ಎಸ್ಪಿ-ಆರ್ಎಲ್ಡಿ ಮೈತ್ರಿಕೂಟ: 29 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಲಕ್ನೋ, ಜನವರಿ 13: ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕದಳ ನಡುವಿನ ಮೈತ್ರಿಯು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ 29 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. 29 ಸ್ಥಾನ ಪೈಕಿ ಎಸ್ಪಿ 10 ಮತ್ತು ಆರ್ಎಲ್ಡಿ 19 ರಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದೆ ಎಂದು ಕಳೆದ ವರ್ಷ ಮೈತ್ರಿ ಘೋಷಿಸಿದ ಎರಡು ಪಕ್ಷಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪಟ್ಟಿಯಲ್ಲಿ ತಿಳಿದು ಬಂದಿದೆ.
ಎಸ್ಪಿಯು ಆಗ್ರಾದಲ್ಲಿ ಕುನ್ವರ್ ಸಿಂಗ್, ಬಾಹ್ನಿಂದ ಮಧುಸೂದನ್ ಶರ್ಮಾ, ಸಾಹಿಬಾಬಾದ್ನಿಂದ ಅಮರ್ಪಾಲ್ ಶರ್ಮಾ, ಧೌಲಾನಾದಿಂದ ಅಸ್ಲಂ ಚೌಧರಿ, ಕೋಲ್ನಿಂದ ಸಲ್ಮಾನ್ ಸಯೀದ್, ಅಲಿಗಢದಿಂದ ಜಾಫರ್ ಆಲಂ, ಕೈರಾನಾದಿಂದ ನಹಿದ್ ಹಸನ್, ಚಾರ್ತಾವಾಲ್ನಿಂದ ಪಂಕಜ್ ಮಲಿಕ್, ಶಾಹಿದ್ ಮಂಜೂರ್ನಿಂದ ಕೆ. ಮೀರತ್ನಿಂದ ರಫೀಕ್ ಅನ್ಸಾರಿರನ್ನು ಕಣಕ್ಕೆ ಇಳಿಸಿದೆ.
ಇನ್ನು ಆರ್ಎಲ್ಡಿ ಸದಾಬಾದ್ನಿಂದ ಪ್ರದೀಪ್ ಚೌಧರಿ (ಗುಡ್ಡು), ಛಾಟಾದಿಂದ ತೇಜ್ಪಾಲ್ ಸಿಂಗ್, ಗೋವರ್ಧನ್ನಿಂದ ಪ್ರೀತಮ್ ಸಿಂಗ್, ಆಗ್ರಾದಿಂದ ಮಹೇಶ್ ಕುಮಾರ್ ಜಾತವ್ (ಗ್ರಾಮೀಣ), ಸಿಕ್ರಿ ಬ್ರಿಜೇಶ್ ಚಾಹರ್ ಫತೇಪುರದಿಂದ, ರೌತನ್ ಸಿಂಗ್ ಖೈರಗಢದಿಂದ, ಸುದೇಶ್ ಶರ್ಮಾ ಮೋದಿನಗರದಿಂದ ಮತ್ತು ಮದನ್ ಭಯ್ಯಾ ಲೋನಿಯಿಂದ ಕಣಕ್ಕೆ ಇಳಿಸಿದೆ.

ಆರ್ಎಲ್ಡಿಯು ಹಾಪುರ್ನಿಂದ ಗಜರಾಜ್ ಸಿಂಗ್, ಜೇವರ್ನಿಂದ ಅವತಾರ್ ಸಿಂಗ್ ಭದಾನ, ಬುಲಂದ್ಶಹರ್ನಿಂದ ಹಾಜಿ ಯೂನಸ್, ಸಯಾನಾದಿಂದ ದಿಲ್ನವಾಜ್ ಖಾನ್, ಖೇರ್ನಿಂದ ಭಗವತಿ ಪ್ರಸಾದ್ ಸೂರ್ಯವಂಶಿ, ಶಾಮ್ಲಿಯಿಂದ ಪ್ರಸನ್ ಚುಧರಿ, ಪುರ್ಖಾಜಿಯಿಂದ ಅನಿಲ್ ಕುಮಾರ್, ಖತೌಲಿಯಿಂದ ರಾಜ್ಪಾಲ್ ಸಿಂಗ್ ಸೈನಿ, ಮುನ್ಷಿ ರಾಮ್ ಸಿಂಗ್ ಸೈನಿ ಅವರನ್ನು ಕಣಕ್ಕಿಳಿಸಿದೆ. ಇನ್ನು ನಹ್ತೌರ್ನಿಂದ ಮತ್ತು ಅಹ್ಮದ್ ಹಮೀದ್ ಬಾಗ್ಪತ್ನಿಂದ ಕಣಕ್ಕೆ ಇಳಿಸಿದೆ. '
ಏಕೈಕ ಮಹಿಳಾ ಅಭ್ಯರ್ಥಿ
ಗುರುವಾರ ಘೋಷಿಸಲಾದ 29 ಅಭ್ಯರ್ಥಿಗಳ ಪೈಕಿ ಆರ್ಎಲ್ಡಿಯ ಬಬಿತಾ ದೇವಿ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದು, ಅವರು ಬಲದೇವ್ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಹೋರಾಟವನ್ನು ಎದುರಿಸಲಿದ್ದಾರೆ. ಆಗ್ರಾ ಗ್ರಾಮಾಂತರ, ಆಗ್ರಾ ಕ್ಯಾಂಟ್, ಬಲದೇವ್, ಖೈರ್, ಪುರ್ಖಾಜಿ ಮತ್ತು ಹಾಪುರ್ ಸ್ಥಾನಗಳಲ್ಲಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಈ ಎಲ್ಲಾ ಸ್ಥಾನಗಳು ಉತ್ತರ ಪ್ರದೇಶದ ಪಶ್ಚಿಮ ಪ್ರದೇಶದಲ್ಲಿ ಇರಲಿದೆ.
ಕಳೆದ 24 ಗಂಟೆಗಳಲ್ಲಿ ಬಿಜೆಪಿಯನ್ನು ಸಚಿವರು ತೊರೆದಿದ್ದು ಕೇವಲ ಟೀಸರ್ ಮಾತ್ರ ಎಂದು ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜ್ಭರ್ ಹೇಳಿದ್ದಾರೆ. ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಸಚಿವರು, ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದು ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಬಿಜೆಪಿಯ ಮಿತ್ರಪಕ್ಷವಾಗಿದ್ದ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜ್ಭರ್ ಈಗ ಸಮಾಜವಾದಿ ಪಕ್ಷದ ಜತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. SP ಈಗ ಪೂರ್ವಾಂಚಲ ಪ್ರದೇಶಕ್ಕಾಗಿ ರಾಜ್ಬರ್ ಸಮುದಾಯದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಮೈತ್ರಿ ಮಾಡಿಕೊಂಡ ಪಕ್ಷ ಅವರಿಗೆ ಮತಗಳನ್ನು ನೀಡುತ್ತದೆ. ಅದೇ ರೀತಿ ಇತರ ಸಣ್ಣ ಪಕ್ಷಗಳೊಂದಿಗಿನ ಪ್ರಮುಖ ಮೈತ್ರಿಗಳು ಪ್ರಮುಖ ಸಮುದಾಯದ ಮತಗಳನ್ನು ನೀಡುತ್ತವೆ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಪಂಜಾಬ್, ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications