ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾಳದಲ್ಲಿ ರಥಯಾತ್ರೆ ಆದೇಶಕ್ಕೆ ತಡೆ: ಬಿಜೆಪಿಗೆ ಹಿನ್ನಡೆ

|
Google Oneindia Kannada News

ಕೋಲ್ಕತಾ, ಡಿಸೆಂಬರ್ 20: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪೂರ್ವ ಪ್ರಚಾರಕ್ಕಾಗಿ ರಥ ಯಾತ್ರೆ ನಡೆಸುವ ಬಿಜೆಪಿಯ ಬಯಕೆಗೆ ಹಿನ್ನಡೆಯಾಗಿದೆ.

ಮಮತಾ ಸರ್ಕಾರಕ್ಕೆ ಮುಖಭಂಗ: ರಥಯಾತ್ರೆ ನಡೆಸಲು ಬಿಜೆಪಿಗೆ ಅನುಮತಿಮಮತಾ ಸರ್ಕಾರಕ್ಕೆ ಮುಖಭಂಗ: ರಥಯಾತ್ರೆ ನಡೆಸಲು ಬಿಜೆಪಿಗೆ ಅನುಮತಿ

ಮೂರು ದಿನ ರಥಯಾತ್ರೆ ನಡೆಸಲು ಬಿಜೆಪಿಗೆ ಕಲ್ಕತ್ತಾ ಹೈಕೋರ್ಟ್ ಗುರುವಾರ ಅನುಮತಿ ನೀಡಿತ್ತು. ಆದರೆ, ಮಮತಾ ಬ್ಯಾನರ್ಜಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಶುಕ್ರವಾರ ಪರಿಗಣಿಸಿದ ಹೈಕೋರ್ಟ್ ವಿಭಾಗೀಯ ಪೀಠ, ಕೋರ್ಟ್‌ನ ಹಿಂದಿನ ಆದೇಶವನ್ನು ಪಕ್ಕಕ್ಕಿರಿಸಿದೆ.

ಲೋಕಸಭೆಗೆ ಬಿಜೆಪಿಗೆ ಕೌಂಟ್ ಡೌನ್ ಶುರುವಾಗಿದೆ: ಮಮತಾ ಬ್ಯಾನರ್ಜಿಲೋಕಸಭೆಗೆ ಬಿಜೆಪಿಗೆ ಕೌಂಟ್ ಡೌನ್ ಶುರುವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಮೇಲ್ಮನವಿ ಅರ್ಜಿಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇಬಶಿಶ್ ಕರಗುಪ್ತ ಮತ್ತು ನ್ಯಾಯಮೂರ್ತಿ ಶಂಪಾ ಸರ್ಕಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶವನ್ನು ತಿರಸ್ಕರಿಸಿತು.

setback for bjp rath yatra in west bengal mamata banerjee culcutta high court

ಹಿಂದಿನ ಆದೇಶದಲ್ಲಿ ವಾಸ್ತವಾಂಶಗಳನ್ನು ಆಧರಿಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ಮಮತಾಗೆ ಬಿಜೆಪಿ ಭಯ, ರಥಯಾತ್ರೆ ತಡೆಯಲು ಸಾಧ್ಯವಿಲ್ಲ: ಅಮಿತ್ ಶಾ ಮಮತಾಗೆ ಬಿಜೆಪಿ ಭಯ, ರಥಯಾತ್ರೆ ತಡೆಯಲು ಸಾಧ್ಯವಿಲ್ಲ: ಅಮಿತ್ ಶಾ

ಹೈಕೋರ್ಟ್‌ನ ಏಕಸದಸ್ಯ ಪೀಠ ಗುರುವಾರ, ರಥಯಾತ್ರೆಯಿಂದ ರಾಜ್ಯದಲ್ಲಿ ಕೋಮುಗಲಭೆ ಉಂಟಾಗಬಹುದು ಎಂಬ ಮಮತಾ ಬ್ಯಾನರ್ಜಿ ಸರ್ಕಾರದ ಅಹವಾಲನ್ನು ತಳ್ಳಿ ಹಾಕಿ, ಯಾತ್ರೆ ನಡೆಸಲು ಬಿಜೆಪಿಗೆ ಅನುಮತಿ ನೀಡಿತ್ತು.

English summary
The Culcutta high court divisional bench on Friday set aside a previous order permitting BJP to conduct rallies in West Bengal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X