'ಬಿಜೆಪಿ ಬಿಟ್ಟು ಇನ್ಯಾರಿಂದಲೂ ಅಯೋಧ್ಯೆಯಲ್ಲಿ ರಾಮಮಂದಿರ ಸಾಧ್ಯವಿಲ್ಲ'

ಲಖನೌ, ಡಿಸೆಂಬರ್ 23: ಯಾವಾಗಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಲಿ, ಅದು ನಮ್ಮಿಂದ (ಬಿಜೆಪಿ) ಮಾತ್ರ. ಇದರಲ್ಲಿ ಅನುಮಾನ ಬೇಡ. ಬೇರೆ ಯಾವ ಪಕ್ಷವೂ ಕಟ್ಟಲು ಸಾಧ್ಯವಿಲ್ಲ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಹೇಳಿದ್ದಾರೆ.

ಯುವಕರೇ ಹೆಚ್ಚಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಅವರು ಮಾತನಾಡಿದರು. ಈ ವೇಳೆ ಸಭೆಯಲ್ಲಿದ್ದವರು, ಯಾರು ಮಂದಿರ ನಿರ್ಮಿಸುತ್ತಾರೋ ಅವರಿಗೇ ಅಧಿಕಾರಕ್ಕೆ ಏರಲು ಮತ ಎಂದು ಘೋಷಣೆ ಕೂಗಿದರು.

ಯಾರು ಜನಿವಾರ ತೋರಿಸುತ್ತಾರೋ ಅದನ್ನು ಮತಕ್ಕಾಗಿ ಮಾಡುತ್ತಾರೆ. ರಾಮ ಹಾಗೂ ಕೃಷ್ಣ ಅಸ್ತಿತ್ವದಲ್ಲೇ ಇರಲಿಲ್ಲ ಅಂದವರು ಇವರೇ. ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುತ್ತಾರೆ ಎಂಬ ಯಾವ ನಿರೀಕ್ಷೆಯೂ ಇಟ್ಟುಕೊಳ್ಳಬೇಡಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಯೋಗಿ ಆದಿತ್ಯನಾಥ್ ತಿವಿದರು.

Yogi Adityanath

ನಮ್ಮ ಇತಿಹಾಸದ ಬಗ್ಗೆ ತಪ್ಪಾದ ಮಾಹಿತಿ ನೀಡಲಾಗಿದೆ. ಅದನ್ನು ಸರಿ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಪುಷ್ಪಕ ವಿಮಾನ (ರಾಮಾಯಣದಲ್ಲಿ ಪ್ರಸ್ತಾವ ಇದೆ) ಅದು ಸತ್ಯ. ಸಗೇ ಭಾರದ್ವಾಜ್ ಬರೆದಿರುವ 'ವಿಮಾನ ಶಾಸ್ತ್ರ'ದಲ್ಲಿ ಪುಷ್ಪಕ ವಿಮಾನದ ಮಾಹಿತಿಯಿದೆ ಎಂದಿದ್ದಾರೆ.

ಕುಂಭ ಮೇಳವನ್ನು ಸಹ ಯುವ ವಿರೋಧಿ, ದಲಿತ ವಿರೋಧಿ, ಮಹಿಳಾ ವಿರೋಧಿ, ಪ್ರಕೃತಿ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಪ್ರಯಾಗ್ ರಾಜ್ ಕುಂಭ್ ನಲ್ಲಿ ಭಾರತದ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ತೋರಲಾಗುತ್ತದೆ ಎಂದು ಯೋಗಿ ಹೇಳಿದ್ದಾರೆ.

ಜನವರಿ ಹದಿನೈದನೇ ತಾರೀಕು ಅಧಿಕೃತವಾಗಿ ಕುಂಭ ಮೇಳಕ್ಕೆ ಚಾಲನೆ ದೊರೆಯುತ್ತದೆ. ಮಾರ್ಚ್ ನಾಲ್ಕರ ಶಿವರಾತ್ರಿಯಂದು ಕೊನೆಯಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+