ಕೋಲಾರ; ಶಿಕ್ಷಕಿ, ಆಶಾ ಕಾರ್ಯಕರ್ತೆ ಬೆದರಿಸಿ ದರೋಡೆ
ಕೋಲಾರ, ಫೆಬ್ರವರಿ 5; ಶಾಲಾ ಶಿಕ್ಷಕಿ ಮತ್ತು ಆಶಾ ಕಾರ್ಯಕರ್ತೆಯನ್ನು ಬೆದರಿಸಿ, ಚಾಕುವಿನಿಂದ ಹಲ್ಲೆ ಮಾಡಿ ದರೋಡೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಮಾಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ಮಾಡುತ್ತಿದ್ದಾರೆ.
ಶುಕ್ರವಾರ ಮಾಲೂರು ತಾಲೂಕಿನ ಹನುಮನಾಯಕನಹಳ್ಳಿ ಬಳಿ ಈ ಘಟನೆ ನಡೆದಿದೆ. ಯಶವಂತಪುರ ಸರ್ಕಾರಿ ಶಾಲೆಯ ಶಿಕ್ಷಕಿ ರಾಧಾಬಾಯಿ ಮತ್ತು ಆಶಾ ಕಾರ್ಯಕರ್ತೆ ಧನಲಕ್ಷ್ಮೀಯನ್ನು ನಾಲ್ವರು ಅಡ್ಡಗಟ್ಟಿ ದರೋಡೆ ಮಾಡಿದ್ದಾರೆ.
ಮಧ್ಯರಾತ್ರಿ ಆಟೋ ಓಡಿಸಿಕೊಂಡು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ ಆಶಾ ಕಾರ್ಯಕರ್ತೆ
ಶಿಕ್ಷಕಿ ಮತ್ತು ಆಶಾ ಕಾರ್ಯಕರ್ತೆ ಬೈಕ್ನಲ್ಲಿ ಯಶವಂತಪುರಕ್ಕೆ ಹೋಗುವಾಗ ನಾಲ್ವರು ಅಪರಿಚಿತರು ಹನುಮನಾಯಕನಹಳ್ಳಿ ಬಳಿ ಅಡ್ಡಗಟ್ಟಿದ್ದಾರೆ. ಬೆದರಿಸಿ ಶಿಕ್ಷಕಿ ರಾಧಾಬಾಯಿ ಮಾಂಗಲ್ಯ ಕಸಿದು ಪರಾರಿಯಾಗಿದ್ದಾರೆ.
ಮುತ್ತೂಟ್ ದರೋಡೆ: 24 ಗಂಟೆಯಲ್ಲಿ 7 ಮಂದಿ ಸೆರೆ, 10 ಕೋಟಿ ವಶ
ರಾಧಾಬಾಯಿ ದರೋಡೆಗೆ ಅಡ್ಡಿಪಡಿಸಿದ್ದಾರೆ. ಆಗ ಇಬ್ಬರ ಮೇಲೆಯೂ ಮಾರಣಾಂತಿಕ ಹಲ್ಲೆಯನ್ನು ನಡೆಸಿದ್ದಾರೆ. ಚಾಕುವಿನಿಂದ ಧನಲಕ್ಷ್ಮೀ ತಲೆ, ಬೆನ್ನಿನ ಭಾಗಕ್ಕೆ ತಿವಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಾಯಾಳುಗಳು ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮುತ್ತೂಟ್ ಫೈನಾನ್ಸ್ ದರೋಡೆ, ಗನ್ ತೋರಿಸಿ 7 ಕೋಟಿ ರೂ. ಜೊತೆ ಎಸ್ಕೇಪ್..!
Recommended Video
ಮಾಲೂರು ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಶಿಕ್ಷಕಿ, ಆಶಾ ಕಾರ್ಯಕರ್ತೆಯಿಂದ ಮಾಹಿತಿ ಪಡೆದರು. ಬಳಿಕ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ದುಷ್ಕರ್ಮಿಗಳಿಗಾಗಿ ಹುಡುಕಾಟವನ್ನು ಮುಂದುವರೆಸಿದ್ದಾರೆ.