ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೌದ್ಧ, ಹಿಂದೂ ಬಿಟ್ಟು ಎಲ್ಲ ನುಸುಳುಕೋರರನ್ನು ಹೊರಗಟ್ಟುತ್ತೇವೆ: ಶಾ

|
Google Oneindia Kannada News

ಡಾರ್ಜಲಿಂಗ್, ಏಪ್ರಿಲ್ 11: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಹಿಂದೂ ಮತ್ತು ಬೌದ್ಧರನ್ನು ಹೊರತುಪಡಿಸಿ ಇನ್ನೆಲ್ಲಾ ನುಸುಳುಕೋರರನ್ನು ದೇಶದಿಂದ ಹೊರಗಟ್ಟುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಜಿಲ್ಲೆಯಲ್ಲಿ ಆಯೋಜಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೊಂದಣಿ) ಅನ್ನು ಇಡೀ ದೇಶದಲ್ಲಿ ಜಾರಿಗೆ ತರಲಾಗುವುದು ಎಂದಿದ್ದಾರೆ.

ಯಲಹಂಕದಲ್ಲಿ ರೋಡ್‌ ಶೋ ಮೂಲಕ ಅಮಿತ್ ಶಾ ಮತಬೇಟೆ ಯಲಹಂಕದಲ್ಲಿ ರೋಡ್‌ ಶೋ ಮೂಲಕ ಅಮಿತ್ ಶಾ ಮತಬೇಟೆ

ಹಿಂದೂ ಮತ್ತು ಬೌದ್ಧ ನುಸುಳುಕೋರರನ್ನು ಗುರುತಿಸಿ ಅವರಿಗೆ ಗುರುತಿನ ಚೀಟಿ ನೀಡಿ ಭಾರತೀಯ ಪ್ರಜೆಗಳಾಗುವಂತೆ ಮಾಡಲಾಗುವುದು, ಉಳಿದ ನುಸುಳುಕೋರರನ್ನು ಗುರುತಿಸಿ ಹೊರಗಟ್ಟಲಾಗುವುದು ಎಂದಿರುವ ಅಮಿತ್ ಶಾ, ನಿರಾಶ್ರಿತರರು ದೇಶಕ್ಕೆ ಹಿಡಿದ ಗೆದ್ದಲದಂತೆ ಎಂದು ಕರೆದಿದ್ದಾರೆ.

We will implement NRC entire country: Amit Shah

ಮಮತಾ ಬ್ಯಾನರ್ಜಿಯ ಮೇಲೂ ಹರಿಹಾಯ್ದಿರುವ ಅಮಿತ್ ಶಾ, ಟಿಎಂಸಿ ಎಂದರೆ ತುಷ್ಟೀಕರಣ, ಮಾಫಿಯಾ ಮತ್ತು ಚಿಟ್‌ಫಂಡ್ ಎಂದು ಹೇಳಿದ್ದಾರೆ. ಮಮತಾ ಅವರು ಎನ್‌ಆರ್‌ಸಿ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ದೆಹಲಿಯಲ್ಲಿ ಅಡ್ವಾಣಿ ಅವರನ್ನು ಭೇಟಿಯಾದ ಅಮಿತ್ ಶಾದೆಹಲಿಯಲ್ಲಿ ಅಡ್ವಾಣಿ ಅವರನ್ನು ಭೇಟಿಯಾದ ಅಮಿತ್ ಶಾ

ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್‌ಗೆ ಮೋದಿ ಸರ್ಕಾರವು ಪಾಕಿಸ್ತಾನದ ವಿರುದ್ಧ ಕೈಗೊಂಡ ಕ್ರಮ ಇಷ್ಟವಾಗಲಿಲ್ಲ, ಅವರ ಮೇಲೆ ನಡೆದ ದಾಳಿ ಇವರಿಗೆ ಬೇಸರ ತಂದಿದೆ ಎಂದು ಹೆಳಿದ ಶಾ, ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 23 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.

English summary
BJP president Amit Shah says we will implement NRC entire country. we will give citizenship to Boudha and Hindu refugees and remove other refugees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X