ನಾಯಿಗಳಿಗಾಗಿಯೇ ಐಷಾರಾಮಿ ಫ್ಲಾಟ್: ಪಾರ್ಥ ಚಟರ್ಜಿ ವಿರುದ್ಧ ಬಿಜೆಪಿ ನಾಯಕಿ ಆರೋಪ
ನವದೆಹಲಿ, ಜುಲೈ. 28: ಶಿಕ್ಷಕರ ನೇಮಕಾತಿ ಹಗರಣ ಪ್ರಕರಣದಲ್ಲಿ ಬಂಧಿತರಾಗಿರುವ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರು ತಮ್ಮ ನಾಯಿಗಳನ್ನು ಸಾಕಲು ಕೋಲ್ಕತ್ತಾದಲ್ಲಿ ಐಷಾರಾಮಿ ಫ್ಲ್ಯಾಟ್ ಹೊಂದಿದ್ದಾರೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಗುರುವಾರ ಆರೋಪಿಸಿದ್ದಾರೆ.
ಶಿಕ್ಷಕರ ನೇಮಕಾತಿ ಹಗರಣ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೌನವನ್ನು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ಪ್ರಶ್ನಿಸಿದ್ದಾರೆ. ಅಮ್ಮ, ಮಾತೆ, ಮನುಷ್ ಬಗ್ಗೆ ಮಾತನಾಡುವವರು ಹಣ, ಹಣ, ಹಣದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ನಗದ ರಾಶಿಗಳು ಪತ್ತೆಯಾಗಿವೆ. ಆದರೆ ಯಾಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೌನವಾಗಿದ್ದಾರೆ ಎಂದು ಲೇಖಿ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬಂಧಿತ ಸಚಿವ ಪಾರ್ಥ ಚಟರ್ಜಿಯ ನಿಕಟವರ್ತಿ ಎಂದು ಪರಿಗಣಿಸಲಾದ ಅರ್ಪಿತಾ ಮುಖರ್ಜಿಗೆ ಸೇರಿದ್ದು ಎನ್ನಲಾದ ಅಪಾರ್ಟ್ಮೆಂಟ್ನಿಂದ 27.9 ಕೋಟಿ ನಗದು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದೆ. ಬೆಲ್ಘಾರಿಯಾದಲ್ಲಿನ ಅಪಾರ್ಟ್ಮೆಂಟ್ನಿಂದ ಬುಧವಾರದಂದು ನಗದು ರಾಶಿಯನ್ನು ವಶಪಡಿಸಿಕೊಳ್ಳಲಾಗಿದ್ದು, ರಾತ್ರಿಯ ಎಣಿಕೆಯ ನಂತರ ಅದು ₹27.90 ಕೋಟಿಯಷ್ಟಿದೆ ಎಂದು ಮಾಹಿತಿ ತಿಳಿದು ಬಂದಿತ್ತು.
2014 ರಲ್ಲಿ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆದ ಪಾರ್ಥ ಚಟರ್ಜಿಯ ಇನ್ನೊಬ್ಬ ಪರಿಚಯಸ್ಥ ಮೊನಾಲಿಸಾ ದಾಸ್ ಇಂದು ಅಲ್ಲಿ ಪ್ರಾಧ್ಯಾಪಕರು ಮತ್ತು ಬಂಗಾಳಿ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಆಕೆಯ ಹೆಸರಿನಲ್ಲಿ 10 ಫ್ಲಾಟ್ ಪೇಪರ್ಗಳಿವೆ. ಅವುಗಳಲ್ಲಿ ಒಂದು ಸೂಪರ್ ಐಷಾರಾಮಿ ಫ್ಲಾಟ್ ಆಗಿದ್ದು, ಪಾರ್ಥ ಚಟರ್ಜಿ ಅಲ್ಲಿ ತನ್ನ ಸಾಕು ನಾಯಿಗಳನ್ನು ಮಾತ್ರ ಸಾಕುತ್ತಾರೆ ಲೇಖಿ ಹೇಳಿದರು.
ಪ್ರಕರಣ ಸಂಬಂಧ ಅರ್ಪಿತಾ ಮುಖರ್ಜಿ ಅವರು ಎರಡು ಹೇಳಿಕೆ ನೀಡಿದ್ದು, ಪಾರ್ಥ ಚಟರ್ಜಿ ಅವರು ತಮ್ಮ ಮನೆಯಲ್ಲಿ ಎಟಿಎಂ ಬಳಸಿದ್ದರು. ಅರ್ಪಿತಾ ಹಣ ಕೆಳಗಿನಿಂದ ಮೇಲಕ್ಕೆ ಹೋಗುತ್ತಿತ್ತು. ಇಲ್ಲಿ ಯಾರು ಕೆಳಗಿದ್ದಾರೆ, ಆದರೆ ಯಾರು ಮೇಲಿನವರು ಎಂದು ಗೊತ್ತಾಗಬೇಕು. ಅದು ಸಹ ಮುಂಚೂಣಿಗೆ ಬರಬೇಕು ಎಂದು ಅವರು ಹೇಳಿದರು.

