್ಟೆಗಳನ್ನು ಧರಿಸುತ್ತಿದ್ದೇನೆ, ಸಣ್ಣ ಸ್ಥಳಗಳಲ್ಲಿ ತಿನ್ನುತ್ತೇನೆ, ಅದೃಷ್ಟದೊಂದಿಗೆ ಪ್ರಯಾಣಿಸುವುದಿಲ್ಲ, ನಾನು ಪ್ರಾಮಾಣಿಕ, ನಾನು ಭೂಮಿಗಿಳಿಯುತ್ತೇನೆ ಮತ್ತು ಗಾಳಿಯಲ್ಲಿ ಹಾರಾಡುವುದಿಲ್ಲ

ನಾವು ಎಎಪಿಯಿಂದ ಕಲಿಯುತ್ತೇವೆ ಎಂದು ರಾಹುಲ್ ಗಾಂಧಿಯವರು ಹೇಳುತ್ತಾರೆ.ಹಾಗಿದ್ದರೆ ಇದೇನಾ ನಾವು ಕಲಿತಿದ್ದು," ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸಿಗೆ ಕೃತಜ್ಞ

ಕಾಂಗ್ರೆಸಿಗೆ ಕೃತಜ್ಞ

"ಈಗ, ಕಳೆದ 2 ದಿನಗಳಲ್ಲಿ ಇತರ ಪಕ್ಷಗಳಿಗೆ ಸೇರಲು ಹಲವಾರು ಆಮಂತ್ರಣಗಳು ಬಂದಿವೆ. ಧನ್ಯವಾದಗಳು, ಆದರೆ ಧನ್ಯವಾದಗಳಿಲ್ಲ. ಅನೇಕ ಚುನಾಯಿತ ಹುದ್ದೆಗಳನ್ನು ನನಗೆ ನಿರಾಕರಿಸಿದ ಬಗ್ಗೆ ನನ್ನ ಕೊನೆಯ ಪೋಸ್ಟ್ ನಲ್ಲಿ ಹೇಳಿದ್ದೆ. ಇಲ್ಲಿಗೆ ಲೋಟ ಭರ್ತಿಯಾಗಿದೆ.

ಕಾಂಗ್ರೆಸ್ ರಾಷ್ಟ್ರದಲ್ಲೆಲ್ಲಾನನಗೆ ಗುರುತಿಸಲ್ಪಡುವ ವ್ಯಕ್ತಿತ್ವವನ್ನು ನೀಡಿದೆ. ಪಕ್ಷವು ಕರ್ನಾಟಕದಲ್ಲಿ ನನಗೆ ಮಹೋನ್ನತ ಸ್ಥಾನ ನೀಡಿತು. ನನ್ನ ಪ್ರಯತ್ನಗಳಿಗಿಂತ ಹೆಚ್ಚಿನದನ್ನು ಕಾಂಗ್ರೆಸ್ ನನಗೆ ನೀಡಿದೆ ಮತ್ತು ಅದರ ನಾಯಕತ್ವಕ್ಕೆ ನಾನು ಶಾಶ್ವತವಾಗಿ ಕೃತಜ್ಞರಾಗಿರಬೇಕು," ಎಂದು ಅವರು ಪೋಸ್ಟ್ ಹಾಕಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+