ಯುಪಿ ಚುನಾವಣೆಯತ್ತ ಚಿತ್ತ: ರಾಜ್ಯ ಪ್ರವಾಸ ಪುನರಾರಂಭಿಸಿದ ಅಖಿಲೇಶ್ ಯಾದವ್‌

ಲಕ್ನೋ, ಜು.28: ಸಮಾಜವಾದಿ ಪಕ್ಷದ (ಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯತ್ತ ಚಿತ್ತ ನೆಟ್ಟಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಪ್ರವಾಸವನ್ನು ಪುನರಾರಂಭಿಸಿದ್ದಾರೆ. ಜುಲೈ 21 ರಂದು ಲಕ್ನೋದ ಉನ್ನಾವೊಗೆ ಒಂದು ದಿನದ ಭೇಟಿ ನೀಡುವ ಮೂಲಕ ತಮ್ಮ ಎರಡನೇ ಬಾರಿಯ ರಾಜ್ಯ ಪ್ರವಾಸವನ್ನು ಆರಂಭಿಸಿದ್ದಾರೆ.

2020 ರ ಡಿಸೆಂಬರ್ ಮತ್ತು ಈ ವರ್ಷದ ಏಪ್ರಿಲ್ ನಡುವೆ, ಮಾಜಿ ಮುಖ್ಯಮಂತ್ರಿ 40 ಜಿಲ್ಲೆಗಳಲ್ಲಿ ಪ್ರಚಾರ ನಡೆಸಿದ್ದರು. "ಏಪ್ರಿಲ್‌ನ ಪಂಚಾಯತ್ ಚುನಾವಣೆಗಳ ನಂತರ ರಾಷ್ಟ್ರೀಯ ಅಧ್ಯಕ್ಷರ ಪ್ರವಾಸವು ಪುನರಾರಂಭವಾಗಬೇಕಿತ್ತು. ಆದರೆ ಕೋವಿಡ್ -19 ರ ಎರಡನೇ ಅಲೆಯ ಕಾರಣದಿಂದಾಗಿ ಪಕ್ಷವು ಅದನ್ನು ಸ್ಥಗಿತಗೊಳಿಸಿತು," ಎಂದು ಹಿರಿಯ ಎಸ್‌ಪಿ ಕಾರ್ಯಕರ್ತರೊಬ್ಬರು ಹೇಳಿದರು.

ಯಾದವ್‌ ಈ ಬಾರಿ ಉಳಿದ ಜಿಲ್ಲೆಗಳ ಪ್ರವಾಸವನ್ನು ಪೂರ್ಣಗೊಳಿಸಲಿದ್ದಾರೆ ಎಂದು ಪಕ್ಷ ಹೇಳಿದೆ. ಅಖಿಲೇಶ್ ಯಾದವ್ ತಮ್ಮ ಲೋಕಸಭಾ ಕ್ಷೇತ್ರವಾದ ಅಜಮ್‌ಗಢ, ವಾರಣಾಸಿ, ಗೋರಖ್‌ಪುರ ಮತ್ತು ಬುಂದೇಲ್‌ಖಂಡ್ ಜಿಲ್ಲೆಗಳು ಸೇರಿದಂತೆ ಕೆಲವು ಜಿಲ್ಲೆಗಳಿಗೆ ಕೂಡಾ ಭೇಟಿ ಮಾಡಬಹುದು ಎನ್ನಲಾಗಿದೆ.

Akhilesh Yadav resumes his state tour ahead of UP assembly polls

ಈ ಪ್ರವಾಸಗಳಲ್ಲಿ ಮತದಾನದ ಸಿದ್ಧತೆ ಚರ್ಚೆಗಳು, ರೋಡ್ ಶೋಗಳು, ಸಾರ್ವಜನಿಕ ಸಭೆಗಳು, ಕಿಸಾನ್ ಪಂಚಾಯತ್‌ಗಳು, ಪತ್ರಿಕಾಗೋಷ್ಠಿಗಳು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಸಣ್ಣ ಬೈಸಿಕಲ್ ಸವಾರಿಗಳಿಗಾಗಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡುವುದು ಒಳಗೊಂಡಿರುತ್ತದೆ. ಹಾಗೆಯೇ ಹಿಂದೂ, ಮುಸ್ಲಿಂ ಮತ್ತು ಬೌದ್ಧ ಪೂಜಾ ಸ್ಥಳಗಳಿಗೆ ಭೇಟಿ ನೀಡಿದ್ದರು.

