ಸಮಾಜವಾದಿ ಪಕ್ಷದ ಎಲ್ಲಾ ಘಟಕಗಳನ್ನು ವಿಸರ್ಜಿಸಿದ ಅಖಿಲೇಶ್ ಯಾದವ್

ಲಕ್ನೋ, ಜುಲೈ3: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಯುವ, ಮಹಿಳಾ ಸೇರಿದಂತೆ ಎಲ್ಲಾ ಘಟಕಗಳನ್ನು ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾರ್ಯಕಾರಿ ಸಂಸ್ಥೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಭಾನುವಾರ ವಿಸರ್ಜಿಸಿದ್ದಾರೆ.

ಯಾವುದೇ ಅಧಿಕೃತ ಕಾರಣವನ್ನು ನೀಡದಿದ್ದರೂ, ಪಕ್ಷದ ಭದ್ರಕೋಟೆಗಳಾದ ರಾಂಪುರ ಮತ್ತು ಅಜಂಗಢದಲ್ಲಿ ಲೋಕಸಭಾ ಉಪಚುನಾವಣೆ ಸೋಲಿನ ನಂತರ ಎಸ್‌ಪಿಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂಬ ಸುದ್ದಿ ಹಬ್ಬಿದೆ. ಪಕ್ಷದ ಉತ್ತರ ಪ್ರದೇಶ ಅಧ್ಯಕ್ಷ ನರೇಶ್ ಉತ್ತಮ್ ಉನ್ನತ ಸ್ಥಾನದಲ್ಲಿ ಮುಂದುವರಿಯುತ್ತಾರೆ ಎಂದು ಪಕ್ಷ ಹೇಳಿದೆ.

"ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, ಪಕ್ಷದ ರಾಜ್ಯಾಧ್ಯಕ್ಷರನ್ನು ಹೊರತುಪಡಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾರ್ಯಕಾರಿ ಸಂಸ್ಥೆಗಳನ್ನು ವಿಸರ್ಜಿಸಿದರು. ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು, ಯುವಜನ, ಮಹಿಳಾ ಸೇರಿದಂತೆ ಪಕ್ಷದ ಎಲ್ಲ ಘಟಕಗಳನ್ನು ವಿಸರ್ಜಿಸಲಾಗಿದೆ" ಎಂದು ಪಕ್ಷವು ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ತಿಳಿಸಿದೆ.

2024ರ ಲೋಕಸಭೆ ಚುನಾವಣೆಗೆ ಪಕ್ಷವು ಸಜ್ಜಾಗುತ್ತಿದ್ದು, ಬಿಜೆಪಿಯನ್ನು ಸಂಪೂರ್ಣ ಬಲದಿಂದ ಎದುರಿಸಲು ಸಂಘಟನೆಯನ್ನು ಬಲಪಡಿಸುವತ್ತ ಗಮನ ಹರಿಸಲಾಗಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಉಪಚುನಾವಣೆ ಸೋಲಿನಿಂದ ಕಂಗಾಲು

ಉಪಚುನಾವಣೆ ಸೋಲಿನಿಂದ ಕಂಗಾಲು

ಕಾರಣವನ್ನು ನೀಡದಿದ್ದರೂ ಇತ್ತೀಚಿನ ಅಜಂಗಢ ಮತ್ತು ರಾಂಪುರದಲ್ಲಿ ನಡೆದ ಉಪಚುನಾವಣೆಗಳಲ್ಲಿ ಸಮಾಜವಾದಿ ಪಕ್ಷ ಸೋಲಿನಿಂದ ಕಂಗೆಟ್ಟಿದೆ. "ಪಕ್ಷವು 2024 ರ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದೆ ಮತ್ತು ಬಿಜೆಪಿಯನ್ನು ಪೂರ್ಣ ಬಲದಿಂದ ಎದುರಿಸಲು ಸಂಘಟನೆಯನ್ನು ಬಲಪಡಿಸುವತ್ತ ಗಮನ ಹರಿಸಲಾಗಿದೆ" ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ

ಬಿಜೆಪಿಯ ದಿನೇಶ್ ಲಾಲ್ ಯಾದವ್ ನಿರಾಹುವಾ ಅವರು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅವರ ಸೋದರ ಸಂಬಂಧಿ ಮತ್ತು ಎಸ್‌ಪಿ ಅಭ್ಯರ್ಥಿ ಧರ್ಮೇಂದ್ರ ಯಾದವ್ ಅವರನ್ನು ಅಜಂಗಢದಲ್ಲಿ 8,679 ಮತಗಳಿಂದ ಸೋಲಿಸಿದರು. ಬಿಜೆಪಿ ಅಭ್ಯರ್ಥಿ 3,12,768 ಮತಗಳನ್ನು ಪಡೆದರೆ, ಎಸ್‌ಪಿ ಅಭ್ಯರ್ಥಿ 3,04,089 ಮತಗಳನ್ನು ಪಡೆದಿದ್ದಾರೆ. ಲೋಕಸಭೆ ಸ್ಥಾನವನ್ನು ಈ ಹಿಂದೆ ಅಖಿಲೇಶ್ ಯಾದವ್ ಪ್ರತಿನಿಧಿಸಿದ್ದರು, ಅವರು ಕರ್ಹಾಲ್ ವಿಧಾನಸಭಾ ಸ್ಥಾನಕ್ಕೆ ಆಯ್ಕೆಯಾದ ನಂತರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಎಸ್‌ಪಿಯ ಅಜಂ ಖಾನ್‌ ಭದ್ರಕೋಟೆಯಾದ ರಾಂಪುರವನ್ನು ಬಿಜೆಪಿಯೂ ವಶಪಡಿಸಿಕೊಂಡಿದೆ. ನೇರ ಹಣಾಹಣಿಯಲ್ಲಿ ಕೇಸರಿ ಪಕ್ಷದ ಅಭ್ಯರ್ಥಿ ಘನಶ್ಯಾಮ್ ಲೋಧಿ ಅವರು ಎಸ್‌ಪಿ ಅಭ್ಯರ್ಥಿ ಅಸೀಂ ರಾಜಾ ಅವರನ್ನು 42,192 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ

ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ

ಎರಡೂ ಕ್ಷೇತ್ರಗಳ ಉಪಚುನಾವಣೆ ಹಿನ್ನಡೆಯ ನಂತರ ಅಖಿಲೇಶ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. "ಬಿಜೆಪಿಯ ಗೆಲುವು ಅಪ್ರಾಮಾಣಿಕತೆ, ವಂಚನೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ನಿರ್ಲಕ್ಷ್ಯ. ಬಲವಂತ, ಆಡಳಿತದ ಗೂಂಡಾಗಿರಿ, ಚುನಾವಣಾ ಆಯೋಗದ ಧೃತರಾಷ್ಟ್ರ ದೃಷ್ಟಿ ಮತ್ತು ಬಿಜೆಪಿಯ ಕೌರವ ಸೇನೆಯಿಂದ ಸಾರ್ವಜನಿಕ ಆದೇಶವನ್ನು ಹೈಜಾಕ್ ಮಾಡಿದ ವಿಜಯವಾಗಿದೆ. ಪ್ರಜಾಪ್ರಭುತ್ವವು ರಕ್ತಸ್ರಾವವಾಗಿದೆ ಮತ್ತು ಸಾರ್ವಜನಿಕ ಜನಾದೇಶವನ್ನು ಕಳೆದುಕೊಂಡಿದೆ" ಎಂದು ಆರೋಪಿಸಿದ್ದರು.

ಪಲ್ಲವಿ ಪಟೇಲ್ ಬಂಧನಕ್ಕೆ ಖಂಡನೆ

ಪಲ್ಲವಿ ಪಟೇಲ್ ಬಂಧನಕ್ಕೆ ಖಂಡನೆ

ಅಖಿಲೇಶ್ ಯಾದವ್, ತಮ್ಮ ಮೈತ್ರಿಕೂಟದ ಪಾಲುದಾರ ಅಪ್ನಾ ದಳ (ಕಾಮೆರವಾಡಿ) ಅಧ್ಯಕ್ಷೆ ಕೃಷ್ಣ ಪಟೇಲ್ ಮತ್ತು ಅವರ ಪುತ್ರಿ ಎಸ್‌ಪಿ ಶಾಸಕಿ ಪಲ್ಲವಿ ಪಟೇಲ್ ಅವರನ್ನು ಬಂಧಿಸಿರುವುದನ್ನು ಖಂಡಿಸಿದ್ದಾರೆ.

ಅಪ್ನಾ ದಳದ ಸಂಸ್ಥಾಪಕ ಮತ್ತು ಕೃಷ್ಣ ಪಟೇಲ್ ಅವರ ದಿವಂಗತ ಪತಿ ಡಾ.ಸೋನೆಲಾಲ್ ಪಟೇಲ್ ಅವರ ಜನ್ಮದಿನವನ್ನು ಆಚರಿಸಲು ಕೃಷ್ಣ ಪಟೇಲ್ ಮತ್ತು ಪಲ್ಲವಿ ಪಟೇಲ್ ಅವರಿಗೆ ಆಡಳಿತದ ಅನುಮತಿ ನಿರಾಕರಣೆ ಅತ್ಯಂತ ಅಪ್ರಜಾಸತ್ತಾತ್ಮಕ ಮತ್ತು ನಿರಂಕುಶ ಪ್ರಭುತ್ವವಾಗಿದೆ ಎಂದು ಆರೋಪಿಸಿದ್ದರು.

ಪ್ರತಿಪಕ್ಷ ನಾಯಕರ ವಿರುದ್ಧ ಸರ್ಕಾರ ರಾಜಕೀಯ ಸೇಡಿನ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಸರ್ಕಾರದ ಆದೇಶದ ಮೇರೆಗೆ ಡಾ.ಸೋನೆಲಾಲ್ ಪಟೇಲ್ ಅವರ ಜನ್ಮದಿನವನ್ನು ಆಚರಿಸಲು ಆಡಳಿತವು ಅನುಮತಿ ನೀಡಲಿಲ್ಲ ಎಂದು ಅವರು ಆರೋಪಿಸಿದರು. "ಪ್ರಜಾಪ್ರಭುತ್ವದಲ್ಲಿ ಮಗಳು ತನ್ನ ತಂದೆಯ ಜನ್ಮ ದಿನಾಚರಣೆಯನ್ನು ಆಚರಿಸದಂತೆ ತಡೆಯುವುದು ದುರದೃಷ್ಟಕರ" ಎಂದು ಅವರು ಹೇಳಿದರು.

Recommended Video

      ಜಾನಿ ಬೆರಿಸ್ಟೋ ಕಣ್ಣೀರ ಕಥೆ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+