ಮತ್ತೆ ಹಣ ಮತ್ತು ಚಿನ್ನ ಪತ್ತೆ
ತನಿಖಾಧಿಕಾರಿಗಳು ಇನ್ನೂ ಚಿನ್ನಾಭರಣಗಳ ಮೌಲ್ಯವನ್ನು ಪರಿಶೀಲಿಸುತ್ತಿದ್ದಾರೆ. ಇದು ಕೆಜಿಯಷ್ಟು ಎಂದು ನಂಬಲಾಗಿದೆ. ದಕ್ಷಿಣ ಕೋಲ್ಕತ್ತಾದ ಟೋಲಿಗಂಜ್ ಪ್ರದೇಶದಲ್ಲಿ ಮುಖರ್ಜಿ ಅವರ ಮತ್ತೊಂದು ಫ್ಲಾಟ್ನಿಂದ ₹ 21 ಕೋಟಿಗೂ ಹೆಚ್ಚು ನಗದು, ಆಭರಣ ವಶಪಡಿಸಿಕೊಂಡ ಐದು ದಿನಗಳ ನಂತರ ಹಣ ಮತ್ತು ಚಿನ್ನ ಪತ್ತೆಯಾಗಿದೆ. ಬಳಿಕ ಅವರನ್ನು ಬಂಧಿಸಲಾಗಿದೆ.

ಸಚಿವ ಸ್ಥಾನದಿಂದ ತೆಗೆದುಹಾಕಬೇಕಲು ಸಲಹೆ
ಒಟ್ಟಾರೆಯಾಗಿ ಇದುವರೆಗೆ ಸುಮಾರು ₹ 50 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ವಕ್ತಾರ ಕುನಾಲ್ ಘೋಷ್ ಅವರು ಪಕ್ಷಕ್ಕೆ ತಮ್ಮ ಸಲಹೆಯನ್ನು ಟ್ವೀಟ್ ಮಾಡಿ, ಪಾರ್ಥ ಚಟರ್ಜಿ ಅವರನ್ನು ಪಕ್ಷದಿಂದ ಹೊರಹಾಕಬೇಕು ಮತ್ತು ಸಚಿವ ಸ್ಥಾನದಿಂದ ತೆಗೆದುಹಾಕಬೇಕು ಎಂದು ಹೇಳಿದ್ದರು.

ನನ್ನನ್ನು ತೆಗೆದುಹಾಕುವ ಹಕ್ಕು ಪಕ್ಷಕ್ಕೆ ಇದೆ
ಪಾರ್ಥ ಚಟರ್ಜಿ ಅವರನ್ನು ಸಚಿವ ಸಂಪುಟದಿಂದ ಮತ್ತು ಪಕ್ಷದ ಎಲ್ಲಾ ಹುದ್ದೆಗಳಿಂದ ಕೂಡಲೇ ವಜಾಗೊಳಿಸಬೇಕು. ಆವರನ್ನು ಹೊರಹಾಕಬೇಕು. ಈ ಹೇಳಿಕೆಯನ್ನು ತಪ್ಪೆಂದು ಪರಿಗಣಿಸಿದರೆ, ನನ್ನನ್ನು ಎಲ್ಲಾ ಹುದ್ದೆಗಳಿಂದ ತೆಗೆದುಹಾಕುವ ಎಲ್ಲ ಹಕ್ಕು ಪಕ್ಷಕ್ಕೆ ಇದೆ. ನಾನು ಟಿಎಂಸಿಯ ಸೈನಿಕನಾಗಿ ಮುಂದುವರಿಯುತ್ತೇನೆ ಎಂದು ಕುನಾಲ್ ಘೋಷ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ವೈಯಕ್ತಿಕ ವಿಷಯವನ್ನು ಅಳಿಸುತ್ತಿದ್ದೇನೆ: ಕುನಲ್ ಘೋಷ್
ಬಳಿಕ ಅವರು ತಮ್ಮ ಪೋಸ್ಟ್ ಅನ್ನು ಅಳಿಸಿದ್ದರು. ಈ ವಿಷಯವನ್ನು ಚರ್ಚಿಸಲು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸಭೆಯನ್ನು ಕರೆದಿದ್ದಾರೆ ಎಂದು ಹೇಳಿದರು. ಆದ್ದರಿಂದ ಟಿಎಂಸಿ ಈ ವಿಷಯವನ್ನು ಕೈಗೆತ್ತಿಕೊಂಡಿರುವುದರಿಂದ, ನಾನು ವೈಯಕ್ತಿಕ ವಿಷಯವನ್ನು ಅಳಿಸುತ್ತಿದ್ದೇನೆ ಎಂದು ಅವರು ಹೇಳಿದರು. ಬಿಸ್ವಜಿತ್ ದೇಬ್, ಟಿಎಂಸಿ ಶಾಸಕರು ಮತ್ತು ವಕ್ತಾರರು ಸಹ ಘೋಷ್ ಅವರ ಸಲಹೆಯನ್ನು ಬೆಂಬಲಿಸಿದರು.












Click it and Unblock the Notifications