ರಾಹುಲ್ ಗಾಂಧಿ ಮಹಿಳೆಯನ್ನು ಅವಮಾನಿಸಿದ್ದಾರೆ : ಮೋದಿ
ಲಕ್ನೋ, ಜನವರಿ 09 : 'ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಕ್ಷಣಾ ಸಚಿವರನ್ನು ಟೀಕಿಸುವ ಮೂಲಕ ಮಹಿಳೆಯರನ್ನು ಅವಮಾನಿಸಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬುಧವಾರ ಉತ್ತರ ಪ್ರದೇಶದ ಆಗ್ರಾದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಟೀಕಿಸಿದರು. 'ಪ್ರಧಾನಿ ಚರ್ಚೆಗೆ ಬರದೇ ಓಡಿ ಹೋಗಿದ್ದಾರೆ. ಮಹಿಳೆಯನ್ನು ಸಮರ್ಥಿಸಿಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಟೀಕಿಸಿದ್ದರು.
ಸೋನಿಯಾ, ರಾಹುಲ್ರಿಂದ 100 ಕೋಟಿ ರೂ. ತೆರಿಗೆ ವಂಚನೆ?
ಇಂದಿನ ಸಮಾವೇಶದಲ್ಲಿ ಈ ಹೇಳಿಕೆಗೆ ತಿರುಗೇಟು ಕೊಟ್ಟ ನರೇಂದ್ರ ಮೋದಿ ಅವರು, 'ನಮ್ಮ ರಕ್ಷಣಾ ಸಚಿವರು ನಮ್ಮ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ಅವರ ಸುಳ್ಳುಗಳನ್ನು ಹೊರಹಾಕಿದ್ದಾರೆ. ವಿರೋಧಿಗಳು ರಕ್ಷಣಾ ಸಚಿವರನ್ನು ಅವಮಾನಿಸುತ್ತಿದ್ದಾರೆ' ಎಂದರು.
ಹೊಸ ಇತಿಹಾಸ ಸೃಷ್ಟಿಸಿದ ಕಾಂಗ್ರೆಸ್, ತೃತೀಯಲಿಂಗಿಗೆ ಪ್ರಮುಖ ಸ್ಥಾನ
'ಕಾಂಗ್ರೆಸ್ನವರು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮಾತ್ರ ಅವಮಾನಿಸುತ್ತಿಲ್ಲ. ದೇಶದ ಮಹಿಳಾ ಸಮುದಾಯವನ್ನೇ ಅವಮಾನಿಸಿದ್ದಾರೆ' ಎಂದು ಮೋದಿ ವಾಗ್ದಾಳಿ ನಡೆಸಿದರು.
'ಪ್ರಧಾನಿ ಹಸ್ತಕ್ಷೇಪ ಮಾಡಿದರಾ, ಇಲ್ಲವಾ? ಇಷ್ಟುದ್ದ ಭಾಷಣ ಏಕೆ?'
'ರಫೆಲ್ ಯುದ್ಧ ವಿಮಾನ ಖರೀದಿ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ಮೋದಿ ಸಿದ್ಧರಿಲ್ಲ. ಆದ್ದರಿಂದ, ಸಂಸತ್ಗೆ ಬರದೇ ಓಡಿ ಹೋಗುತ್ತಿದ್ದಾರೆ' ಎಂದು ರಾಹುಲ್ ಗಾಂಧಿ ಟೀಕಿಸಿದ್ದರು.
Prime Minister Narendra Modi in Agra: Those didn't even see face to face with each other, are getting scared looking at the chowkidaar. They think whatever happens to us will happen, but chowkidaar should be removed first. Till chowkidaar is there nobody can loot. pic.twitter.com/tPsm1ZmYRO
— ANI UP (@ANINewsUP) January 9, 2019
ಒಬ್ಬರ ಮುಖ ಮತ್ತೊಬ್ಬರು ನೋಡಲ್ಲ : ಮಹಾಘಟಬಂಧನ್ ಬಗ್ಗೆ ಲೇವಡಿ ಮಾಡಿದ ಮೋದಿ, 'ಅವರು ಒಬ್ಬರ ಮುಖ ಮತ್ತೊಬ್ಬರು ನೋಡಲ್ಲ. ಈಗ ಎಲ್ಲರೂ ಒಂದಾಗಿ ಬಂದಿದ್ದಾರೆ' ಎಂದು ವ್ಯಂಗ್ಯವಾಡಿದರು.