"ಜನರು ಬಿಜೆಪಿಯ ವಿರುದ್ದ ಮತ ಚಲಾಯಿಸಿ, ಸಮಾಜವಾದಿ ಪಕ್ಷವನ್ನು ಮರಳಿ ತರುವ ನಿಟ್ಟಿನಲ್ಲಿ ಈ ಸಭೆ, ರೋಡ್‌ ಶೋಗಳನ್ನು ನಡೆಸಲಾಗುತ್ತಿದೆ," ಎಂದು ಎಸ್‌ಪಿ ರಾಜ್ಯ ವಕ್ತಾರ ಮತ್ತು ಮಾಜಿ ಸಚಿವ ರಾಜೇಂದ್ರ ಚೌಧರಿ ಹೇಳಿದರು.

ಯಾದವ್ ಹೆಚ್ಚಾಗಿ ತಮ್ಮ ದಾಳಿಯನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಯ ಮೇಲೆ ಕೇಂದ್ರೀಕರಿಸಿದ್ದಾರೆ. ಕಾಂಗ್ರೆಸ್ ಅಥವಾ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಆಗಿರಲಿ, ಇತರ ಯಾವುದೇ ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳ ಬಗ್ಗೆ ಮಾತನಾಡುವುದನ್ನು ಯಾದವ್‌ ನಿಲ್ಲಿಸಿದ್ದಾರೆ.

ರಾಜಕೀಯ ಪ್ರತಿಸ್ಪರ್ಧಿಗಳಲ್ಲಿ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ರಾಜ್ಯದಾದ್ಯಂತ ಪ್ರವಾಸ ಮಾಡಿಲ್ಲ. ಆದರೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಹರಾನ್ಪುರ್ ಮತ್ತು ಮಥುರಾ (ಪಂಚಾಯತ್ ಚುನಾವಣೆಗೆ ಮೊದಲು) ಮತ್ತು ಇತ್ತೀಚೆಗೆ ಲಕ್ನೋ ಮತ್ತು ಲಖಿಂಪುರ-ಖೇರಿಯಂತಹ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿದರು.

"ಯಾದವ್‌ ಮತ್ತು ಎಸ್‌ಪಿ ಪಕ್ಷವು ಬಿಜೆಪಿ ವಿರುದ್ಧ ಗೆಲ್ಲಲು ಬಯಸಿದರೆ, ಈಗ ರಸ್ತೆಯಲ್ಲಿ ಇರಬೇಕಾಗಿತ್ತು. ಬೇರೆ ದಾರಿಯಿಲ್ಲ. ಈಗಿನಂತೆ, ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಇರುವ ಪಕ್ಷವಾಗಿದೆ. ಕಠಿಣ ಪರಿಶ್ರಮ ಮತ್ತು ಕೆಲವು ಕಾರ್ಯತಂತ್ರದ ಮೈತ್ರಿಗಳು ಎಸ್‌ಪಿ ಪರವಾಗಿದ್ದರೆ ಹೋರಾಟಕ್ಕೆ ಸಹಾಯ ಮಾಡುತ್ತದೆ," ಎಂದು ಲಕ್ನೋ ವಿಶ್ವವಿದ್ಯಾಲಯದ ರಾಜಕೀಯ ವಿಶ್ಲೇಷಕ ಮತ್ತು ರಾಜಕೀಯ ವಿಜ್ಞಾನ ವಿಭಾಗದ ಮಾಜಿ ಮುಖ್ಯಸ್ಥ ಪ್ರೊಫೆಸರ್ ಎಸ್.ಕೆ. ದ್ವಿವೇದಿ ತಿಳಿಸಿದ್ದಾರೆ.

"2012 ರ ಯುಪಿ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮುಂಚೆ 2011 ರಲ್ಲಿ ಏಕವ್ಯಕ್ತಿ ಕ್ರಾಂತಿ ರಥ ಪ್ರವಾಸವು ಸಾರ್ವಜನಿಕ ಸ್ಮರಣೆಯಲ್ಲಿ ಈಗಲೂ ಇದೆ," ಎಂದು ಹೇಳಿದ್ದಾರೆ. ಎಸ್‌ಪಿ ಪಿತಾಮಹ ಮುಲಾಯಂ ಸಿಂಗ್ ಯಾದವ್ ಈ ಕ್ರಾಂತಿ ರಥ ಅಭಿಯಾನವನ್ನು ಮಾಡಿದ್ದು, ಎಸ್‌ಪಿ ತನ್ನ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿಗೆ ಬಹುಮತದೊಂದಿಗೆ ಗೆದ್ದಿದ್ದಾರೆ. ಅದೂ ಯಾದವ್ 2012 ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು.

(ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+