ಕೊಪ್ಪಳ: ಗನ್ ತೋರಿಸಿ ನಾಲ್ವರು ಗ್ರಾ.ಪಂ. ಸದಸ್ಯರ ಕಿಡ್ನಾಪ್

ಕೊಪ್ಪಳ, ಡಿಸೆಂಬರ್ 31: ಗನ್ ತೋರಿಸಿ ನಾಲ್ವರು ಗ್ರಾಮ ಪಂಚಾಯಿತಿ ಸದಸ್ಯರನ್ನು ಅಪಹರಣ ನಡೆಸಿರುವ ಅಘಾತಕಾರಿ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗುಂದಿಯ ದುರ್ಗಾದೇವಿ ದೇವಾಲಯದ ಬಳಿ ಈ ಘಟನೆ ನಡೆದಿದೆ.

ವೋಟಿಗಾಗಿ ಕಿಡ್ನಾಪ್?

ವಿಜಯಪುರ ಜಿಲ್ಲೆ ಸಿಂದಗಿಯ ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ದಿನ ನಿಗದಿಯಾಗಿತ್ತು. ಈ ಹಿನ್ನಲೆಯಲ್ಲಿ 30 ಸದಸ್ಯರ ತಂಡ ಚಿತ್ರದುರ್ಗ ಪ್ರವಾಸಕ್ಕೆ ಹೊರಟಿತ್ತು.

4 Gram Panchayat members kidnapped by showing Gun

ಮಾರ್ಗಮಧ್ಯದಲ್ಲಿ ದುರ್ಗಾದೇವಿ ದೇವಾಲಯಕ್ಕೆ ಗ್ರಾಮ ಪಂಚಾಯತ್ ಸದಸ್ಯರ ತಂಡ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಅಪರಿಚಿತರು ಗನ್ ಸಹಿತ ದಾಳಿ ನಡೆಸಿ ಬೆದರಿಸಿ ನಾಲ್ವರು ಸದಸ್ಯರನ್ನು ಸಿನಿಮೀಯ ಶೈಲಿಯಲ್ಲಿ ಅಪಹರಣ ಮಾಡಿದ್ದಾರೆ.

ಅಪಹರಣಕ್ಕೊಳಗಾದ ಸದಸ್ಯರು ಶಿವಮ್ಮ, ಶಾರದಮ್ಮ, ಶಶಿಕಲಾ ಹಾಗೂ ಶಿವಣ್ಣ ಎನ್ನಲಾಗಿದೆ. ವೋಟಿಗಾಗಿ ಈ ನಾಲ್ವರು ಸದಸ್ಯರನ್ನು ಅಪಹರಣ ಮಾಡಿರಬಹುದು ಎಂದುಕೊಳ್ಳಲಾಗಿದೆ. ಈ ಸಂಬಂಧ ಇತರ ಸದಸ್ಯರು ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+