ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಪರಿಹಾರ ಘೋಷಿಸಿದ ಯೋಗಿ ಆದಿತ್ಯನಾಥ್
ಲಕ್ನೋ, ಏಪ್ರಿಲ್ 10: ದೇಶಾದ್ಯಂತ ಲಾಕ್ಡೌನ್ನಿಂದ ಲಕ್ಷಾಂತರ ಕಾರ್ಮಿಕರು ಕಂಗಾಲಾಗಿದ್ದಾರೆ. ಕೆಲಸವಿಲ್ಲದೆ, ಕೂಲಿ ಇಲ್ಲದೆ, ಊಟವಿಲ್ಲದೆ ಪರದಾಡುತ್ತಿದ್ದಾರೆ. ಇದೀಗ ಉತ್ತರ ಪ್ರದೇಶ ಸರ್ಕಾರ ಇಂತಹವರ ನೆರವಿಗೆ ಬಂದಿದೆ.
Recommended Video
ಕಟ್ಟಡ ನಿರ್ಮಾಣ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ 1 ಸಾವಿರ ರೂಪಾಯಿಯನ್ನು ನೀಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ಮೊದಲ ಹಂತದಲ್ಲಿ 11 ಲಕ್ಷ ಕಾರ್ಮಿಕರಿಗೆ ತಲಾ ಒಂದು ಸಾವಿರ ರೂಪಾಯಿ ಅವರ ಖಾತೆಗೆ ಜಮಾ ಆಗಲಿದೆ ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದ 15 ಜಿಲ್ಲೆಗಳಲ್ಲಿ ಸಂಪೂರ್ಣ ದಿಗ್ಬಂಧನ
ರಾಜ್ಯದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಲಕ್ಷಾಂತರ ಕುಟುಂಬಗಳು ಇದನ್ನೇ ನಂಬಿಕೊಂಡಿವೆ. ಹೀಗಾಗಿ, ಚರ್ಚೆ ನಡೆಸಿ ಸರ್ಕಾರ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಪರಿಹಾರ ನೀಡುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಲಾಕ್ಡೌನ್ನಿಂದ ಮನೆಯಿಂದ ಹೊರ ಬರುವ ಹಾಗೆ ಇಲ್ಲ. ಯಾವುದೇ ಕಟ್ಟಡ ನಿರ್ಮಾಣ ಕಾರ್ಯಗಳು ಇಲ್ಲ. ಇದರಿಂದ ದಿನ ನಿತ್ಯದ ಕೂಲಿಯನ್ನು ನಂಬಿಕೊಂಡಿದ್ದ ಎಷ್ಟೋ ಕುಟುಂಬಕ್ಕೆ ಇದರಿಂದ ಊಟಕ್ಕೂ ಕಷ್ಟವಾಗಿದೆ.
Government had decided to extend help to those people whose livelihood has been affected due to #COVID19. In this context, in the first phase, more than 11 lakh construction workers in the state have been provided Rs 1,000 each in their accounts: Uttar Pradesh CM Yogi Adityanath pic.twitter.com/XXuqlUoGif
— ANI UP (@ANINewsUP) April 10, 2020
ಉತ್ತರ ಪ್ರದೇಶದಲ್ಲಿ ಸದ್ಯ 410 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿವೆ. 4 ಜನರು ಮರಣ ಹೊಂದಿದ್ದಾರೆ.