ಅಪಾಯಕಾರಿ ಘಟನೆ: ದಲಿತ ಹುಡುಗನಿಗೆ ಥಳಿಸಿ, ಕಾಲು ನೆಕ್ಕಲು ಬಲವಂತ
ರಾಯ್ಬರೇಲಿ, ಏಪ್ರಿಲ್ 19: ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಜಾತಿ ಆಧಾರಿತ ಹಿಂಸಾಚಾರ ನಡೆದಿದೆ. ದಲಿತ ಸಮುದಾಯದ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆಸಿ ಆರೋಪಿಗಳಲ್ಲಿ ಒಬ್ಬನ ಕಾಲು ನೆಕ್ಕುವಂತೆ ಮಾಡಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ 2 ನಿಮಿಷ 30 ಸೆಕೆಂಡ್ಗಳ ವೀಡಿಯೊದಲ್ಲಿ ಹುಡುಗನೊಬ್ಬ ನೆಲದ ಮೇಲೆ ಕುಳಿತಿದ್ದಾನೆ. ಇದು ಶಿಕ್ಷೆಯ ಸಂಕೇತವಾಗಿರುವಂತೆ ಕಾಣಿಸುತ್ತದೆ. ಆರೋಪಿಗಳು ಮೋಟಾರು ಸೈಕಲ್ಗಳಲ್ಲಿ ಕುಳಿತಿದ್ದಾರೆ. ಬಲಿಪಶು ನೆಲದ ಮೇಲೆ ಭಯದಿಂದ ನಡುಗಿದಾಗ ಕೆಲವರು ನಗುತ್ತಾರೆ. ಒಬ್ಬ ಆರೋಪಿಯು ಸಂತ್ರಸ್ತನನ್ನು ಮೇಲ್ಜಾತಿಯವನಾದ 'ಠಾಕೂರ್' ಎಂಬ ಹೆಸರನ್ನು ಪ್ರಸ್ತಾಪಿಸುತ್ತಾನೆ ಮತ್ತು ಆತನನ್ನು ನಿಂದಿಸುತ್ತಾನೆ. ಇನ್ನೊಬ್ಬ ಆರೋಪಿ "ಮತ್ತೆ ಇಂತಹ ತಪ್ಪು ಮಾಡ್ತೀಯಾ?" ಸಂತ್ರಸ್ತನನ್ನು ಕೇಳುತ್ತಾನೆ.
ಗಾಂಜಾ ಮಾರಾಟ ಮಾಡಿದ ಆರೋಪದ ಮೇಲೆ ಬಾಲಕನನ್ನು ಈ ರೀತಿ ನಡೆಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಜೊತೆಗೆ ವಿಡಿಯೋದಲ್ಲಿ ಬಾಲಕನನ್ನು ಬಲವಂತವಾಗಿ ಆರೋಪವನ್ನು ಒಪ್ಪಿಕೊಂಡಂತೆ ತೋರುತ್ತದೆ. ಘಟನೆ ಏಪ್ರಿಲ್ 10 ರಂದು ನಡೆದಿದ್ದು, ಸಂತ್ರಸ್ತ ಬಾಲಕನ ಲಿಖಿತ ದೂರಿನ ನಂತರ ಕೆಲವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಯ ವಿಡಿಯೋ ವೈರಲ್ ಆದ ನಂತರ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದ ಕೆಲವು ಆರೋಪಿಗಳು ಮೇಲ್ಜಾತಿಯವರು ಎಂದು ಕರೆಯಲಾಗುತ್ತದೆ.
"ನೊಂದ ವಿದ್ಯಾರ್ಥಿಯು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಂತರ ಆತನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಯುಪಿ ಪೊಲೀಸರು ಕಾನೂನಿನ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅದೇ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ಅಶೋಕ್ ಸಿಂಗ್ ಹೇಳಿದ್ದಾರೆ. ಹೇಳಿಕೆಯಲ್ಲಿ ತಿಳಿಸಿದ್ದಾರೆ

ಈ ಬಾಲಕ 10 ನೇ ತರಗತಿ ವಿದ್ಯಾರ್ಥಿಯಾಗಿದ್ದು, ವಿಧವೆ ತಾಯಿಯೊಂದಿಗೆ ವಾಸಿಸುತ್ತಿದ್ದಾನೆ. ಸ್ಥಳೀಯ ವರದಿಗಳ ಪ್ರಕಾರ ಆತನ ತಾಯಿ ಬಂಧಿತ ಕೆಲವು ಆರೋಪಿಗಳ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದಳು ಮತ್ತು ಹುಡುಗನು ಹೇಳಿದ ಕೆಲಸಕ್ಕೆ ಹಣವನ್ನು ಕೇಳುತ್ತಿದ್ದನು. ಇದರಿಂದ ಕುಪಿತಗೊಂಡ ಆರೋಪಿಗಳು ಬಾಲಕನನ್ನು ಹಿಡಿದು ನಿಂದಿಸಿ, ಹಲ್ಲೆ ನಡೆಸಿ ಆರೋಪಿಗಳಲ್ಲಿ ಒಬ್ಬನ ಪಾದಗಳನ್ನು ನೆಕ್ಕುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಪ್ರಕರಣದಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಈ ನಿರ್ದಿಷ್ಟ ಅಂಶಗಳನ್ನು ಉಲ್ಲೇಖಿಸಿಲ್ಲ.












Click it and Unblock the Notifications